ನವದೆಹಲಿ: ಸುಮಾರು 12,000 ವರ್ಷಗಳ ಬಳಿಕ ಇಥಿಯೋಪಿಯಾದ ಉತ್ತರ ಅಫಾರ್ ಪ್ರದೇಶದ ಹೈಲಿ ಗುಬ್ಬಿ, ಹ್ಯಾಲಾಮುಖಿ ಭಾನುವಾರ ಸ್ಫೋಟಗೊಂಡಿದ್ದು ಅದರ ಬೂದಿ ಮೋಡಗಳು ಗಂಟೆಗೆ 100-120 ಕಿಮೀ ವೇಗದಿಂದ ಭಾರತ ಸೇರಿದಂತೆ ಅನೇಕ ದೇಶಗಳತ್ತ ಸಾಗುತ್ತಿದೆ ಎಂದು ಹವಾಮಾನ ಸಂಸ್ಥೆಗಳು ಎಚ್ಚರಿಸಿಕ ನೀಡಿದೆ.
ಭಾನುವಾರ ಬೆಳಿಗ್ಗೆ ಸಂಭವಿಸಿದ ಸ್ಪೋಟದ ಪರಿಣಾಮವಾಗಿ ಉಂಟಾದ ದಪ್ಪ ಬೂದಿ ಮೋಡಗಳು ಮೊದಲು ಗುಜರಾತ್ ಪ್ರದೇಶವನ್ನು ಪ್ರವೇಶಿಸಿ ನಂತರ ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್ ಕಡೆಗೆ ಚಲಿಸಿವೆ. ಈಗಾಗಲೇ ವಿಷಕಾರಿ ಗಾಳಿಯಿಂದ ಬಳಲುತ್ತಿರುವ ದೆಹಲಿಗೆ ಬೂದಿ ಮೋಡಗಳು ಸೋಮವಾರ ತಡರಾತ್ರಿ ತಲುಪಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಬೂದಿ ಮೋಡಗಳು ಈಗ ಚೀನಾ ದಿಕ್ಕಿಗೆ ಚಲಿಸುತ್ತಿದ್ದು, ಸಂಜೆ 7.30 ರ ವೇಳೆಗೆ IMD ಹೇಳಿಕೆಯಲ್ಲಿ ಉನ್ನತ ಮಟ್ಟದ ಗಾಳಿಯು ಇಥಿಯೋಪಿಯಾದಿಂದ ಕೆಂಪು ಸಮುದ್ರ ಯಮನ್, ಓಮನ್ ಮೂಲಕ ಅರಬ್ಬಿ ಸಮುದ್ರವರೆಗೆ ಬೂದಿ ಮೋಡಗಳನ್ನು ಸಾಗಿಸಿದ್ದು, ಅಲ್ಲಿಂದ ಪಶ್ಚಿಮ ಮತ್ತು ಉತ್ತರ ಭಾರತಕ್ಕೆ ಅವು ತಲುಪಿವೆ” ಎಂದು ತಿಳಿಸಿದೆ.
ವಿಮಾನಯಾನಕ್ಕೆ, ವಾಯುಯಾನಕ್ಕೆ ಕಟ್ಟೆಚ್ಚರ .. !
ಜ್ವಾಲಾಮುಖಿ ಬೂದಿ ಮೋಡಗಳ ಹಿನ್ನಲೆಯಲ್ಲಿ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಮೋಡ ವ್ಯಾಪಿಸಿರುವ ಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ಎಚ್ಚರಿಕೆ ನೀಡಿದೆ ಎಂಜಿನ್ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಅಥವಾ ಕ್ಯಾಬಿನ್ನಲ್ಲಿ ಹೊಗೆ/ವಾಸನ ಕಂಡುಬಂದರೆ ತಕ್ಷಣ ವರದಿ ಮಾಡಲು ಆದೇಶಿಸಿದೆ.
ಹೈಲಿ ಗುಬ್ಬಿ ಬೂದಿ ಮೋಡದ ಪರಿಣಾಮಕ್ಕೆ ಒಳಗಾದ ಪ್ರದೇಶಗಳಲ್ಲಿ ಏರ್ ಇಂಡಿಯಾ 11 ವಿಮಾನಗಳನ್ನು ರದ್ದು ಮಾಡಿದೆ. ರಾದ ವಿಮಾನಗಳಲ್ಲಿ ನ್ಯೂವಾರ್ಕ್ ದಹಲಿ, ನ್ಯೂಯಾರ್ಕ್-ದೆಹಲಿ, ದುಬೈ-ಹೈದರಾಬಾದ್, ದೋಹಾ-ಮುಂಬೈ, ದುಬೈ-ಚೆನ್ನೈ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಮತ್ತು ದೇಶೀಯ ಹಾರಾಟಗಳಿವೆ.
