Avatar

Rashmitha Acharya

ಜಂಟಿ ಸರ್ವೇಗೆ ನಡೆಸಿ ವರದಿ ನೀಡುವಂತೆ ಸೂಚನೆ : ನವೆಂಬರ್ ೧೦ ರಿಂದ ಸರ್ವೆ: ಸುಧೀರ್ ಕುಮಾರ್ ಹೇಳಿಕೆ

ಕಡಬ ತಾಲೂಕಿನ ವ್ಯಾಪ್ತಿಯಲ್ಲಿರುವ ಐನೆಕಿದು, ಸುಬ್ರಮಣ್ಯ, ಬಿಳಿನೆಲೆ, ಶಿರಿಬಾಗಿಲು , ಕೊಂಬಾರು, ಕೊಣಾಜೆ , ಐತ್ತೂರು, ನೂಜಿಬಾಳ್ತಿಲ, ರೆಂಜಿಲಾಡಿ, ಶಿರಾಡಿ ಮುಂತಾದ ಹತ್ತು ಗ್ರಾಮಗಳ ಅರಣ್ಯ ಮೀಸಲು ಅರಣ್ಯಗಳ ಜಂಟಿ ಸರ್ವೆ ನಡೆಸಿ ಕ್ರೂಡಿಕೃತ ದಾಖಲೆಗಳನ್ನು ಸಿದ್ದಪಡಿಸಿ ವರದಿ ನೀಡುವಂತೆ ಸರಕಾರ ಆದೇಶ ಮಾಡಿದ್ದು ನವೆಂಬರ್ ೧೦ ರಿಂದ ಜಂಟಿ ಸರ್ವೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕಡಬದಲ್ಲಿ…

Read More

ಸಾಮಾಜಿಕ ಪಿಡುಕನ್ನು ಹೋಗಲಾಡಿಸುವ ಕನಕದಾಸರ ಬರವಣಿಗೆ ಇಂದಿಗೂ ಪ್ರಸ್ತುತ : ದ. ಕ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಜಯಂತಿ ಆಚರಣೆಯು ಮಂಗಳೂರಿನ ತುಳುಭವನದಲ್ಲಿ ನಡೆಯಿತು . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ದರ್ಶನ್ ಹೆಚ್ ವಿ , ಸಾಹಿತ್ಯವನ್ನು ತಿಳಿಯುವುದು ತುಂಬಾನೇ ಮುಖ್ಯವಾಗಿರುತ್ತದೆ . ಅದರಲ್ಲಿ ನಾನಾ ಪ್ರಕಾರಗಳು ಬರುತ್ತದೆ . ಅವುಗಳಲ್ಲಿ ಒಂದು ಪ್ರಕಾರ ದಾಸ ಸಾಹಿತ್ಯ . ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಲೋಕಕ್ಕೆ…

Read More

ಕ್ಲಾಸಿಕ್ ಸಬ್ ಜೂನಿಯರ್ 76 ಕೆಜಿ ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025ರಲ್ಲಿ ಶೆರಿಲ್ ಡಿಸೋಜಾಗೆ ಬೆಳ್ಳಿ ಪದಕ

ಮಂಗಳೂರು: ಕರ್ನಾಟಕ ರಾಜ್ಯ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಪುರುಷ ಮತ್ತು ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025 (ಕ್ಲಾಸಿಕ್ ಮತ್ತು ಎಕ್ಯುಪ್ಪೆಡ್ ) ವಿಭಾಗದಲ್ಲಿ ಸ್ಪರ್ಧೆಯು ಇತ್ತೀಚಿಗೆ ತೊಕ್ಕೊಟ್ಟುವಿನ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿರುವ ಕ್ಲಾಸಿಕ್ ಸಬ್ ಜೂನಿಯರ್ 76 ಕೆಜಿ ವಿಭಾಗವನ್ನು ಪ್ರತಿನಿಧಿಸಿದ ಶೆರಿಲ್ ಡಿಸೋಜಾ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು ಮೆಲ್ವಿನ್ ಡಿಸೋಜಾ ಮತ್ತು ಲೀನಾ ಫೆರ್ನಾಂಡಿಸ್ ಇವರ ಪುತ್ರಿಯಾಗಿದ್ದಾರೆ . ಇವರಿಗೆ ನಾಗುರಿಯ ಗರೋಡಿ…

