ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟಕ್ಕೆ ಅದ್ದೂರಿ ಯ ತೆರೆ

ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಮೇ 04 ರಿಂದ 11 ವರೆಗೆ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟದ ಸಮಾರೋಪ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ ಸನೋಜ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಚೆಯರ್ಮನ್ ವಿ.ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ,ಅಬ್ದುಲ್ ವಹಾಬ್,ಮುಹಮ್ಮದ್ ಇಬ್ರಾಹಿಂ,ಯು.ಕೆ ಯೂಸುಫ್, ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯೂ,ರಾಜ್ಯ ಸಮಿತಿ ಸದಸ್ಯ ಕೆ. ಸಬೀಶ್, ಜಿಲ್ಲಾ ಜತೆ…

Read More

ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ

ಮಂಜೇಶ್ವರ : ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ ನಡೆಯಿತು.ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಡೆದ ಮಹಾ ಸಭೆಯನ್ನು ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಆರಿಫ್ ಮಚ್ಚಂಪ್ಪಾಡಿ, ಅಬ್ದುಲ್ ರಹ್ಮಾನ್ ಪಾರಕಟ್ಟ, ಸಾಯಿಭದ್ರ ರೈ, ಸಲಾಂ ವರ್ಕಾಡಿ, ರತನ್ ಹೊಸಂಗಡಿ, ರವಿ ಪ್ರತಾಪ ನಗರ, ದೀಪಕ್ ರಾಜ್ ಉಪ್ಪಳ ಮೊದಲಾದವರು ಮಾತನಾಡಿದರು. ನೂತನ ವರ್ಷದ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಲಾಂ…

Read More

ಉದ್ಯಾವರ ಶ್ರೀ ಅರಸು ಮಂಜಿಷ್ಲಾರ್ ದೈವಗಳ ವರ್ಷಾವಧಿ ಉತ್ಸವಕ್ಕೆ ಸಂಭ್ರಮದ ಸಮಾಪ್ತಿ.

ಕಳೆದ ನಾಲ್ಕು ದಿನಗಳಲ್ಲಾಗಿ ನಡೆದ ಉತ್ಸವ ಭಾನುವಾರದಂದು ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂಡಿತು. ಈ ಸಲ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾರೀ ಜನಸ್ತೋಮವೇ ಕಂಡು ಬಂತು. ಧ್ವಜರೋಹಣದ ಮರುದಿವಸ ನಡೆದ ಯಕ್ಷಗಾನ ತಾಳಮದ್ದಳೆ, ಸಂಗೀತ ರಸಮಂಜರಿ ಬಳಿಕ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ ವೀಕ್ಷಿಸಲು ಉಭಯ ರಾಜ್ಯಗಳ ನಾನಾ ಕಡೆಗಳಿಂದ ಭಕ್ತರ ಸಾಗರವೇ ಹರಿದು ಬಂದಿತ್ತು. ಅದೇ ರೀತಿ ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ…

Read More

ಸ್ಥಳೀಯಾಡಳಿತ ಚುನಾವಣೆ:ಯುವಕರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಆಲೋಚನೆ.

ಕಾಸರಗೋಡು : ಮುಂಬರುವ ತ್ರಿಸ್ತರ ಪಂಚಾಯತಿ ಚುನಾವಣೆಯಲ್ಲಿ ಯುವ ಸಮೂಹಕ್ಕೆ ಆದ್ಯತೆ ನೀಡಿ ಪಕ್ಷದ ಪುನರ್ ಸಂಘಟನೆ ಮಾಡಿ ಎಲ್ಲಾ ಕಡೆ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಪಕ್ಷ ಪ್ರತ್ಯೇಕ ಕಾರ್ಯಯೋಜನೆಯನ್ನು ಮಾಡಿದೆ. ತಳಮಟ್ಟದಿಂದಲೇ ಪಕ್ಷವನ್ನು ಪುನರ್ ಸಂಘಟಿಸಿ ಚುನಾವಣೆ ಎದುರಿಸಲು ಪ್ರದೇಶ್ ಕಾಂಗ್ರೆಸ್ ಸಮಿತಿಯ ನೂತನ ಸಮಿತಿ ನಿರ್ಧರಿಸಿದೆ. ಇದರ ಅಂಗವಾಗಿ ಕೆಪಿಸಿಸಿಯ ಉಪಾಧ್ಯಕ್ಷರು ಸಹಿತ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೂತನ ನೇಮಕಾತಿ ಮಾಡುವ ಬಗ್ಗೆ ಪಕ್ಷ ಚಿಂತಿಸಿದೆ. ಕಾಸರಗೋಡು ಸಹಿತ ಎಂಟು ಜಿಲ್ಲೆಗಳಲ್ಲಿ…

