ಮಂಜೇಶ್ವರ: ಕೇರಳ ಸರಕಾರ ಮಲಯಾಳಂ ಭಾಷೆ ಕಡ್ಡಾಯ ಮಸೂದೆ ಜಾರಿ ಮಾಡಿದಾಗ ಮಂಜೇಶ್ವರ ಶಾಸಕರು ಎಲ್ಲಿ ಇದ್ದರು? ಮಂಜೇಶ್ವರ ಶಾಸಕರು ಪ್ರತಿ ತಿಂಗಳು ವಿದೇಶಕ್ಕೆ ಹೋಗುವ ರಹಸ್ಯ ಏನು? ಮಂಜೇಶ್ವರ ಜನತೆ ಮುಸ್ಲಿಂ ಲೀಗ್ ಶಾಸಕರನ್ನು ಕಳೆದ 40ವರ್ಷ ಗಳಿಂದ ಗೆಲ್ಲಿಸಿದ್ದೀರಿ.
ಆದರೂ ಇಲ್ಲಿನ ಜನತೆ ವಿದ್ಯಾಭ್ಯಾಸ, ಅರೋಗ್ಯ ಉದ್ಯೋಗಕ್ಕೆ ಮಂಗಳೂರನ್ನೇ ಆಶ್ರಯ ಪಡಬೇಕಾದ ಪರಿಸ್ಥಿತಿ. ಎಂದು ಮಂಗಳೂರು ಉತ್ತರ ವಿಧಾನಸಭಾ ಶಾಸಕ ರಾದ ಡಾ ಭಾರತ್ ಶೆಟ್ಟಿ ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ನೇತೃತ್ವ ಸಭೆ ಯಲ್ಲಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಬಿ ಎಂ, ಮುಖಂಡರಾದ ವಿಜಯ ರೈ ಎ ಕೆ ಕಯ್ಯರ್, ತುಳಸಿ ಕುಮಾರಿ, ಸತ್ಯಶಂಕರ್ ಭಟ್, ಸುಬ್ರಮಣ್ಯ ಭಟ್ ಏ.
ಗಣೇಶ್ ಪ್ರಸಾದ್ ಚೇರಲ್, ಭಾಸ್ಕರ್ ಪೊಯ್ಯೇ, ಯತೀಶ್ ಭಂಡಾರಿ ಕೌಡೂರು, ಉಪಸ್ಥಿತರಿದ್ದರು ಯತೀರಾಜ್ ಶೆಟ್ಟಿ ಸ್ವಾಗತಿಸಿ ಕೆ ವಿ ರಾಧಾಕೃಷ್ಣ ವಂದಿಸಿದರು.