ಪಂಚರಾಜ್ಯಗಳ ಚುನಾವಣಾ ಕಹಳೆ ಮೊಳಗಲು ಕ್ಷಣಗಣನೆ! ಕೇರಳದಲ್ಲಿ ಮಾರ್ಚ್ 16 ಅಥವಾ 17 ಕ್ಕೆ ಸಾಧ್ಯತೆ

​ಮಂಜೇಶ್ವರ: ದೇಶದ ರಾಜಕೀಯ ರಂಗದಲ್ಲಿ ಈಗ ತೀವ್ರ ಸಂಚಲನ! ಕೇರಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಬಿಗ್ ಅಪ್‌ಡೇಟ್ ಇಲ್ಲಿದೆ.

​ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚ್ಚೇರಿ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಮಾರ್ಚ್ 15ರ ನಂತರ ಯಾವುದೇ ಕ್ಷಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.
​ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.
​ಈ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಅಂದರೆ ಮಾರ್ಚ್ 16 ಅಥವಾ 17ರಂದು ಕೇಂದ್ರ ಚುನಾವಣಾ ಆಯೋಗವು ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಲಿದೆ.


​ಕೇರಳ, ತಮಿಳುನಾಡು & ಪುದುಚ್ಚೇರಿ: ಈ ಮೂರು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ಮುಗಿಸಲು ಸಿದ್ಧತೆ.
​ಅಸ್ಸಾಂ & ಪಶ್ಚಿಮ ಬಂಗಾಳ: ಇಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಭದ್ರತಾ ದೃಷ್ಟಿಯಿಂದ ಮೂರು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ದಟ್ಟವಾಗಿದೆ.
​ಒಟ್ಟಿನಲ್ಲಿ, ಮಾ. 15ರ ನಂತರ ಇಡೀ ದೇಶದ ಚಿತ್ತ ದಿಲ್ಲಿಯ ಚುನಾವಣಾ ಆಯೋಗದ ಕಚೇರಿಯತ್ತ ನೆಟ್ಟಿರಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!