ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆ ಯನ್ನು ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇಲ್ಲಿ ಆಚರಿಸಲಾಯಿತು ಯೋಗ ಶಿಕ್ಷಕ ಶ್ರೀ ಪ್ರವೀಣ್ ಪ್ರಥ್ವಿ ಯೋಗ ಕೇಂದ್ರ ಪ್ರತಾಪನಗರ ಇವರು ಯೋಗದ ಬಗ್ಗೆ ಮಾಹಿತಿ ನೀಡಿ ಯೋಗಾಭ್ಯಾಸ ನಡೆಸಿದರು.
ಧಾರ್ಮಿಕ ಮುಖಂಡ ಶ್ರೀ ದಾಸಪ್ಪ ಸಾಮಾನಿ ಕಯ್ಯಾರು ಇವರು ಶುಭಸಂಸಾಸನೆ ಗೈದರು ಭಜನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಪ್ರದಾನ ಸಂಚಾಲಕ ಶ್ರೀ ಸತೀಶ್ ಕುಮಾರ್ ಕಾಪು ಪ್ರಸ್ತಾವನೆ ಗೈದು ಧನ್ಯವಾದ ನೀಡಿದರು ಸುಮಾರು 100 ಭಜನಾ ವಿದ್ಯಾರ್ಥಿಗಳು ಯೋಗ ಶಿಬಿರದಲ್ಲಿ ಭಾಗವಹಿಸಿದರು.