ತಲಪಾಡಿ ಟೋಲ್ ಗೇಟ್ ಬಳಿ ಸ್ಕೂಟರ್ ಸವಾರನಿಗೆ ಹೃದಯಾಘಾತ

ಮಂಜೇಶ್ವರ: ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ರವಿವಾರ ಬೆಳಿಗ್ಗೆ ತಲಪಾಡಿ ಟೋಲ್ ಗೇಟ್ ಸಮೀಪ ನಡೆದಿದೆ. ಕುಂಬಳೆ ಬಂಬ್ರಾಣದ ಚೂರಿತ್ತಡ್ಕ ನಿವಾಸಿ ಆಶ್ರಫ್ ಯಾನೆ ಎಳೇಪ್ಪಾ ಅಶ್ರಫ್ (58) ಸಾವನ್ನಪ್ಪಿದ ದುರ್ದೈವಿ.

​ರವಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಆಶ್ರಫ್ ಅವರು ಕುಂಬಳೆಯಿಂದ ಮಂಗಳೂರು ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ತಲಪಾಡಿ ಟೋಲ್ ಗೇಟ್ ದಾಟಿದ ಕೂಡಲೇ ತೀವ್ರ ಹೃದಯಾಘಾತ ಸಂಭವಿಸಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳಿದಿದ್ದರೆಂದು ವೈದ್ಯರು ತಿಳಿಸಿದ್ದಾರೆ. ಮೂಲತಃ ಮಂಗಳೂರಿನವರಾದ ಆಶ್ರಫ್, ಕಳೆದ ಮೂರು ದಶಕಗಳಿಂದ ಬಂಬ್ರಾಣದಲ್ಲಿ ನೆಲೆಸಿದ್ದಾರೆನ್ನಲಾಗಿದೆ.

SHARE
Loading spinner

3 thoughts on “ತಲಪಾಡಿ ಟೋಲ್ ಗೇಟ್ ಬಳಿ ಸ್ಕೂಟರ್ ಸವಾರನಿಗೆ ಹೃದಯಾಘಾತ

Leave a Reply

Your email address will not be published. Required fields are marked *

error: Content is protected !!