Avatar

NAMMA MEDIA 24X7

ಕೇರಳದಲ್ಲಿ ಯುಡಿಎಫ್ ಭರ್ಜರಿ ಗೆಲುವು ಸಾಧಿಸಲಿದೆ: ರಾಜ್‌ಮೋಹನ್ ಉಣ್ಣಿತ್ತಾನ್ ಭವಿಷ್ಯವಾಣಿ

ಮಂಜೇಶ್ವರ: ಕೇರಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ (LDF) ಸರ್ಕಾರ ಧೂಳಿಪಟವಾಗಲಿದ್ದು, ಯುಡಿಎಫ್ (UDF) 111ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಅಧಿಕಾರಕ್ಕೆ ಬರಲಿದೆ ಎಂದು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಭವಿಷ್ಯ ನುಡಿದಿದ್ದಾರೆ. ​ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಹೇಳಿಕೆಯು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ​1977ರ ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಉಂಟಾದ ರಾಜಕೀಯ ಧ್ರುವೀಕರಣವನ್ನು ನೆನಪಿಸಿರುವ ಉಣ್ಣಿತ್ತಾನ್, ಅಂದು…

Read More

ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಚಾಲನೆ: ಶ್ರಮದಾನದಲ್ಲಿ 3000 ಕೆಜಿ ತ್ಯಾಜ್ಯ ತೆರವು

ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಮೇ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ರೋಸಾರಿಯೋ ಚರ್ಚ್ ಮುಖ್ಯಸ್ಥರಾದ ಫಾ. ವಲೇರಿಯನ್ ಡಿ’ಸೋಜಾ ಹಾಗೂ ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಚ್.ವಿ. ಪ್ರಸಾದ್ ಅವರು ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಕೇಶವ ಪಟ್ಟಾಳಿ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ದನೇಶ್ ಕುಮಾರ್, ಕಮಲಾಕ್ಷ ಪೈ, ದಿಲ್‌ರಾಜ್ ಆಳ್ವ ಹಾಗೂ ಶ್ರೀ ರಂಜನ್ ಬೆಳ್ಳರ್ಪಾಡಿ ಉಪಸ್ಥಿತರಿದ್ದು, ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು….

Read More

ಸಂಘಟನಾ ಶಕ್ತಿ ಮತ್ತು ಪರಂಪರೆಯ ಆತಿಥ್ಯ: ಒಂದು ಅಂತಃಕರಣದ ಅವಲೋಕನ

ಸಂಘಟನೆಯೆನ್ನುವುದು ಬರೀ ವ್ಯಕ್ತಿಗಳ ಸಮೂಹವಲ್ಲ; ಅದೊಂದು ಉದಾತ್ತ ಭಾವನೆಗಳ ಸುಂದರ ಸಂಗಮ. ‘ಸಮಿತಿ’ ಎನ್ನುವುದು ಕೇವಲ ಕಾಗದದ ಮೇಲೆ ಗೀಚಿದ ಹೆಸರುಗಳ ಪಟ್ಟಿಯಲ್ಲ, ಅದು ಹತ್ತಾರು ಭಿನ್ನ ಮನಸ್ಸುಗಳು ಒಂದು ಸದಾಶಯದ ಗುರಿಯೆಡೆಗೆ ನಡೆಸುವ ಸಮಾನಾಂತರ ಪಯಣ. ಒಂದು ಸುಂದರ ಕಾರ್ಯಕ್ರಮವು ಸುಲಲಿತವಾಗಿ ಅರಳಬೇಕಾದರೆ, ಅಲ್ಲಿ ವೈಯಕ್ತಿಕ ಪ್ರತಿಷ್ಠೆಯ ಕಾರ್ಮೋಡಗಳಿಗಿಂತ ‘ಸಮಷ್ಠಿ ಪ್ರಜ್ಞೆ’ಯ ಬೆಳಕು ಪ್ರಖರವಾಗಬೇಕು.​ ಸಮನ್ವಯದ ಸೂತ್ರ ಮತ್ತು ಉಪಸಮಿತಿಗಳ ಪಾತ್ರ ​ಸಮಿತಿಯೊಳಗಿನ ಪರಸ್ಪರತೆ ಹಾಲಿನಲ್ಲಿ ಜೇನು ಬೆರೆತಂತೆ ಇರಬೇಕು; ಎಲ್ಲಿಯೂ ವ್ಯತ್ಯಾಸ ಕಾಣದಂತೆ ಸವಿಯಷ್ಟೇ…

