ಮಂಜೇಶ್ವರ: – ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಯುದ್ಧದ ವಿರುದ್ಧ ಪೈವಳಿಕೆಯಲ್ಲಿ ಸಿಪಿಐ(ಎಂ) ಶಕ್ತಿಶಾಲಿ ಯುದ್ಧವಿರೋಧಿ ರ್ಯಾಲಿ ಆಯೋಜಿಸಿತು. “ಯುದ್ಧ ಬೇಡ – ಶಾಂತಿ ಬೇಕು”, “ಸಾಮ್ರಾಜ್ಯವಾದ ಕೊನೆಗೊಳ್ಳಲಿ” ಎಂಬ ಘೋಷಣೆಗಳೊಂದಿಗೆ ನಡೆದ ಈ ಪ್ರತಿಭಟನೆಗೆ ಪಕ್ಷದ ಹಲವಾರು ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹಾಗೂ ಶಾಸಕ ಎಂ. ರಾಜಗೋಪಾಲ್ ರಾಲಿಯನ್ನು ಉದ್ಘಾಟಿಸಿದರು.. ಅಬ್ದುಲ್ ರಝಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ್, ವಿ.ವಿ. ರಮೇಶನ್, ಅಬ್ದುಲ್ ಹಾರಿಸ್ ಪೈವಳಿಕೆ, ವಿನಯ್ ಕುಮಾರ್, ಪುರುಷೋತ್ತಮ ಬಳ್ಳೂರು, ಅಶೋಕ್ ಬಂಢಾರಿ ಮತ್ತಿತರರು ವಿಷಯಪ್ರಧಾನ ಭಾಷಣಗಳನ್ನು ನೀಡಿದರು.
ನೇತಾರರು ಗಾಜಾ ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳು ಮತ್ತು ಇಸ್ರೇಲ್ನ ಆಕ್ರಮಣ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಶಾಂತಿಯ ಭೂಮಿಯಾಗಬೇಕಾದ ಭೂಮಿ ಯುದ್ಧಭೂಮಿಯಾಗುತ್ತಿರುವಾಗ, ಜಗತ್ತಿನೆಲ್ಲರೂ ಕಣ್ಣುಮುಚ್ಚಿದಂತೆ ಕುಳಿತುಕೊಳ್ಳಬಾರದು” ಎಂದು ಅವರು ಎಚ್ಚರಿಸಿದರು.
ರ್ಯಾಲಿಗೆ ಎಂ. ಚಂದ್ರನಾಯಕ್ ಸ್ವಾಗತ ಕೋರಿದರು. ಪೈವಳಿಕೆಯ ಪ್ರಮುಖ ರಸ್ತೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ಈ ಶಾಂತಿಯುತ ಪ್ರತಿರೋಧ ಮೆರವಣಿಗೆ, ಪ್ರಬಲ ರಾಜಕೀಯ ಸಂದೇಶವನ್ನು ಸಮಾಜಕ್ಕೆ ನೀಡಿತು.