ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜಿನ ಪ್ರಥಮ ಬಿ.ಎ.ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿ ಪಾಣತ್ತೂರು ಕಣ್ಣಿಮೇಡ್ ನಿವಾಸಿ ಪಿ.ಡಿ.ಅಭಿಷೇಕ್(20)ಎಂಬಾತ ಆತ್ಮಹತ್ಯೆ ನಡೆಸಿದ ಯುವಕ.ವಿದ್ಯಾನಗರದ ಸರಕಾರಿ ಕಾಲೇಜ್ ಹಾಸ್ಟೆಲಿನಲ್ಲಿ ಸಹ ವಿದ್ಯಾರ್ಥಿಗಳು ಇಂದು ಮುಂಜಾನೆ ಫೋನ್ ಕರೆ ಮಾಡಿದರೂ ತೆಗೆಯದಿದ್ದಾಗ ಅವರು ಈತನ ಕೋಣೆಯ ಕಿಟಿಕಿ ಸರಿಸಿ ನೋಡಿದರು. ಈ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೈ ಮಾಡಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಯಿತು. ಕೂಡಲೇ ಕಾಲೇಜು ಅಧಿಕೃತರು ನೀಡಿದ ಮಾಹಿತಿಯಂತೆ ವಿದ್ಯಾನಗರ ಪೋಲೀಸರು ಆಗಮಿಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಆತ್ಮಹತ್ಯೆಗೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.