ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧನ… !

ಮಂಗಳೂರು: ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧನವಾಗಿದೆ.ಬಂಧಿತರನ್ನು ಬಂದರು ನಿವಾಸಿ ಅಮೀರ್ ಸುಹೇಲ್ (28) ಹಾಗೂ ಉರುಂದಾಡಿಗುಡ್ಡೆ ಕಾವೂರು ನಿವಾಸಿ ಸುರೇಶ (29) ಎಂದು ತಿಳಿದುಬಂದಿದೆ. ಆರೋಪಿಗಳು ದಿ.13 ರಂದು ಸಾಮಾಜಿಕ ಜಾಲತಾಣವಾದ ಪೇಸಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿದ್ದು ಈ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದ…

Read More

ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿ- ಕುಂಬಳೆ ಪೊಲೀಸರು ಕೇಸು ದಾಖಲು

ಮಂಜೇಶ್ವರ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಪ್ಲೆಕ್ಸ್ ಬೋರ್ಡ್‌ಗಳನ್ನು ಹಾನಿಗೈಯುವುದರ ಜೊತೆಯಾಗಿ ವಾಚನಾಲಯದ ಮುಂಬಾಗದಲ್ಲಿ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವ ಬಗ್ಗೆ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಸಿಪಿಎಂ ನೀಡಿದ…

Read More

ನನ್ನ ಮೇಲಿನ ಕಳ್ಳತನದ ಆರೋಪ ಸಾಬೀತು ಮಾಡಿ… ! ರವಿ ಪ್ರಸನ್ನರಿಗೆ ಓಪನ್ ಚಾಲೆಂಜ್ ಹಾಕಿದ ತಮ್ಮಣ್ಣ ಶೆಟ್ಟಿ ….. !

ಮಂಗಳೂರು: ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ನಾನು ಕೊಂಡಾಣ , ಷಣ್ಮುಖ ದೇವಾಲಯದ ಭಂಡಾರ ಕದ್ದಿಲ್ಲ. ಒಂದು ವೇಳೆ ರವಿ ಪ್ರಸನ್ನರ ಆರೋಪ ಸತ್ಯ ಆಗಿದ್ದರೆ ನಾನು ಕೊಂಡಾಣದ ಮಣ್ಣಿನಲ್ಲಿ ಇನ್ನು ಮುಂದೆ ದೈವದ ಬಗ್ಗೆ ಮಾತನಾಡುವುದಿಲ್ಲ ಎಂದು ಶಪಥ ಮಾಡುತ್ತೇನೆ. ಒಂದು ವೇಳೆ ಪ್ರಸನ್ನ ರವಿ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಆತನನ್ನು ತಂತ್ರಿ ಕಂತ್ರಿ ಕುತಂತ್ರಿ ಎಂದು ಕರೆಯುತ್ತೇನೆ ಎಂಬುದಾಗಿ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

Read More

ಮೀಂಜ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು ವಿಧಿವಶ

ಮೀಂಜ:- ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು (63 ) ಅಲ್ಪ ಕಾಲದ ಅಸೌಖ್ಯದಿಂದ ಡಿ.13 ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ ,ತಮ್ಮ ಶಂಕರ ಆಚಾರ್ಯ, ತಂಗಿ ದೇವಕಿ, ಮಗ ಸಂತೋಷ್,ಸೊಸೆ ಶ್ವೇತಾ, ಅಳಿಯ ಪದ್ಮನಾಭ,ಮೊಮ್ಮಗ ಗಾಯನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಕಿರಿಯ ಮಗ ಅಶೋಕ ಮತ್ತು ಮಗಳಾದ ನವ್ಯ ಇವರು ಅಕಾಲಿಕ ಮರಣಕ್ಕೀಡಾದ ಕಾರಣ ಈ ಮೊದಲೇ ಕಳೆದುಕೊಂಡಿದ್ದಾರೆ. ಶ್ರೀ…

