ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಜನವರಿ 10 ಶನಿವಾರ 2026 ರಂದು ಮಧ್ಯಾಹ್ನ ಗಂಟೆ 3:30 ರಿಂದ 5:30 ರವರೆಗೆಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
2 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ, 8 ರಿಂದ 10ನೇ ತರಗತಿ, ಹಾಗೂ ಕಾಲೇಜು ವಿಭಾಗ ಈ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧಾಳುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಅಭಿನಂದನಾ ಪತ್ರ ಮತ್ತು ಪದಕ ನೀಡಲಾಗುವುದು.
ಸ್ಪರ್ಧೆಯ ವಿಷಯ :2 ರಿಂದ 4ನೇ ತರಗತಿ (ಸೂರ್ಯೋದಯ) 5 ರಿಂದ 7ನೇ ತರಗತಿ (ವನ್ಯಜೀವಿ),8 ರಿಂದ 10ನೇ ತರಗತಿ / ಪ್ರಕೃತಿ/ ಸಂಸ್ಕೃತಿ ಕಾಲೇಜು ವಿಭಾಗ /ತುಳುನಾಡಿನ/ಪದ್ಧತಿ. ಭಾಗವಹಿಸಲಿರುವ ವಿದ್ಯಾರ್ಥಿಗಳು ಮಧ್ಯಾಹ್ನ 2 : 30 ಕ್ಕೆ ಹಾಜರಿರಬೇಕು.
ಶಾಲಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಡ್ರಾಯಿಂಗ್ ಶೀಟನ್ನು ನೀಡಲಾಗುವುದು ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.
ಸ್ಪರ್ಧಾ ಸಮಯ : 2 : 00 ಗಂಟೆ.ಪ್ರಥಮ ಬಹುಮಾನ : 5000/- ದ್ವಿತೀಯ ಬಹುಮಾನ : 3000/- ನಗದು ತೃತೀಯ ಬಹುಮಾನ : 2000/- ನಗದು
ಜನವರಿ 10 ರಂದು ಶನಿವಾರ ಮಧ್ಯಹ್ನ ಗಂಟೆ 3-30 ರಿಂದ 5-30 ರವರೆಗೆ 2 ನೆಯ ತರಗತಿಯಿಂದ 12 ನೆಯ ತರಗತಿಯವರೆಗೆ ಭಾಗವಹಿಸುವ ಮಕ್ಕಳು ಸ್ಥಳದಲ್ಲಿ ಒಂದು ಗಂಟೆ ಮುಂಚಿತವಾಗಿ ಬಂದು ಕದ್ರಿ ಪಾರ್ಕ್ಲ್ಲಿ ಹೆಸರು ಕೊಡಬೇಕು .