ವರ್ಕಾಡಿ ವಲಯದ ಬಂಟರ ಸಂಘ ಆಯೋಜಿಸಿದ ಜನಮನ ರಂಜಿಸಿದ ಆಟಿಡೊಂಜಿ ಕೂಟ ಕಾರ್ಯಕ್ರಮ

ವರ್ಕಾಡಿ ವಲಯದ ಬಂಟರ ಸಂಘ ಆಯೋಜಿಸಿದ ಆಟಿಡೊಂಜಿ ಕೂಟ ಕಾರ್ಯಕ್ರಮವು ಜುಲೈ 27 ಆದಿತ್ಯವಾರ ಬೆಳಿಗ್ಗೆ ಕೋಳ್ಯೂರು ಆಡಿಟೋರಿಯಂನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆನೇಕಲ್ಲು ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಎನ್. ಟಿ. ರೈ ನಾಣಿಲ್ತಡಿಯವರು ಕಾರ್ಯಕ್ರಮ ಉದ್ಧಾಟಿಸಿದರು.

ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಆಟಿಯ ದಿನದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಾಥ್ ಕೊಂಡೆ ಚಕ್ರಕೋಡಿ , ಸುಧೀಶ್ಚಂದ್ರ ಶೆಟ್ಟಿ ಮುಗೇರು ಗುತ್ತು, ಸುಭಾಷ್ ಚಂದ್ರ ಅಡಪ ಕಲ್ಲೂರ್ ಬೀಡು, ಗಣೇಶ್ ಶೆಟ್ಟಿ ಕಲ್ಲಾಪು ಅಲಬೆಗುತ್ತು, ಮನೋಹರ್ ಶೆಟ್ಟಿ ಕೆದುಂಬಾಡಿ, ಐತಪ್ಪ ಶೆಟ್ಟಿ ದೇವಂದ ಪಡ್ಪು, ಶ್ರೀಧರ ಶೆಟ್ಟಿ ಪಾವೂರು ಗುತ್ತು, ರವೀಂದ್ರನಾಥ ಶೆಟ್ಟಿ ಕೊಡ್ಲಮೊಗರು ನವೀನ್ ಚಂದ್ರ ಶೆಟ್ಟಿ ಬಾಂದೋಡಿ , ಲೋಕೇಶ್ ಶೆಟ್ಟಿ , ಶ್ರೀಧರ್ ಶೆಟ್ಟಿ ಪಾವೂರು ಗುತ್ತು, ವಿಶ್ವನಾಥ ಶೆಟ್ಟಿ ನಡಿಮಾರು, ವಿನಯ್ ಕುಮಾರ್ ಶೆಟ್ಟಿ ಉರ್ಣಿ, ದೇವಪ್ಪ ಶೆಟ್ಟಿ ಚಾವಡಿ ಬೈಲು ಗುತ್ತು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾವಳಗುತ್ತು ಅಧ್ಯಕ್ಷತೆ ವಹಿಸಿದರು. ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ ಕತ್ತೆರಿಕೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಆಶಾ ದಿಲೀಪ್ ರೈ ಸುಳ್ಯಮೆ ಸ್ವಾಗತಿಸಿದರು. ಪುಷ್ಪಾವತಿ ಶೆಟ್ಟಿ ಬಾಕ್ರಬೈಲು ವಂದಿಸಿದರು. ದೇವಿ ಪ್ರಸಾದ್ ಶೆಟ್ಟಿ ಬೆಜ್ಜ ಮತ್ತು ಲೋಕೇಶ್ ರೈ ಕರ್ಪಿಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಮಾಷೆಯ ಆಟಗಳು ನಡೆಯಿತು.
ವರ್ಕಾಡಿ ಗ್ರಾಮದ ವಿವಿಧ ಗ್ರಾಮ ಸಮಿತಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!