ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ನಡೆಯುವ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ ನಡೆಯುವ MPL (season-04) ಕ್ರಿಕೆಟ್ ಟೂರ್ನಮೆಂಟ್ 1/02/2025 ರಂದು ಶಾರ್ಜಾ ಬತಾಯ ಗ್ರೌಂಡ್ ಅಲ್ಲಿ ಜರಗಲಿರುವುದು.
ಇದರ ಪ್ರಯುಕ್ತ ಜರ್ಸಿ ಬಿಡುಗಡೆ ಕಾರ್ಯಕ್ರಮ 25/01/2025 ರಂದು MMCT ಕ್ರಿಕೆಟ್ ಗ್ರೌಂಡ್ ದುಬೈ ನಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಉದ್ಯಮಿ ರೋಷನ್ ಕಂಪ ರಾಮಕ್ಷತ್ರಿಯ ಸಂಘ ಯುಎಇ ಅಧ್ಯಕ್ಷರಾದ ಇಶ್ವರ್ ಬಲ್ಕಿ ರಕ್ಷಿತ್ ಪುತ್ತೂರು ರೇಷ್ಮಾ ಹಾಗೂ ವೇದ ಅತಿಥಿಗಳಾಗಿ ಬಂದಿದ್ದರು ಮಹೇಶ್ ಚಂದ್ರಗಿರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಸುಗಂಧರಾಜ ಬೇಕಲ್ ಸ್ವಾಗತಿಸಿದರು ಸ್ಪೋರ್ಟ್ಸ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುದುರೆಕೋಡು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದರು ಹರಿಕೋಟೆ ನಿರೂಪಿಸಿದರು ಸದಸ್ಯರೆಲ್ಲ ಭಾಗವಹಿಸಿದರು.