ಮಂಗಳೂರಿನ ಚಾಲಕರ ಸಮುದಾಯ, ಪೂರ್ಣೇಶ್ ಮತ್ತು ಸಂದೀಪ್ ಡಿಸಿಲ್ವಾ ಮತ್ತು ಅವರ ತಂಡದ ಪ್ರತಿನಿಧಿತ್ವದಲ್ಲಿ, ಸ್ಥಳೀಯ ಟ್ಯಾಕ್ಸಿ ಸೇವೆಗಳಿಗೆ ಆದ್ಯತೆಯ ಡಿಜಿಟಲ್ ಪರಿಹಾರವಾಗಿ ಟೌನೆರ್ ಮೊಬೈಲ್ ಟ್ಯಾಕ್ಸಿ ಮೀಟರ್ ಅಪ್ಲಿಕೇಶನ್ ಇಂದು ಅಳವಡಿಸಿಕೊಳ್ಳಲಿದೆ ಎಂದು ಒನ್ ಇಂಡಿಯಾ ಒನ್ ಟ್ಯಾಕ್ಸಿ ಇದರ ಕಾರ್ಯ ನಿರ್ವಹಣಾ ಅಧಿಕಾರಿಯಾದ ರಘು ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ ಅವರು , ಕಳೆದ ಒಂದು ತಿಂಗಳಿಂದ ಅಪ್ಲಿಕೇಶನ್ನನ್ನು ಪರಿಶೀಲಿಸಿದ ಬಳಿಕ, ಚಾಲಕರು ಇದರ ನ್ಯಾಯವಾದ ಬೆಲೆ ನಿಗದಿ, ಪಾರದರ್ಶಕತೆ ಮತ್ತು ಸ್ವತಂತ್ರತೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು- ಇದು ಚಾಲಕರು ಮತ್ತು ಪ್ರಯಾಣಿಕರು ಎದುರಿಸುತ್ತಿದ್ದ ದೀರ್ಘಕಾಲೀನ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದರು .
ಈ ಬೆಳವಣಿಗೆ ಭಾರತ ಸರ್ಕಾರದ ಟ್ಯಾಕ್ಸಿ ಸಹಕಾರ್ ಉಪಕ್ರಮಕ್ಕೆ ಹೊಂದಿಕೆಯಾಗಿದ್ದು, ಸಮುದಾಯದ ಚಾಲಿತ ಸಂಚಾರ ವೇದಿಕೆಗಳನ್ನು ಉತ್ತೇಜಿಸುತ್ತದೆ ಟೌನೆರ್ ಅಪ್ಲಿಕೇಶನ್ ವಿಶೇಷವಾಗಿ ಈ ಕೆಳಗಿನ ರೀತಿಯಲ್ಲಿ ಶಕ್ತಿಮಂತರಿಸುತ್ತದೆ ಚಾಲಕರಿಗೆ ತಮ್ಮದೇ ಆದ ದರ ನಿಗದಿಪಡಿಸುವ ಹಕ್ಕು, ನ್ಯಾಯಸಮ್ಮತ ಆದಾಯ, ಮತ್ತು ಶೋಷಣಾತ್ಮಕ ಮಾದರಿಗಳಿಂದ ದೂರವಿರುವ ಸಾಧ್ಯತೆಗಳಿವೆ . ಪ್ರಯಾಣಿಕರಿಗೆ – “ಒನ್ ಇಂಡಿಯಾ, ಒನ್ ಟ್ಯಾಕ್ಸಿ (OIOT)” ಸಂವೇದನೆಯೊಂದಿಗೆ ಮಾನಕೃತ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದರು .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದೀಪ್ ಡಿಸಿಲ್ವಾ ಓಲಾ ಉಬರ್ ಕ್ಕಿಂತಲೂ ಟೌನೆರ್ ಅಪ್ಲಿಕೇಶನ್ ಉತ್ತಮವಾಗಿದೆ . ಇದು ರಾಜ್ಯ ಅಂತಾರಾಜ್ಯ ಮಟ್ಟದಲ್ಲಿ ಸೇವೆಯನ್ನು ನೀಡಲಿದೆ ಎಂದು ತಿಳಿಸಿದರು .ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ , ಯಶೋಧರ್ , ಪತ್ರಪ್ಪ ಉಪಸ್ಥಿತರಿದ್ದರು .