ಸ್ನೋ ಮ್ಯಾನ್ ಐಸ್ ಕ್ರೀಮ್ ಪಾರ್ಲರ್ ನ ಎರಡನೇ ಶಾಖೆ ಶುಭಾರಂಭ

ಅಸ್ತ್ರ ಗ್ರೂಪ್ ಲಂಚುಲಾಲ್ ಇವರ ಮಾಲಕತ್ವದ ಸ್ನೋ ಮ್ಯಾನ್ ಐಸ್ ಕ್ರೀಮ್ ಪಾರ್ಲರ್ ನ ಎರಡನೇ ಶಾಖೆ ನಿನ್ನೆ ದೇರಳಕಟ್ಟೆಯಲ್ಲಿ ಶುಭಾರಂಭಗೊಂಡಿತು. .ಉಧ್ಘಟನಾ ಸಮಾರಂಭದಲ್ಲಿ ಅಸ್ತ್ರ ಗ್ರೂಪ್ ಸಿ.ಇ.ಓ ,ಕ್ಯಾಟ್ಕಾ ಅಧ್ಯಕ್ಷರಾದ ಲಂಚು ಲಾಲ್, ದಾಸ್ ಪ್ರಮೋಟರ್ಸ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ದಾಸ್ ,ಲಂಚು ಲಾಲ್ ಅವರ ತಾಯಿ ರೇಖಾ,ಧರ್ಮ ಪತ್ನಿ ಭವ್ಯ ಉಪಸ್ಥಿತರಿದ್ದರು, ಲಂಚುಲಾಲ್ ಅವರ ತಾಯಿ ದೀಪ ಬೆಳಗಿಸುವುದರ ಮೂಲಕ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯ ಅತಿಥಿಗಳು, ಸಿನಿಮಾ ತಾರೆಯರು ಉಪಸ್ಥಿತರಿದ್ದರು…

Read More

ಕೇರಳ: ರಾಜಕೀಯ ಪಕ್ಷಗಳ ಮುಂದಿನ ಚಿತ್ತ ಸ್ಥಳೀಯಾಡಳಿತ ಚುನಾವಣೆಯತ್ತ.

ತಿರುವನಂತಪುರಂ : 2026 ರ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ಸ್ಥಳೀಯಾಡಳಿತ ಚುನಾವಣೆಯು ಬಹುತೇಕ ಒಕ್ಟೋಬರ್ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು,ತ್ರೀ ಸ್ಥರ ಪಂಚಾಯತುಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಎಲ್ಲ ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿದೆ. ರಾಜ್ಯದ ಒಟ್ಟು 941 ಗ್ರಾಮ ಪಂಚಾಯತ್ , 152 ಬ್ಲಾಕ್ ಪಂಚಾಯತ್ ,14 ಜಿಲ್ಲಾ ಪಂಚಾಯತ್ ,87 ಮುನ್ಸಿಪಾಲಿಟಿ ಮತ್ತು 6 ಕಾರ್ಪೋರೇಶನ್ ಗೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ನಡೆದ ನಿಲಂಬೂರ್ ಉಪಚುನಾವಣೆಯ ನಂತರ ಎಲ್ಲಾ ರಾಜಕೀಯ ಪಕ್ಷ…