Read More

ಪಾಕ್ ಜತೆ ಸಂಘರ್ಷ : ಕಾಸರಗೋಡಿನಲ್ಲಿ ಕಟ್ಟೆಚ್ಚರ, ಸೀತಾಂಗೋಳಿ ಎಚ್.ಎ.ಎಎಲ್ ಸಹಿತ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಬಿಗಿ ಭದ್ರತೆ, ಕಂಟ್ರೋಲ್ ರೂಂ ಕಾರ್ಯಾರಂಭ

ಜಿಲ್ಲೆಯಲ್ಲಿರುವಸೀತಾಂಗೋಳಿಯ ಎಚ್.ಎ.ಎಲ್. ಕಾರ್ಖಾನೆ, ಪೆರಿಯ ದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಸಿಪಿಸಿಆರ್ ಐ ಗೆ ಕೇಂದ್ರ ನಿರ್ದೇಶನದಂತೆ ಭದ್ರತಾ ಕಾವಲು ಏರ್ಪಡಿಸಲಾಗಿದೆ ಅಲ್ಲದೇ ವಿದೇಶಿಯರು ಸಹಿತ ಪ್ರವಾಸ ಬಂದು ವಾಸಿಸುವ ಟೂರಿಸ್ಟ್ ಹೋಟೆಲ್ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಭದ್ರತೆ ಒದಗಿಸಲಾಗಿದೆ.ಅಲ್ಲದೇ ರೈಲ್ವೇ ನಿಲ್ದಾಣ, ರೈಲ್ವೇಹಳಿ, ಕರಾವಳಿ ತೀರಪ್ರದೇಶದ ಮೇಲೆ ವಿಶೇಷ ಕಣ್ಣಾವಲು ಇರಿಸಲಾಗಿದೆ. ಮುನ್ನೆಚ್ಚರಿಕೆಯಂಗವಾಗಿ ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಗೃಹಖಾತೆ ಕಾರ್ಯದರ್ಶಿಗೆ ಇದರ ಹೊಣೆ ವಹಿಸಲಾಗಿದೆ.

Read More

ಮಲಪ್ಪುರಂನಲ್ಲಿ ಮತ್ತೆ ನಿಪಾ ವೈರಸ್.ಸಂಪರ್ಕ ಪಟ್ಟಿಯಲ್ಲಿ 49 ಮಂದಿ, ಮೂಲವನ್ನು ಕಂಡುಹಿಡಿಯಲು ಜಂಟಿ ಪರೀಕ್ಷೆ; ಆರೋಗ್ಯ ಸಚಿವೆ ವೀಣಾ ಜಾರ್ಜ್ ಭರವಸೆ.

ಮಲಪ್ಪುರಂನ ವಲಂಚೇರಿಯಲ್ಲಿ ನಿಪಾ ವೈರಸ್ ಇರುವುದು ದೃಢಪಟ್ಟಿದೆ.ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅವರನ್ನು ಪೆರಿಂಥಲ್ಮನ್ನ ಇಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಗೆ ಸೂಕ್ತ ವಾದ ಔಷಧವನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು. ಸಂಪರ್ಕ ಪಟ್ಟಿಯಲ್ಲಿ 49 ಮಂದಿ. ಈ ಪ್ರದೇಶದಲ್ಲಿ 6 ಜನರಿಗೆ ಸಾದಾರಣ ಲಕ್ಷಣಗಳು ಕಂಡುಬಂದಿವೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. 45 ಜನರು ಹೆಚ್ಚಿನ ಅಪಾಯದ ವರ್ಗದಲ್ಲಿದ್ದಾರೆ. ಈ ಪೈಕಿ 12 ಮಂದಿ ಮನೆಯಲ್ಲಿದ್ದಾರೆ. ರೋಗಲಕ್ಷಣಗಳನ್ನು ಹೊಂದಿರುವ…

Read More

ಧ್ವಜಾರೋಹಣದೊಂದಿಗೆ ನಾಂದಿಯಾದ ಉದ್ಯಾವರ ಮಾಡ ಜಾತ್ರಾ ಆಯನ.

ಮಂಜೇಶ್ವರ. ಇತಿbಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಟಾ ರ್ ಕ್ಷೇತ್ರದ ವರ್ಷಾವಧಿ ಉತ್ಸವ ಮತ್ತು ಐತಿಹಾಸಿಕ ಬಂಡಿ ಉತ್ಸವದ ಆಯನವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ನಿನ್ನೆ ರಾತ್ರಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿಗಳು, ಕ್ಷೇತ್ರದ ಆಚಾರ ಕೋಲಪಟ್ಟವರು, ಗಡಿ ಪ್ರಧಾನರು, ಗುರಿಕಾರರು, ಹತ್ತು ಸಮಸ್ತರು, ಆಡಳಿತ ಸಮಿತಿ ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಧಾರ್ಮಿಕತೆಯೊಂದಿಗೆ ಮತಸೌಹಾರ್ದತೆಗೆ ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರದಲ್ಲಿ ಮೇ 14…

