ಸ್ಥಳೀಯಾಡಳಿತ ಚುನಾವಣೆ-ಯುಡಿಎಫ್ ಒಳಜಗಳ ಗಂಭೀರ ಸ್ವರೂಪ

ಮಂಜೇಶ್ವರ: ಮಂಜೇಶ್ವರದಲ್ಲಿ ಸ್ಥಳೀಯಾಡಳಿತ ಚುನಾವಣೆಯನ್ನು ಮುನ್ನಡೆಸುವ ಹಿನ್ನೆಲೆ ಯುಡಿಎಫ್ ಒಳಜಗಳ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯುಡಿಎಫ್ ಮೈತ್ರಿಯೊಳಗಿನ ಪಕ್ಷ ಹಂಚಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗೆ ಸೀಟು ನೀಡದಿರುವುದು ಹೊಸ ತಳಹದಿಯ ಉದ್ವಿಗ್ನತೆಯನ್ನು ಉಂಟುಮಾಡಿದೆ. ಇದರ ಪರಿಣಾಮವಾಗಿ ಬಾನುವಾರ ಬೆಳಿಗ್ಗೆ ಮಂಜೇಶ್ವರ ಹೊಸಂಗಡಿಯಲ್ಲಿ ಇರುವ ಕಾಂಗ್ರೆಸ್ ಕಚೇರಿಯನ್ನು ಸ್ಥಳೀಯ ಕಾರ್ಯಕರ್ತರು ಸಂಕೇತಾತ್ಮಕವಾಗಿ ಮುಚ್ಚುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕಚೇರಿ ಮುಚ್ಚುವ ಸಂದರ್ಭ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೇತಾರರು ಈ ಬಾರಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಂಜೇಶ್ವರ ಕಾಂಗ್ರೆಸ್ ನೇತಾರರು ಹಾಗೂ ಕಾರ್ಯಕರ್ತರು ಯಾವುದೇ ಪ್ರಚಾರಕ್ಕಿಳಿಯದೆ ಮೌನವನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಜಿಲ್ಲಾ ನೇತಾರರು ಸ್ಥಳೀಯ ಮಟ್ಟದ ಅಭಿಪ್ರಾಯಗಳನ್ನು ಕಡೆಗಣಿಸಿರುವುದು ವರ್ತಮಾನ ಪರಿಸ್ಥಿತಿಗೆ ಕಾರಣವೆಂದು ಆರೋಪಿಸಿದ್ದಾರೆ. ಸೀಟು ಹಂಚಿಕೆಯಲ್ಲಿ ಅನ್ಯಾಯವಾಗಿದ್ದು, ಕಾರ್ಯಕರ್ತರ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಯುಡಿಎಫ್ ಮುಖಂಡರ ಮಧ್ಯಸ್ಥಿಕೆ ಪ್ರಯತ್ನಗಳು ನಡೆಯುತ್ತಿದ್ದರೂ, ಸಂಘರ್ಷ ಶಮನಗೊಳ್ಳುವ ಸೂಚನೆ ಇನ್ನಷ್ಟೇ ಕಾಣಿಸಬೇಕಾಗಿದೆ. ಮೈತ್ರಿ ಘಟಕಗಳ ನಡುವಿನ ಭಿನ್ನಾಭಿಪ್ರಾಯಗಳು ಮುಂದಿನ ಚುನಾವಣಾ ಪ್ರಚಾರದ ಗತಿಯನ್ನು ಪ್ರಭಾವಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನವನ್ನು ಪರಿಹರಿಸಲು ಉನ್ನತ ನಾಯಕತ್ವ ಯಾವುದೇ ಮುತುವರ್ಜಿ ತೋರಿಸಿದೇ ಇರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

ಮಂಜೇಶ್ವರ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಸಮದಾಳ ರಾಜಕೀಯ ಸಮೀಕ್ಷೆಯಲ್ಲಿ ಈ ಘಟನೆ ಹೊಸ ಚರ್ಚೆಗೆ ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷೀಯ ಒಳರಾಜಕೀಯ ಯಾವ ದಿಕ್ಕಿನಲ್ಲಿ ಮುಂದುವರೆಯುತ್ತದೆ ಎನ್ನುವುದು ಗಮನಾರ್ಹ.

SHARE
Loading spinner

Leave a Reply

Your email address will not be published. Required fields are marked *

error: Content is protected !!