Read More

ಇಹಲೋಕ ತ್ಯಜಿಸಿದ ಬಾಕ್ರಬೈಲಿನ ಮಹಾನ್ ಚೇತನ

ಭಜನೆಯ ಗುರಿಕಾರ…ಕಂಬಳದ ನೇಕಾರ.. ಕೃಷಿಯ ಹರಿಕಾರ…RSS ಹಾಗೂ ಬಿಜೆಪಿ ನೇತಾರ…ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷರು, ಪ್ರಗತಿಪರ ಕೃಷಿಕ, ಸಂಘಟನಾ ಚತುರ… ಎಲ್ಲಾ ಕ್ಷೇತ್ರಗಳ ಸಾಹುಕಾರ… ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಹುಟ್ಟಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಸಂತ ಭಂಡಾರಿ ಕಯ್ಯ (78) ವಿಧಿವಶ . ಸಣ್ಣ ಪ್ರಾಯದಿಂದಲೇ ಎಲ್ಲರೊಂದಿಗೆ ಬೆರೆತು ಮುಂದೆ ಬಾಕ್ರಬೈಲಿನಲ್ಲಿ ಎಲ್ಲರನ್ನೂ ಸಂಘಟಿಸುವ ಜೊತೆಗೆ ಪ್ರಗತಿಪರ ಕೃಷಿಕರಾಗಿ ಹಾಗೂ ಕಂಬಳ ಕೋಣದ ಮಾಲಕರು ಮತ್ತು ಓಟಗಾರ, ಕೂಡ ಪ್ರಸಿದ್ದಿಯನ್ನು ಪಡೆದ ಪ್ರಗತಿಪರ…

Read More

ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಹೊಸ ಸಹಾಯವಾಣಿ ಆರಂಭಿಸಿದ ನಟ ಮಮ್ಮುಟ್ಟಿ .

ತಿರುವನಂತಪುರಂ : ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಮಲಯಾಳಂ ಸ್ಟಾರ್ ‘ಟಾಕ್ ಟು ಮಮ್ಮುಕ್ಕ’ ಎಂಬ ನೂತನ ಸಹಾಯವಾಣಿ ಆರಂಭಿಸಿದ್ದಾರೆ.ಈ ಯೋಜನೆಯು ಕೇರಳ ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಸ್ವ ಸಹಾಯ ಇಲಾಖೆಗಳೊಂದಿಗೆ ಕುಟುಂಬಶ್ರೀ ಮಿಷನ್ ನ ಬೆಂಬಲದೊಂದಿಗೆ ಈ ಸಹಾಯವಾಣಿ ಕಾರ್ಯಾಚರಿಸಲಿದೆ. 2025 ರ ಜೂನ್ 25 ರಂದು ಫೇಸ್ಬುಕ್ ಮೂಲಕ ಈ ಯೋಜನೆಯನ್ನು ಘೋಷಿಸಲಾಯಿತು.ಈ ಯೋಜನೆಯ ಮೂಲಕ ಮಾದಕ ವ್ಯಸನದಿಂದ ಚೇತರಿಸಿಕೊಳ್ಳಲು ಕರೆ ಮಾಡುವವರು 6238877369 ಈ ನಂಬರ್ ಗೆ…

Read More

ವಿಶ್ವ ಮಾದಕ ವಸ್ತು ವಿರೋಧಿ ದಿನ.

ವೈಟ್ನರ್ ಬಳಸದಿರಿ…ಇದು ಹಾನಿಕಾರಕ. ವಿಶ್ವ ಮಾನವ ಕುಲಕ್ಕೆ ಮಾರಕವಾಗಿ ಪರಿಣಮಿಸುವ ಮಾದಕ ವಸ್ತುಗಳನ್ನು ಸಂಪೂರ್ಣ ತಡೆಗಟ್ಟಿ ಮಾದಕ ವ್ಯಸನ ದಿಂದ ಮುಕ್ತರಾಗಿ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ” ನಶಾ ಮುಕ್ತ್ ಭಾರತ್” ಯೋಜನೆಯ ಅಂಗವಾಗಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟಕ್ಕೆ ಕಠಿಣ ನಿರ್ಬಂಧಗಳನ್ನು ಹೇರಬೇಕಾದ ಅಗತ್ಯವಿದೆ. ಇತ್ತೀಚಿನದಿನಗಳಲ್ಲಿ ವಿದ್ಯಾರ್ಥಿಗಳು ಸಹಿತ ನಾವೆಲ್ಲರೂ ಹೆಚ್ಚಾಗಿ ಉಪಯೋಗಿಸುವ ವೈಟ್ನರ್ ಪೀಡ್ ತೀರಾ ಹಾನಿಕಾರಕವಾಗಿದ್ದು ಇದರ ಉಪಯೋಗಕ್ಕೆ ನಿಷೇಧ ಹೇರಬೇಕಾದ ಅಗತ್ಯವಿದೆ. ಅಪ್ಪಿ ತಪ್ಪಿ ಇದನ್ನು ಸೇವಿಸಿದ್ದಲ್ಲಿ ಇದು ಮೆದುಳಿನ…

