ಬ್ಲಾಕ್ ಸ್ಟಾಲೋನ್ಸ್ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ತಲೇಕಲ ಇದರ 10ನೇ ವಾರ್ಷಿಕೋತ್ಸವದ ಪ್ರಯುಕ್ತ
ನಾಯರ್ ಮೂಲೆ ಫ್ಯಾಮಿಲಿ ಅಸೋಸಿಯೇಷನ್ ಕುಟುಂಬ ವೈದ್ಯರಿಂದ ಮೀಯಪದವು ಶಾಲಾವಠಾರದಲ್ಲಿ ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಶಿಬಿರದಲ್ಲಿ ನೂರಾರು ಮಂದಿ ಫಲಾನುಭವಿಗಳು ಪಾಲ್ಗೊಂಡರು.
ಶಿಬಿರವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ನಿವೃತ ಜಿಲ್ಲಾ ನ್ಯಾಯಾಧೀಶ
ಹಾಜಿ ಮೂಸ ಕುಂಞ ನಾಯರ್ ಮೂಲೆ, ಡಾಕ್ಟರ್ ಉಮರ್ ನಾಯರ್ ಮೂಲೆ, ಡಾಕ್ಟರ್ ಎಂ.ಎಸ್ ಮೂಸಬ್ಬ, ಹಾಜಿ ಅಬ್ದುಲ್ ಖಾದರ್ ಹೊಸಮನೆ, ಶ್ರೀಧರ ರಾವ್ ಆರ್.ಎಂ ಅಬ್ದುಲ್ ಹಮೀದ್, ಜ್ಯೋತಿ ರೈ, ಇಬ್ರಾಹಿಂ ಹೊನ್ನಕಟ್ಟೆ, ಇಮ್ಮಿಯಾಜ್ ತಲೇಕಳ ಮೊದಲಾದವರು ಉಪಸ್ಥಿತರಿದ್ದರು.