ಮಂಜೇಶ್ವರ : ಡಿವೈಡರ್ನಿಂದ ಹೊರಗೆ ಬಂದು ನಿಂತಿದ್ದ ಕಬ್ಬಿಣದ ರಾಡ್ಗೆ ಕಾರು ನೇರವಾಗಿ ಡಿಕ್ಕಿಯಾದ ಪರಿಣಾಮ, ಪ್ರಯಾಣಿಕನ ಕೈಗೆ ಕಬ್ಬಿಣದ ರಾಡ್ ತೂರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯ ಗೊಂಡಿದ್ದಾರೆ.
ಗಾಯಗೊಂಡ ಪಳ್ಳಿಕರ ಮೌವ್ವಲೆಯ ಶೆಬಾಬ್ (24), ಫಯಾದ್ (28) ಎಂಬವರನ್ನು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ಕುಂಬಳೆ ಜುಮಾ ಮಸೀದಿ ಬಳಿ ಸಂಭವಿಸಿದೆ. ಪಳ್ಳಿಕೆರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿವೈಡರ್ನ ಹೊರಗೆ ಬಂದು ನಿಂತಿದ್ದ ಕಾಂಕ್ರೀಟ್ ಕಂಬಿಗೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಡಿವೈಡರ್ನಲ್ಲಿದ್ದ ಕಬ್ಬಿಣದ ರಾಡ್ ಕಾರಿನ ಗಾಜನ್ನು ಮುರಿದು ಕಾರು ಚಾಲಕ ಶೆಬಾಬ್ ಅವರ ಕೈಯಾಳಗೆ ನುಗ್ಗಿದೆ. ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಫಯಾದ್ ಅವರ ಕಾಲು ಕಾರಿನಲ್ಲಿ ಸಿಲುಕಿ ನುಸುಳಿ ಹೋಗಿತ್ತು.
ಬಳಿಕ ಸ್ಥಳೀಯರು ಸೇರಿ ಕಾರನ್ನು ಕತ್ತರಿಸಿ ಇಬ್ಬರನ್ನೂ ಹೊರತೆಗೆದರು. ಬಳಿಕ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.