Read More

ಭಾರೀ ಗಾಳಿಗೆ ಭಾರೀ ಗಾತ್ರದ ಮಾವಿನ ಮರ ಧಾರಾಶಾಯಿ

ಐನೂರು ವರ್ಷಗಳ ಇತಿಹಾಸ ಸಾರುವ ಪಾವೂರು ಪೊಯ್ಯ “ಕಟ್ಟೆಜಾತ್ರೆ” (ದೊಂಪದ ಜಾತ್ರೆ) ನಡೆಯುವ ಬೃಹತ್ ‘ಮಾವಿನ ಮರ’ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಧಾರಾಶಾಯಿ, ಮಂಜೇಶ್ವರ: “ಕಟ್ಟೆ ಜಾತ್ರೆ” (ದೊಂಪದ ಜಾತ್ರೆ) ನಡೆಯುವ ಇತಿಹಾಸ ಸಾರುವ ಕಟ್ಟೆಯ ಬೃಹತ್ ಮಾವಿನ ಮರವೊಂದು ಇಂದು ಅಪರಾಹ್ನ 3 ಗಂಟೆಗೆ ಬೀಸಿದ ಭಾರಿ ಗಾಳಿಗೆ ಧಾರಾಶಾಯಿಯಾದ ಘಟನೆ ಮಂಜೇಶ್ವರ ಪಾವೂರಿನಲ್ಲಿ ನಡೆದಿದೆ. ಇಲ್ಲಿನ ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ ಆದಿಸ್ಥಳದ ಕಟ್ಟೆಯಲ್ಲಿರುವ ಬೃಹತ್ ಮಾವಿನ ಮರವೊಂದು ಮಧ್ಯಭಾಗದಿಂದಲೇ…

Read More

ವರ್ಕಾಡಿಯಲ್ಲಿ ನಡೆದ ಭೀಬತ್ಸ ಘಟನೆ :ಬೆಂಕಿ ಹಚ್ಚಿ ತಾಯಿಯನ್ನು ಕೊಂದ ಮಗ, ನೆರೆಮನೆಯ ಮಹಿಳೆಗೂ ಗಂಭೀರ

ರಾತ್ರಿ ಹೊತ್ತು ಮನೆಯಲ್ಲಿ ಮಲಗಿದೆ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ ನೆರೆಮನೆಯ ಮಹಿಳೆ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಕಾಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ಡಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿಧ್ಧಾನೆ. ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಜೂನ್ 26 ಗುರುವಾರ ಮುಂಜಾನೆ ಈ ಘಟನೆ…

Read More

ವಯನಾಡು ಚೂರುಲ್ ಮಲೆಯಲ್ಲಿ ಮತ್ತೆ ವರುಣನ ರುದ್ರ ನರ್ತನ.ಶಾಶ್ವತ ಪರಿಹಾರಕ್ಕೆ ನಾಗರಿಕರ ಆಗ್ರಹ

ತಿರುವನಂತಪುರಂ : ಕಳೆದ ಬಾರಿ ಸುರಿದ ಕುಂಭ ದ್ರೋಣ ಮಳೆಗೆ ಇಡೀ ಮನುಕುಲವನ್ನೇ ಹೃದಯ ವಿದ್ರಾವಾಹಕ ಸನ್ನಿವೇಶಕ್ಕೆ ತಂದೊಡ್ಡಿದ್ದ ವಯನಾಡು ಜಿಲ್ಲೆಯ ಚೂರುಲ್ ಪೇಟೆಯ ಗುಡ್ಡ ಜರಿತ ಪ್ರದೇಶದಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಮತ್ತೆ ಅದೇ ಸ್ಥಿತಿ ಉಂಟಾಗಿದ್ದು ,ಶಾಶ್ವತ ಪರಿಹಾರಕ್ಕೆ ನಾಗರಿಕರು ಸರಕಾರಕ್ಕೆ ಒತ್ತಾಯ ಪಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದ ಅಪಾರವಾದ ನಾಶ ನಷ್ಟ ಉಂಟಾಗಿದ್ದು ,ಸ್ಥಳೀಯರನ್ನು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಸ್ಥಳಕ್ಕಾಗಮಿಸಿದ ದುರಂತ ಪರಿಹಾರ ಸ್ಪೆಷಲ್ ಆಫೀಸರ್ ಹಾಗೂ ಜಿಲ್ಲಾಧಿಕಾರಿಯವರಲ್ಲಿ…