Read More

ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವ – ಪ್ರಶಾಂತಿ ಸಂಭ್ರಮ

ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಒಳಗೊಂಡ “ಪ್ರಶಾಂತಿ ಸಂಭ್ರಮ”ವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಡಿಸೆಂಬರ್ 13ರ ಶನಿವಾರದಂದು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಆಶ್ರಮ – ಪ್ರಶಾಂತಿ ನಿಲಯಂನಿಂದ ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರಕ್ಕೆ ಲಭಿಸಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅಮೃತಶಿಲಾ ಪಾದುಕೆಯ ಪ್ರತಿಷ್ಠಾಪನಾ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಈ ಪಾದುಕಾ ಪ್ರತಿಷ್ಠಾಪನೆಯನ್ನು ಶ್ರೀ ಸತ್ಯಸಾಯಿ…

Read More

ಡಿ.16ರಂದು “ಕೊಂದವರು ಯಾರು ?” ಆಂದೋಲನ- ಸಾವಿರಾರು ಮಹಿಳೆಯರಿಂದ ಮೌನ ಮೆರವಣಿಗೆ

ಉಡುಪಿ:ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ರಚನೆಯಾಗಿರುವ ಎಸ್‌ಐಟಿ , ಆ ವ್ಯಾಪ್ತಿಯಲ್ಲಿ ದಾಖಲಾಗಿರುವ ಎಲ್ಲ ಅಪರಾಧ ಪ್ರರಕಣಗಳ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇದೇ ಡಿ. 16ರಂದು ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಮತ್ತು ಮಹಿಳಾ ನ್ಯಾಯ ಸಮಾವೇಶ’ ಆಯೋಜಿಸಲಾಗಿದೆ ಎಂದು ‘ಕೊಂದವರು ಯಾರು?’ ಆಂದೋಲನದ ಜ್ಯೋತಿ ಎ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟಕ್ಕೆ ರಾಜ್ಯದ ವಿವಿಧೆಡೆಯ ಮಹಿಳೆಯರು ಆಗಮಿಸಲಿದ್ದಾರೆ. ಈಗಾಗಲೇ ಹೋರಾಟಕ್ಕೆ ಉತ್ತಮ ಸ್ಪಂದನೆ…

Read More

ಉಡುಪಿ ನಗರಸಭೆ ಕಚೇರಿಯ ಶೌಚಾಲಯದ ಕೊಳಚೆ ನೀರಿನಿಂದ ವೈರಸ್ ಭೀತಿ … !

ಉಡುಪಿ:ಉಡುಪಿ ನಗರಸಭೆ ಕಚೇರಿಯ ಶೌಚಾಲಯದ ತ್ಯಾಜ್ಯ ನೀರಿನ ಕೊಳವೆಯ ಜೋಡಣೆ ಕಳಚಿಕೊಂಡಿದ್ದು, ಇದರಿಂದಾಗಿ ಶೌಚತ್ಯಾಜ್ಯಗಳು ಹೊರಬೀಳುತ್ತಿದ್ದು, ಪರಿಸರದಲ್ಲಿ ರೋಗ ಹರಡುವ‌ ಭೀತಿ ಎದುರಾಗಿದೆ. ಮಾರಕ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆ ಇದೆ. ಸನಿಹದಲ್ಲಿ ಕವಿ ಮುದಣ್ಣ ಮಾರ್ಗದಿಂದ ನಿತ್ಯಾನಂದ ಮಂದಿರಕ್ಕೆ ಸಂಪರ್ಕಿಸುವ ರಸ್ತೆ ಹಾದುಹೋಗುತ್ತಿದ್ದು,‌ ಈ ರಸ್ತೆಯಲ್ಲಿ ಭಕ್ತಾದಿಗಳು,‌ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಪಕ್ಕದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ಇದೆ. ಹೊರಹೊಮ್ಮಿತ್ತಿರುವ ಗಬ್ಬು‌ವಾಸನೆಗೆ ಮೂಗು ಮುಚ್ಚಿ‌ ತಿರುಗಾಡ ಬೇಕಾದ ಸಮಸ್ಯೆಯು ಇಲ್ಲಿ ಎದುರಾಗಿದೆ. ತಕ್ಷಣ…