Read More

ಮತ ಸೌಹಾರ್ದದ ವಿಭಿನ್ನ ಮುಖ: ಜಲೀಲ್ ಕೊಡಿಯಮ್ಮಗೆ ಸನ್ಮಾನ

ಕೊಡಿಯಮ್ಮ: ಇಂದಿನ ಕಾಲದಲ್ಲಿ ಧರ್ಮವು ಮನುಷ್ಯರ ನಡುವೆ ಗಡಿಗಳನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲೇ, ಕೊಡಿಯಮ್ಮದ ಜಲೀಲ್ ಧರ್ಮಸೌಹಾರ್ದದ ಹೊಸ ಮಾದರಿಯಾಗಿದ್ದಾರೆ.ತಮ್ಮ ಹೆಸರಿನಲ್ಲಿದ್ದ 7 ಸೆಂಟ್ ಜಾಗವನ್ನು ತಮ್ಮ ಮನೆಯ ಬಳಿಯ ಬನಕ್ಕಾಗಿ ಉಚಿತವಾಗಿ ನೀಡಿದ ಜಲೀಲ್ ಅವರ ಮಾನವೀಯ ಕೃತ್ಯಕ್ಕೆ ಬನಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ದಾಸ್ ಕುಟುಂಬದ ನಿರ್ವಾಹಕರು ಸನ್ಮಾನ ಸಲ್ಲಿಸಿದರು. ಕಾವು ಸಮಿತಿ ಸದಸ್ಯರು ಜಲೀಲ್ ಅವರಿಗೆ ಉಡುಗೊರೆಯನ್ನೂ ನೀಡಿ ಗೌರವಿಸಿದರು. ಈ ವೇಳೆ, ಜಲೀಲ್ ಕೊಡಿಯಮ್ಮ ಜಮಾಅತ್ ಸಮಿತಿ ಸದಸ್ಯರಾಗಿಯೂ, ಯು.ಎಚ್ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ…

Read More

ಹಾವುಗಳ ಭಯದ ಕನಸು; ಜನರ ರಕ್ಷಕ ಲೆಂಕಿನಡಕ್ಕದ ಉಬೈದ್ ಮುಸ್ಲಿಯಾರ್

ಪೈವಳಿಕ: ಹಾವುಗಳನ್ನು ಕಂಡರೆ ಹೆದರದವರು ಅಪರೂಪ. ಆದರೆ ಪೈವಳಿಕ ಪಂಚಾಯಿತಿಯ ಲೆಂಕಿನಡಕ್ಕದ ನಿವಾಸಿ ಉಬೈದ್ ಮುಸ್ಲಿಯಾರ್ ಅವರಿಗೆ ಹಾವುಗಳು ಭಯದ ಕನಸಲ್ಲ, ಬದಲಾಗಿ ಅವರೇ ಹಾವುಗಳಿಗೆ ಭಯದ ಕನಸು. ಪ್ರತಿ ದಿನ ಕನಿಷ್ಠ ಹತ್ತು ಕರೆಗಳು ಹಾವು ಹಿಡಿಯಲು ಅವರ ಬಳಿ ಬರುತ್ತವೆ. ಮನೆ ಒಳಗಾಗಲಿ, ಬಾವಿಯೊಳಗಾಗಲಿ ಹಾವು ಕಾಣಿಸಿಕೊಂಡರೆ, ಸ್ಥಳೀಯರಿಗೆ ಮೊದಲು ನೆನಪಾಗುವುದು ಉಬೈದ್ ಮುಸ್ಲಿಯಾರ್ ಅವರೇ. ಯಾವ ಸಮಯದಲ್ಲಾದರೂ ಕರೆ ಮಾಡಿದರೂ “ಇಲ್ಲ” ಎನ್ನುವುದು ಅವರ ಪದಕೋಶದಲ್ಲೇ ಇಲ್ಲ. ಕರೆ ಬಂದ ಕೆಲವೇ ನಿಮಿಷಗಳಲ್ಲಿ…

Read More

ಮಂಜೇಶ್ವರದಲ್ಲಿ ಯುಡಿಎಫ್ ಭರ್ಜರಿ ಮುನ್ನಡೆ: ಅಶ್ರಫ್ 10 ಸಾವಿರ ಮತಗಳ ಅಂತರದ ಜಿಗಿತ

ಮಂಜೇಶ್ವರ: ಹತ್ತು ಸಾವಿರದ ಗಡಿ ದಾಟಿದ ಯುಡಿಎಫ್ ಮುನ್ನಡೆ; ಎ.ಕೆ.ಎಂ. ಅಶ್ರಫ್ ನಾಗಾಲೋಟ!​ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಎದುರಾಳಿಗಳಿಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಎ.ಕೆ.ಎಂ. ಅಶ್ರಫ್ ಯುಡಿಎಫ್ (UDF) 26,478 10,288ಕೆ. ಸುರೇಂದ್ರನ್ ಎನ್ ಡಿಎ (NDA) 16,190 —ಕೆ.ಆರ್. ಜಯಾನಂದ ಎಲ್ ಡಿಎಫ್ (LDF) 4,778 ದಶಸಹಸ್ರ ಜಿಗಿತ: ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ…