Read More

ಮಂಜೇಶ್ವರದ ಮಚ್ಚೆಂಪಾಡಿಯಲ್ಲಿ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ ಶಿಲನ್ಯಾಸ

ಮಂಜೇಶ್ವರ : ಮಂಜೇಶ್ವರ ಪಂಚಾಯತು ವ್ಯಾಪ್ತಿಯ ಮಚ್ಚಂಪಾಡಿಯಲ್ಲಿ ಮಹಿಳಾ ಮತ್ತು ಮಕ್ಕಳಿಗಾಗಿ ಮಂಜೇಶ್ವರ ಗ್ರಾಮ ಪಂಚಾಯತಿನ ಅನುಮತಿ ಮೇರೆಗೆ KDB ವತಿಯಿಂದ ಸುಮಾರು 34 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸ್ಮಾರ್ಟ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸವನ್ನು ಪಂಚಾಯತು ಅಧ್ಯಕ್ಷೆ ಜೀನ್ ಲೆವಿನೋ ಮೊಂತೆರೋ ನಿರ್ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಕ್ ಎಂ ಅಧ್ಯಕ್ಷ ತೆ ವಹಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳಾದ ಕಮಲಾಕ್ಷಿ , ಯಾದವ ಬಡಾಜೆ,ಮುಂತಾಸ್ ಸಮೀರ,ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬೀನಾ ಕೆ,…

Read More

ಪಳ್ಳಿಕೆರೆ ದೇವರ ಮನೆ ಶ್ರೀ ರವಳನಾಥ ಅಮ್ಮನವರ ಮಹಿಷಾ ಮರ್ದಿನಿ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಚಂಡಿಕಾಯಾಗ ಪೂರ್ಣ.

ಕಾಸರಗೋಡಿನ ಪಳ್ಳಿಕೆರೆ ಶಕ್ತಿನಗರ ದೇವರಮನೆ ಶ್ರೀ ರವಳನಾಥ ಅಮ್ಮನವರು ಮಹಿಷಮರ್ದಿನೀ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದಲ್ಲಿ ಬ್ರಮ್ಮಕಲಶೋತ್ಸವ ಮತ್ತು ಸಹಸ್ರ ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಂದ ಬ್ರಮ್ಮ ಶ್ರೀ ಕುಂಟಾರು ಶ್ರೀ ರವೀಶ್ ತಂತ್ರಿ ಗಳ ನೇತೃತ್ವ ದಲ್ಲಿ ಸಂಪನ್ನ ಗೊಂಡಿತು. ಮೇ 1 ರ ಗುರುವಾರ ಬೆಳಿಗ್ಗೆಗಣಪತಿ ಹೋಮದ ನಂತರ ವೃಷಭ ಲಗ್ನ ದಲ್ಲಿ ಶ್ರೀ ದೇವರಿಗೆ ಬ್ರಮ್ಮಕಲಾಶಭಿಷೇಕ ನಡೆಯಿತು.ಮೇ 2 ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ವಿವಿಧ…

Read More

ಉದ್ಯಾವರ ಮಾಡ ಕ್ಷೇತ್ರ ಮಹಾದ್ವಾರ ಲೋಕಾರ್ಪಣೆ

ಇತಿಹಾಸ ಪ್ರಸಿದ್ಧ ಉದ್ಯಾವರ ಮಾಡ ಕ್ಷೇತ್ರದ ಮಹಾದ್ವಾರ ಇಂದು ಲೋಕಾರ್ಪಣೆ ಗೊಂಡಿದೆ. ಈ ಮೊದಲು ಇದ್ದ ದ್ವಾರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವುಗೊಂಡಿದ್ದು ನಂತರ ಸುಸಜ್ಜಿತ ದ್ವಾರದ ಬಗ್ಗೆ ಭಕ್ತರು ಒಲವು ವ್ಯಕ್ತಪಡಿಸಿದ್ದರು.ಈ ಪ್ರಕಾರವಾಗಿ ಸರ್ವರ ಸಹಕಾರದಿಂದ ಕೊಡುಗೈ ದಾನಿ ಕೇಶವ ಶಂಕರ ಆಳ್ವರು ದ್ವಾರದ ವೆಚ್ಚವನ್ನು ಭರಿಸಿ ಅತ್ಯಾಕರ್ಷಣೆಯಾದ ದ್ವಾರವನ್ನು ನಿರ್ಮಿಸಿಕೊಟ್ಟರು. ಲೋಕಾರ್ಪಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳು, ಮಾಡ ಕ್ಷೇತ್ರದ ಆಚಾರಕ್ಕೊಳಪಟ್ಟವರು, ದೇವಸ್ವಂ ಬೋರ್ಡ್ನಕಮಿಷನರ್ ಶ್ರೀ ಬಿಜು, ಸಹಾಯಕ ಕಮಿಷನರ್…

Read More
error: Content is protected !!