ಸೋಮೇಶ್ವರ ರೈಲು ಗೇಟ್ ಫೆ.19ರಿಂದ 21ರವರೆಗೆ ಬಂದ್

ಉಳ್ಳಾಲ : ತುರ್ತು ಟ್ರ್ಯಾಕ್ ನವೀಕರಣ ಹಾಗೂ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 19ರ ಸಂಜೆ 6.00 ಗಂಟೆಯಿಂದ ಫೆಬ್ರವರಿ 21ರ ಮಧ್ಯಾಹ್ನ 12.00 ಗಂಟೆಯವರೆಗೆ ಉಳ್ಳಾಲ ರೈಲ್ವೆ ನಿಲ್ದಾಣ ಸಮೀಪದ ಸಂಚಾರಕ್ಕೆ ಗೇಟ್ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ದಕ್ಷಿಣ ರೈಲ್ವೆ ಮಂಗಳೂರು ವಿಭಾಗದ ಹಿರಿಯ ಸೆಕ್ಷನ್ ಇಂಜಿನಿಯರ್ (ಪರ್ಮನೆಂಟ್ ವೇ) ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಲಾಖೆ ಪ್ರಕಟಣೆಯಲ್ಲಿ , ಕಿ.ಮೀ. 877/200–300ರಲ್ಲಿ ಇರುವ ಎಲ್.ಸಿ. ನಂ.293 (ಸೋಮೇಶ್ವರ ರೈಲು ಗೇಟ್) ನಲ್ಲಿ ಟ್ರ್ಯಾಕ್ ನವೀಕರಣ ಹಾಗೂ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.ಹಾಗಾಗಿ ಉಳ್ಳಾಲ–ಬೀರಿ ರೈಲು ನಿಲ್ದಾಣಗಳ ಮಧ್ಯೆ ಕಾಮಗಾರಿಯ ಅವಧಿಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

ಸಾರ್ವಜನಿಕರು ಬೀರಿ –ಸಂಕೊಳಿಗೆ–ಉಚ್ಚಿಲ ಲೆವೆಲ್ ಕ್ರಾಸಿಂಗ್–ಬೀಚ್ ರಸ್ತೆ–ಸೋಮೇಶ್ವರ ಹಾಗೂ ಕೋಟೆಕಾರ್–ಕೊಲ್ಯ–ತೊಕ್ಕೊಟ್ಟು–ಒಳಪೇಟೆ ರಸ್ತೆ ಮೂಲಕ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!