ಮಂಜೇಶ್ವರ: ಪೊಯ್ಯೇ ಜುಮಾಧಿ ಬಂಟ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕೋತ್ಸವದ ಸಂಭ್ರಮದಿಂದ ಹಾಗೂ ಭಕ್ತಿಭಾವದಿಂದ ನೆರವೇರಿತು.ಕಾರ್ಯಕ್ರಮದಲ್ಲಿ ದೈವಸ್ಥಾನದ ಗೌರವ ಅಧ್ಯಕ್ಷರಾದ ವಿಶ್ವನಾಥ್ ಉಚ್ಚಿಲ್, ಅಧ್ಯಕ್ಷರಾದ ವಿಜಯ ಕುಮಾರ್ ಉಳ್ಳಾಲ್ ಉಪಸ್ಥಿತರಿದ್ದರು.
ಮಾಡ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಲ್ಚಾಡ, ನಾರಾಯಣ ಗುರಿಕಾರ, ಮಾದವ ಮಾಡ, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ನಿಖಿಲ್ ಗುರಿಕಾರ, ವಸಂತ ಉಚ್ಚಿಲ್, ಗಣೇಶ್ ಪಾವೂರು, ಹರೀಶ್ ಬೆಂಗಳೂರು, ಗಂಗಾಧರ ಮಂಗಳೂರು, ಪದ್ಮನಾಭ ಪೊಯ್ಯೇ, ಸೀತಾರಾಮ ಮಜಿಬೈಲ್, ಯಶವಂತ ಉಚ್ಚಿಲ್, ರಾಘವ ಕಣ್ಣೀರ್ ತೋಟ ಸೇರಿದಂತೆ ಹಲವರು ಭಾಗವಹಿಸಿದರು.ಇದಲ್ಲದೆ ತರವಾಡಿನ ಕುಟುಂಬದ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕೈಜೋಡಿಸಿದರು.