ಸುಲ್ತಾನ್ ಬತ್ತೇರಿ ಆಟೋ ನಿಲ್ದಾಣಕ್ಕೆ ನೇತ್ರಾವತಿ ಲೈನ್ಸ್ನಿಂದ ಕುಡಿಯುವ ನೀರಿನ ಸೌಲಭ್ಯ: ಸೇವಾ ಮನೋಭಾವಕ್ಕೆ ಶ್ಲಾಘನೆ
ಪಲ್ಗುಣಿ ನದಿ ಹರಿಯುತ್ತಿರುವ ಇತಿಹಾಸ ಪ್ರಸಿದ್ಧ ಸುಲ್ತಾನ್ ಬತ್ತೇರಿ ಪ್ರದೇಶದ ಆಟೋರಿಕ್ಷಾ ನಿಲ್ದಾಣಕ್ಕೆ ನೇತ್ರಾವತಿ ಲೈನ್ಸ್ ನವರು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಮೂಲಕ ಈ ನದಿ ಕಿನಾರೆಯಲ್ಲಿ ಕೂಡ ನೇತ್ರಾವತಿ ಮತ್ತು ಪಲ್ಗುಣಿಯ ಸಂಗಮವನ್ನು ನೆನಪಿಸಿದ್ದಾರೆ ಎಂದು ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ Shenoy ಅವರು ಅಭಿಪ್ರಾಯ ಪಟ್ಟರು . ಅವರು ಈ ಕೊಡುಗೆಯನ್ನು ಉದ್ಘಾಟಿಸಿ ರಿಕ್ಷಾ ಚಾಲಕರು ನೀಡುವ ಸೇವೆ ಅನನ್ಯವಾದದು ಎಂದು ಹೇಳಿದರು ,ನೇತ್ರಾವತಿ ಕ್ಲಬ್ಬಿನ ಅಧ್ಯಕ್ಷ ವಿನಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು…