ಬಹುವರ್ಷಗಳ ಬೇಡಿಕೆ ಈಡೇರಿಕೆ: ಅನಧಿಕೃತ ಬಡಾವಣೆ ಸಕ್ರಮ, ಮನೆ ನಿರ್ಮಾಣಕ್ಕೆ ದಾರಿ ತೆರೆದಿತು
ಪುತ್ತೂರು; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜಾಗವನ್ನು ಕಟ್ ಮಾಡಿ ಕೃಷಿಯೇತರ ವಿಚಾರಗಳಿಗೆ ಬಳಕೆ ಮಾಡಿಕೊಂಡಿರುವ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗುವಂತೆ ರಾಜ್ಯ ಸರ್ಕಾರ ಇದೀಗ ಅನಧಿಕೃತ ಬಡಾವಣೆಗಳನ್ನು ಸಕ್ರಮೀಕರಿಸುವ ಮೂಲಕ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ನೀಡುವ ಮಹತ್ವದ ಕೆಲಸ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೨೦೨೪ರ ಸೆಪ್ಟಂಬರ್ ೧೦ರ ಮೊದಲು ರಚಿಸಲಾದ ಅಕ್ರಮ ಬಡಾವಣೆಗಳನ್ನು ರಾಜ್ಯ ಸರ್ಕಾರ ಅಕ್ರಮಗೊಳಿಸಲು ಮುಂದಾಗಿದೆ….