ಕಾರ್ಯಕರ್ತರು ಗಳ ಶ್ರಮ ಹಾಗೂ ಸಿದ್ದಂತಗಳ ಮೇಲಿನ ನಂಬಿಕೆ ಗೆಲುವಿನ ಸೂತ್ರ.. ಗೆಲುವು ಪರಿಶ್ರಮಕ್ಕೆ ಮಾತ್ರ ದೊರೆಯುತ್ತದೆ ಎಂದು
ಬಿಜೆಪಿ ಪೈವಳಿಕೆ ಪೆರ್ವೋಡಿ ವಾರ್ಡ್ ಸಮ್ಮೇಳನ ಉದ್ಘಾಟಿಸಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.
ಸಂಘಟನಾ ಚಟುವಟಿಕೆ, ಹಾಗೂ ಪಕ್ಷದ ಕಾರ್ಯಕ್ರಮ ಗಳ ವಿವರ ನೀಡಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಪಂಚಾಯತ್ ಸಮಿತಿ ಅಧ್ಯಕ್ಷರಾದ ಸತ್ಯ ಶಂಕರ್ ಭಟ್ ಪ್ರವೀಣ್ ರೈ ಪಟ್ಲ, ಸುಬ್ರಮಣ್ಯ ಭಟ್, ಗಣೇಶ ಪೆರ್ವೋಡಿ, ಚಂದ್ರವತಿ ಶೆಟ್ಟಿ, ಕಮಲ, ಸುಜಿತ್ ಕೆ, ಉಪಸ್ಥಿಯಲ್ಲಿ- ಕಾರ್ಯಕರ್ತರ ಸಮಾವೇಶ ಯಶಸ್ವಿ ಯಾಗಿ ಜರಗಿತು.
ಇದೆ ಸಂದರ್ಭ ನೇಪಾಳ ದಲ್ಲಿ ನಡೆದ ಸಾಫ್ಟ್ ಬಾಲ್ ಪಂದ್ಯಕೂಟದಲ್ಲಿ ದೇಶವನ್ನು ಪ್ರತಿನಿದಿಸಿ ಚಿನ್ನದ ಪದಕ ಗೆದ್ದ ಅಶ್ವಿನಿ ಪೆರ್ವೋಡಿ ಅವರನ್ನು ಸನ್ಮಾನಿಸಲಾಯಿತು. ಶಿವಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು, ಸಂತೋಷ ಭಂಡಾರಿ ಸ್ವಾಗತಿಸಿ ದೇವಿಪ್ರಸಾದ್ ಧನ್ಯವಾದ ನೀಡಿದರು .