ಇಂಡಿಗೋ ಸಹ ವರಿಸ್ಥಿತಿಯನ್ನು ನಿಜವಾದ ರಿಯಲ್-ಟೈಮ್ ಮಾನಿಟರಿಂಗ್ ಮಾಡುತ್ತಿದ್ದು ಸಂಪೂರ್ಣ ಮುನ್ನೆಚ್ಚರಿಕೆಗಳೊಂದಿಗೆ ಸುರಕ್ಷಿತ ಕಾರ್ಯಾಚರಣೆಗೆ ಸಿದ್ಧ ಎಂದು ಹೇಳಿದೆ. ಸೈಜೆಟ್ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳಿಗೂ ಪರಿಣಾಮ ಬಿದ್ದಿದೆ.
ತಜ್ಞರ ಪ್ರಕಾರ, ಬೂದಿ ಗರಿ ಹೆಚ್ಚಿನ ಪ್ರಮಾಣದ ಸಲ್ಪರ್ ಡೈಆಕ್ರೈಡ್ (SO.) ಹೊಂದಿದ್ದು A01 ಮಟ್ಟದ ಮೇಲೆ ನೇರ ಪರಿಣಾಮ ಕಡಿಮೆ. ಆದರೆ ನೇಪಾಳದ ಬೆಟ್ಟಗಳು ಹಿಮಾಲಯ ಹಾಗೂ ಉತ್ತರ ಪ್ರದೇಶದ ಟೆರೆ ಪ್ರದೇಶದಲ್ಲಿ 50 ಮಟ್ಟ ಏರಿಕೆ ಸಾಧ್ಯತೆಯನ್ನು ಸೂಚಿಸಿದ್ದಾರೆ.
ಅಫಾರ್ ಪ್ರದೇಶದ ಹೈಲಿ ಗುಬ್ಬಿ ಜ್ವಾಲಾಮುಖಿಯಿಂದ 14 ಕಿಲೋಮೀಟರ್ ಎತ್ತರಕ್ಕೆ ದಪ್ಪ ಹೊಗೆ ಏರಿದ್ದು, ಸುತ್ತಮುತ್ತಲಿನ ಅನೇಕ ಹಳ್ಳಿಗಳು ಬೂದಿಯಿಂದ ಆವೃತಗೊಂಡಿನ ರಿಫ್ಟ್ ಕಣಿವೆಯಲ್ಲಿರುವ ಈ ಜ್ವಾಲಾಮುಖಿ ಎರಡು ಟೆಟ್ರೋನಿಕ್ ಪ್ಲೇಟ್ಗಳ ಸಂಧಿ ಪ್ರದೇಶದಲ್ಲಿ ಇರುವುದರಿಂದ ಹೆಚ್ಚಿನ ಭೌಗೋಳಿಕ ಚಟುವಟಿಕೆ ಸಾಮಾನ್ಯ ಮಟ್ಟದಲ್ಲಿದೆ.
ಸ್ಥಳೀಯರು ‘ಹಠಾತ್ ಬಾಂಬ್ ಸಿಡಿದಂತೆ ಭಾರೀ ಶಬ್ದ ಮತ್ತು ಆಘಾತ ತರಂಗ ಅನುಭವಿಸಿದ್ದೇವೆ” ಎಂದು ಸುದ್ದಿಸಂಸ್ಥೆ AP ಗೆ ತಿಳಿಸಿದ್ದಾರೆ. ಸ್ಥಿತೂನಿಯನ್ ಸಂಸ್ಥೆಯ ಜಾಗತಿಕ ಜ್ವಾಲಾಮುಖಿ ಪ್ರಕಟಣೆಯ ಪ್ರಕಾರ ಕೊನೆಯ ಹಿಮಯುಗದ ಕೊನೆಯ ಹಂತವಾದ ಸುಮಾರು 12,000 ವರ್ಷಗಳಿಂದ ಹೈಲಿ ಗುಬ್ಬಿಯಲ್ಲಿ ಯಾವುದೇ ಸ್ಫೋಟ ಸಂಭವಿಸಿರಲಿಲ್ಲ.