ಕಜಂಬು ಜಾತ್ರೋತ್ಸವ ಸಂಪನ್ನ ಹತ್ತೂರುಗಳ ಸಹಸ್ರಾರು ಶಿಶುಗಳನ್ನು ಹರಕೆ ರೂಪದಲ್ಲಿ ಸಮರ್ಪಣೆ… !
ವಿಟ್ಲ:ಮಕ್ಕಳನ್ನುಸಾಂಕೇತಿಕವಾಗಿ ದೇವರಿಗೆ ಹರಕೆ ರೂಪದಲ್ಲಿ ಸಮರ್ಪಿಸುವ ವಿಶಿಷ್ಟ ನಂಬಿಕೆ, ಸಂಪ್ರದಾಯವಿರುವ ಇತಿಹಾಸ ಪ್ರಸಿದ್ಧ ಕೇಪು ಕಜಂಬು ಉತ್ಸವ ಶ್ರೀ ಉಳ್ಳಾಲ್ತಿದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆಯಿತು.ವಿಟ್ಲ ಡೊಂಬ ಹೆಗ್ಗಡೆ ಅರಮನೆಯ ಬಂಗಾರು ಅರಸರು ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ, ದೇವಿಗೆ ಐದು ಸುತ್ತು ಪಲ್ಲಕ್ಕಿ ಬಲಿ ಉತ್ಸವ ನಡೆಯಿತು. ಬಲಿ ಉತ್ಸವದ ಬಳಿಕ ಪ್ರಧಾನ ದೇವಿ ಹಾಗೂ ಪರಿವಾರ ಶಕ್ತಿಗಳಿಗೆ ಪೂಜೆ ನೆರವೇರಿಸಿದ ನಂತರ ಕಜಂಬು ಹರಕೆಗೆ ಚಾಲನೆ ನೀಡಲಾಯಿತು. ಹರಕೆ ಸಲ್ಲಿಸಲ್ಪಡುವ ಮಕ್ಕಳನ್ನು ಜಳಕದ…
