ಮಜೀರ್ಪಳ್ಳ ಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀರ್ಚಾಲ್ ಕಾರ್ಯ ಕ್ಷೇತ್ರದ ವತಿಯಿಂದ ನೀರ್ಚಾಲ್ ಸಮೀಪದ ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜೀರ್ಪಳ್ಳ ಕಟ್ಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧಕ್ಷರಾದ ಶ್ರೀ ನವೀನಾಕ್ಷ ಮಜೀರ್ಪಳ್ಳ ಕಟ್ಟೆ, ಪದಾಧಿಕಾರಿಗಳು , ನೀರ್ಚಾಲ್ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ನಳಿನಾಕ್ಷಿ , ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.