ದೇಶದಾದ್ಯಂತ ಸಂಚಲನವನ್ನು ಮೂಡಿಸಿದ ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಪ್ರಕರಣ ಸರಿಯಾದ ಕ್ರಮದಲ್ಲಿ ತನಿಖೆ ಆಗಬೇಕೆಂದು ವುಮೆನ್ ಇಂಡಿಯಾ ಮೊಮೆಂಟ್ ನ ರಾಜ್ಯಧ್ಯಕ್ಷರಾದ ಫಾತಿಮಾ ನಸೀಮಾ ನಗರದ ಎಸ್ ಡಿ ಪಿ ಐ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಯಾದ ಸಾಕ್ಷಿಗಳು ಇದ್ದರೂ ಕೂಡ ತನಿಖೆಗಳು ಯಾಕೆ ನಡೆಯುತ್ತಿಲ್ಲ ?!. ಇಲ್ಲಿ ನಡೆದ ಕೊಲೆಯ ಬಗ್ಗೆ ಸರಕಾರ ಸೂಕ್ತ ತನಿಖೆಯನ್ನು ನಡೆಸಬೇಕು. ಲವ್ ಜಿಹಾದ್ ವಿಚಾರವನ್ನು ಪ್ರಶ್ನೆ ಮಾಡುವ ಹಿಂದೂ ನಾಯಕರು ಈ ವಿಚಾರವನ್ನು ಯಾಕೆ ಪ್ರಶ್ನೆ ಮಾಡ್ತಾ ಇಲ್ಲ. ಪೊಲೀಸ್ ಇಲಾಖೆ ಪ್ರತಿಭಟನೆಗೆ ಅವಕಾಶವನ್ನು ನೀಡುತ್ತಾ ಇಲ್ಲ ಈ ಮೂಲಕ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ. ಇದು ನಾನ ಅನುಮಾನಗಳಿಗೆ ಕಾರಣವಾಗ್ತಾ ಇದೆ. ಅಲ್ಲಿ ಹೂತ ಹೆಣಗಳು ಹೊರತೆಗೆದರೆ ಸಾಕ್ಷಿಗಳು ತಾನಾಗಿಯೇ ಸಿಗುತ್ತದೆ. ಈ ಬಗ್ಗೆ ಸಮಗ್ರ ತನಿಖೆಯಾಗಲು ಸರ್ಕಾರದ ಎಸ್ ಐ ಟಿ ತಂಡವನ್ನು ರಚನೆ ಮಾಡಬೇಕು.
ವುಮೆನ್ ಇಂಡಿಯಾ ಮೊಮೆಂಟ್ ಕರಾವಳಿಯಾದದಂತ್ಯ ಮನೆ ಮನೆ ಜನಾಂದೋಲನವನ್ನು ಪ್ರತಿಭಟನೆಯ ರೀತಿ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಸ್ರೀಯ ಬೆಳ್ಳಾರೆ, ರಾಜ್ಯ ಸಮಿತಿಯ ಸದಸ್ಯರಾದ ಜಬಿನಾ ಮೈಸೂರು ಮುಂತಾದವರು ಉಪಸ್ಥಿತರಿದ್ದರು.