Read More

​ಕೇರಳ ಚುನಾವಣಾ ಫಲಿತಾಂಶ: ಎಡಕೋಟೆ ನಡುಗಿಸಿದ ಯುಡಿಎಫ್ ಸುನಾಮಿ: ಕಮಲ ಪಾಳಯದಲ್ಲಿ ಹೊಸ ಸಂಚಲನ

​ ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಇಡೀ ರಾಜ್ಯದಲ್ಲಿ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಭದ್ರವಾಗಿದ್ದ ಎಡರಂಗದ ಕೋಟೆ ಈ ಬಾರಿ ಧರಾಶಾಯಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.​ ಬೆಳಿಗ್ಗೆ 10:20ರ ವೇಳೆಗೆ​ಯುಡಿಎಫ್: 91 ಸ್ಥಾನಗಳಲ್ಲಿ ಮುನ್ನಡೆ​ಎಲ್ ಡಿ ಎಫ್: 46 ಸ್ಥಾನಗಳಲ್ಲಿ ಮುನ್ನಡೆ​ಎನ್ ಡಿಎ: 02 ಸ್ಥಾನಗಳಲ್ಲಿ ಮುನ್ನಡೆ​ ​ ಕಣ್ಣೂರಿನ ಧರ್ಮಡಂ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಆರಂಭಿಕ ಹಿನ್ನಡೆ ಅನುಭವಿಸಿರುವುದು…

Read More

ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಏರಿಕೆ: Donald Trump ಆಡಳಿತದ ವಿರುದ್ಧ ಜನಾಕ್ರೋಶ

ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಭಾರೀ ಏರಿಕೆಯಾಗಿರುವ ಹಿನ್ನೆಲೆ, ಅಧ್ಯಕ್ಷ Donald Trump ಅವರ ಆಡಳಿತದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ. ವಿಶೇಷವಾಗಿ California ರಾಜ್ಯದಲ್ಲಿ ಜನರ ಅಸಮಾಧಾನ ತೀವ್ರಗೊಂಡಿದ್ದು, ಇಂಧನ ದರ ಏರಿಕೆಯಿಂದ ಜೀವನ ವೆಚ್ಚವೂ ಏರಿಕೆಯಾಗಿದೆ. Iran ವಿರುದ್ಧ ನಡೆದ ಯುದ್ಧ ಹಾಗೂ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಸಂಘರ್ಷಗಳಿಂದ ತೈಲ ಸರಬರಾಜಿಗೆ ಅಡಚಣೆ ಉಂಟಾಗಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಅಮೆರಿಕದಲ್ಲೂ ಪೆಟ್ರೋಲ್ ದರಗಳು ಹೆಚ್ಚಳ ಕಂಡಿವೆ. Los Angelesನಲ್ಲಿ ಇಂಧನ…

Read More

ಉಡುಪಿಯಲ್ಲಿ ಮೇ 3ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ, ದೀ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಇವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ.3ರಂದು ಮಧ್ಯಾಹ್ನ 1 ಗಂಟೆಗೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಸಭಾಧ್ಯಕ್ಷ ಯು.ಟಿ…

Read More

ಕರಾವಳಿಗೆ ಹೈಕೋರ್ಟ್ ಪೀಠ ಹೋರಾಟಕ್ಕೆ ವೇಗ: ಐವನ್ ಡಿಸೋಜ

ಮಂಗಳೂರು: ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ವೇಗ ದೊರೆತಿದ್ದು, ವಿವಿಧ ವಲಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರಾದ ಐವನ್ ಡಿಸೋಜ ತಿಳಿಸಿದ್ದಾರೆ. ನಗರದ ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಪೀಠಕ್ಕೆ ಅನುಮತಿ ದೊರಕಿದ ಕೂಡಲೇ ಪ್ರಾರಂಭಿಕವಾಗಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಕಾರ್ಯಾಚರಣೆ ಆರಂಭವಾಗಲಿದ್ದು, ನಂತರ ಸೂಕ್ತ ಸ್ಥಳದಲ್ಲಿ…

Read More
error: Content is protected !!