Read More

ಕೇರಳ ಸ್ಥಳೀಯಾಡಳಿತ ಚುನಾವಣೆ ಫಲಿತಾಂಶ ಪ್ರಕಟ .ಮಂಜೇಶ್ವರ ಗ್ರಾಮ ಪಂಚಾಯತ್‌ ಯುಡಿಎಫ್‌ ಗೆ ಸ್ಪಷ್ಟ ಬಹುಮತ

ಮಂಜೇಶ್ವರ: ಕೇರಳ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಬಹುಮತವನ್ನು ಸಾಧಿಸಿದೆ. ಒಟ್ಟು 24 ಸ್ಥಾನಗಳ ಪೈಕಿ ಯುಡಿಎಫ್‌ 14 ಸ್ಥಾನಗಳನ್ನು ಗೆದ್ದು ಪಂಚಾಯತ್‌ ಮೇಲೆ ಹಿಡಿತ ಸಾಧಿಸಿದೆ.ಮಂಜೇಶ್ವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸಮಾಜ ಸೇವಕ ಹಾಗೂ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಅವರು ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಿದ್ದಾರೆ. ಚುನಾವಣಾ ಅವಧಿಯಲ್ಲಿ ಎದುರಾಳಿಗಳಿಂದ ನಡೆದ ಅಪಪ್ರಚಾರಗಳನ್ನೆಲ್ಲಾ ಜನತೆಯ ಸ್ಪಷ್ಟ ತೀರ್ಪಿನ ಮೂಲಕ ಮಣಿಸಿ…

Read More

ಟಿಕೆಟ್ ತೆಗೆದು ಮೆಸ್ಸಿ ನೋಡಲು ಬಂದ ಅಭಿಮಾನಿಗಳಿಗೆ ಭಾರಿ ಮೋಸ .. ! ಅಷ್ಟಕ್ಕೂ ಕೊಲ್ಕತ್ತಾ ಸ್ಟೇಡಿಯಂನಲ್ಲಿ ಕಿರಿ ಕಿರಿ ನಡೆಯಲು ಕಾರಣವೇನು … !

ಕೊಲ್ಕತ್ತಾ: ಅರ್ಜೆಂಟೀನಾ ಫುಟ್​ಬಾಲ್​ ಆಟಗಾರ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಗೋಟ್ ಇಂಡಿಯಾ ಟೂರ್​ನ ಕಾರ್ಯಕ್ರಮದ ಭಾಗವಾಗಿ ಇಂದು ಮೆಸ್ಸಿ ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಬಳಿಕ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಂಡಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಅರ್ಜೆಂಟೀನಾ ಫುಟ್​ಬಾಲ್ ತಾರೆ ಮೈದಾನದಿಂದ ತೆರಳಿದ್ದಾರೆ. ಇತ್ತ ಟಿಕೆಟ್ ಖರೀದಿಸಿ ಮೆಸ್ಸಿಯನ್ನು ವೀಕ್ಷಿಸಲು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ. ಮೆಸ್ಸಿಯ…

Read More

ಡಿಸೆಂಬರ್ 16 ರಂದು ನಗರದ ಕದ್ರಿ ಹಿಲ್ಸ್‌ ನಲ್ಲಿ “ವಿಜಯ ದಿವಸ” ವೀರಯೋಧರ ಸ್ಮರಣೆ … !

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ , ನಿಟ್ಟೆ ಶಿಕ್ಷಣ ಸಂಸ್ಥೆ , ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 , ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಡಿ ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ ಡಿಸೆಂಬರ್ 16 ರಂದು ಬೆಳಿಗ್ಗೆ 9:00 ಗಂಟೆಗೆ, “ವಿಜಯ ದಿವಸ” ವನ್ನು ಮಂಗಳೂರು ನಗರದ ಕದ್ರಿ ಹಿಲ್ಸ್‌ ನಲ್ಲಿರುವ ಯೋಧರ ಯುದ್ಧಸ್ಮಾರಕದಲ್ಲಿ ಹೂಹಾರವನ್ನು ಅರ್ಪಿಸಿ, ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಗುವುದೆಂದು ದಕ್ಷಿಣ ಕನ್ನಡ…

Read More
error: Content is protected !!