Read More

ಕ್ಲಾಸಿಕ್ ಜೂನಿಯರ್ 57 ಕೆಜಿ ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025ರಲ್ಲಿ ಮೋಕ್ಷಿತಾ ಬಿ ಗೆ ಬೆಳ್ಳಿ ಪದಕ

ಮಂಗಳೂರು: ಕರ್ನಾಟಕ ರಾಜ್ಯ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಪುರುಷ ಮತ್ತು ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025 (ಕ್ಲಾಸಿಕ್ ಮತ್ತು ಎಕ್ಯುಪ್ಪೆಡ್) ವಿಭಾಗದಲ್ಲಿ ಸ್ಪರ್ಧೆಯು ಇತ್ತೀಚಿಗೆ ತೊಕ್ಕೊಟ್ಟಿನ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಕ್ಲಾಸಿಕ್ ಜೂನಿಯರ್ 57 ಕೆಜಿ ವಿಭಾಗವನ್ನು ಪ್ರತಿನಿಧಿಸಿದ ಸೇಂಟ್ ಆಗ್ನೆಸ್ ಕಾಲೇಜಿನ ಮೋಕ್ಷಿತಾ ಬಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ, ಅವರು ದಿವಂಗತ ಸುರೇಶ್ ಮತ್ತು ಮನೋರಮಾ ಬಿ ಇವರ ಪುತ್ರಿಯಾಗಿದ್ದಾರೆ . ಇವರಿಗೆ ನಾಗುರಿಯ ಗರೋಡಿ ಎಕ್ಸೆಲ್ ಮಲ್ಟಿ ಜಿಮ್‌ನ…

Read More

ಫೆ.21ರಂದು ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಶ್ರೀ ಗುರು ಸಮಾವೇಶ…. !

ಮಂಗಳೂರು:ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳು 1912ರ ಫೆ.21ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದರು.ಈ ಐತಿಹಾಸಿಕ, ಅಪೂರ್ವ ದಿನದ ಹಿನ್ನಲೆಯಲ್ಲಿ 2026ರ ಫೆ.21ರಂದು ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಶ್ರೀ ಗುರು ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಗಳು , ರಾಜಕೀಯ ಮುಖಂಡರೂ ಆದ ಪದ್ಮರಾಜ್ ಆರ್ ಪೂಜಾರಿ ತಿಳಿಸಿದರು . ಅವರು ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ…

Read More

ಪಡುಬಿದ್ರೆ: ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಶವ ಶಾಂಭವಿ ನದಿಯಲ್ಲಿ ಪತ್ತೆ

ಪಡುಬಿದ್ರೆ: ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29 ವ) ಮೃತದೇಹ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಶುಕ್ರವಾರ (ನ.07) ಮುಂಜಾನೆ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ವಾಮಂಜೂರು ತಿರುವೈಲುಗುತ್ತು ಕಂಬಳವನ್ನು ಅತ್ಯಂತ ಶಿಸ್ತುಬದ್ಧ ಕಂಬಳ ಎಂದು ಹೆಸರು ಮಾಡುವಲ್ಲಿ ಪ್ರಮುಖ ಕಾರಣರಾಗಿದ್ದರು. ಬುಧವಾರ ತನ್ನ ಸ್ನೇಹಿತರೊಂದಿಗೆ ಊಟ ಮುಗಿಸಿ ತೆರಳಿದ್ದ ಅವರು…

Read More

ಪತ್ರಕರ್ತ ಗಿರೀಶ್ ಪಿಎಂ ಇವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ….!

ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗಿರೀಶ್ ಪಿಎಂ ಇವರು ಮುಡೇರಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರಧಾನವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳರು ಹಸ್ತಾತರಿಸಿದರು. ಪತ್ರಿಷ್ಠಾನವು ಪ್ರಶಸ್ತಿಯನ್ನು ಮಾಧ್ಯಮ ಮತ್ತು ಸಾಹಿತ್ಯ ಎಂಬ ವಿಭಾಗದಲ್ಲಿ ನೀಡಿರುತ್ತದೆ. ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಸದಸ್ಯರಾದ ಜಗದೀಶ್ ಕೂಡ್ಲು, ಡಾ ವೆಂಕಟರಮಣ ಹೊಳ್ಳ ಸಹಿತ ಮುಂತಾದವರು ಉಪಸ್ಥಿತರಿದ್ದರು.ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ 60 ಸಾಧಕರಿಗೆ ಈ…