Read More

ಅನ್ವರ್ ಯು ಡಿ ಎಫ್ ಪ್ರವೇಶ ಕ್ಕೆ ಹಸಿರು ನಿಶಾನೆ.

‘ಯಾವ ಕೀಲಿ ಕೈ ಯಿಂದ, ಬಾಗಿಲು ಮುಚ್ಚಲಾಗಿದೆಯೋ, ಅದೇ ಕೀಲಿ ಕೈಯಿಂದ ಬಾಗಿಲು ತೆರೆಯಲು ಸಾಧ್ಯವಿದೆ”: ಸನ್ನಿ ಜೋಸೆಫ್. ತಿರುವನಂತಪುರಂ. ತೀವ್ರ ಕುತೂಹಲ ಕೆರಳಿಸಿದ ನಿಲಂಬುರ್ ಉಪಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ದ್ರುವೀಕರಣ ಆಗುವ ಸಾಧ್ಯತೆಗಳಿದ್ದು ಮುಂಬರುವ ಸ್ಥಳೀಯಾಡಳಿತ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಪಿ ಬಿ ಅನ್ವರ್ ಪಡೆದ ಮತಗಳಿಕೆಯ ಅಂಕಿ ಅಂಶಗಳು ನೂತನ ರಾಜಕೀಯ ದ್ರುವೀಕರಣಕ್ಕೆ ಕಾರಣವಾಗುತ್ತಿದೆ. ಅನ್ವರ್ ರನ್ನು UDFತೆಕ್ಕೆಗೆ ಸೇರಿಸಿಕೊಂಡು ಮುಂಬರುವ…

Read More

ಬದುಕಿಗೆ ಮುಳುವಾಯಿತೇ ಬಣ್ಣ – 19 ರಲ್ಲೇ ಜೀವನ ಅಂತ್ಯಗೊಳಿಸಿದ ವಿದ್ಯಾರ್ಥಿನಿ

ಮಂಜೇಶ್ವರ : ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಬಗ್ಗೆ ತಲಪಾಡಿಯ ಕಿನ್ಯದಿಂದ ವರದಿಯಾಗಿದೆ.ಶ್ರೇಯಾ (19) ಸಾವನ್ನಪ್ಪಿದ ದುರ್ದೈವಿ.ಎಂದು ಗುರುತಿಸಲಾಗಿದೆ. ಶ್ರೇಯಾ ಓದಿನ ಒತ್ತಡ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಶ್ರೇಯಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಆಕೆಯನ್ನು ಕಪ್ಪು ಎಂದು ಅವಮಾನಿಸುತ್ತಿದ್ದ ಬಗ್ಗೆ ಬರೆದಿದ್ದಾಳೆ. ಅಲ್ಲದೇ, ಮೇ ತಿಂಗಳಿನಲ್ಲಿ ಶ್ರೇಯಾ ಬರೆದಿರುವ ಡೆತ್ ನೋಟೊಂದು ಸಿಕ್ಕಿದೆ. ನನ್ನನ್ನು ಯಾರೂ ಪ್ರೀತಿಸುವುದಿಲ್ಲ. ನಾನು ಬದುಕಬಾರದು, ಮನೆಯವರಿಗೆ ಕಷ್ಟವಾಗುತ್ತದೆ ಎಂದು ಬರೆದಿದ್ದಾಳೆ. ಮನೆಯ…

Read More
error: Content is protected !!