Read More

ಜಿಲ್ಲಾ ಬಿಜೆಪಿ ಮುಖಂಡರಿಂದ ವಂದೇ ಮಾತರಂ 150 ವರ್ಷದ ಸಂಭ್ರಮ

ಮಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣಾ ಮಂತ್ರ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶಾದಾದ್ಯಂತ 150 ಕಡೆಗಳಲ್ಲಿ ವಂದೇ ಮಾತರಂ ಗೀತೆಯನ್ನು ಇಂದು ಹಾಡಲಿರುವವರು . ಈ ಸಂಭ್ರಮದ ಪ್ರಯುಕ್ತ ಜಿಲ್ಲಾ ಬಿಜೆಪಿ ಕಛೇರಿಯ ಮುಂದೆ ಬಿಜೆಪಿ ನಾಯರು, ಕಾರ್ಯಕರ್ತರ ಸಮ್ಮುಖದಲ್ಲಿ ಸಾಮೂಹಿಕವಾಗಿ ವಂದೇಮಾತರಂ ಗೀತೆಯನ್ನು ಹಾಡಲಾಯಿತು. ಸಾಮೂಹಿಕ ಗೀತೆಯ ನಂತರ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇಂದು ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿದೆ. ಈ…

Read More

ಇ-ಖಾತಾ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣು:- ಶಾಸಕ ಕಾಮತ್ ಆಕ್ರೋಶ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೊನ್ನೆಯವರೆಗೆ ಇದ್ದ ಬದ್ದ ಅಧಿಕಾರಿಗಳನ್ನೆಲ್ಲಾ ಅವೈಜ್ಞಾನಿಕ ಸಮೀಕ್ಷೆಗೆ ನಿಯೋಜಿಸಿಕೊಂಡ ಪರಿಣಾಮ ಎಷ್ಟೇ ತುರ್ತು ಪರಿಸ್ಥಿತಿಯಿದ್ದರೂ ಸಾರ್ವಜನಿಕರಿಗೆ ಇ-ಖಾತಾ ಲಭಿಸಿರಲಿಲ್ಲ. ಇದೀಗ ಸಮೀಕ್ಷೆ ಮುಗಿದು ಅಧಿಕಾರಿಗಳು ಬಂದಿದ್ದಾರೆ. ಆದರೆ ಸರ್ವರ್ ಇಲ್ಲ ಎನ್ನುತ್ತಿದ್ದು ಸಾರ್ವಜನಿಕರ ತಾಳ್ಮೆಯ ಕಟ್ಟೆಯೊಡೆಯುತ್ತಿದೆ. ಕಳೆದ…

Read More

ನ.9 ರಂದು : ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಸಾಮೂಹಿಕ ಗೋಪೂಜೆ ಹಾಗೂ ಗೋವಿಗಾಗಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ

ಮಂಗಳೂರು : ಗೋವು ನಮ್ಮೆಲ್ಲರ ಸಂಪೂಜ್ಯತೆಯ ಪ್ರತೀಕ, ಮನುಕುಲಕ್ಕೆ ಸದಾ ಉಪಕಾರಿ, ಗೋವಂಶದ ಉಳಿವಿಗಾಗಿ ವಿಶ್ವಹಿಂದೂ ಪರಿಷತ್ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಗೋವುಗಳ ಪಾಲನೆ- ಪೋಷಣೆಯ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ವಿಶ್ವಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಗೋವನಿತಾಶ್ರಯ ಟ್ರಸ್ಟಿನ ಮುಖಾಂತರ ಗೋಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು ಸುಮಾರು 450ಕ್ಕೂ ಹೆಚ್ಚು ದನಕರುಗಳ ಪಾಲನೆ- ಪೋಷಣೆ ಮಾಡುತ್ತಿದ್ದೇವೆ. ಮಂಗಳೂರು ಮಹಾನಗರದಿಂದ 22ಕಿ.ಮೀ. ದೂರದ ಪಜೀರಿನಲ್ಲಿ 11 ಎಕರೆ ವಿಶಾಲ ನಿವೇಶನದಲ್ಲಿ ಈ ಗೋಶಾಲೆ ಇದ್ದು ನಿರ್ಗತಿಕ…

Read More
error: Content is protected !!