ಕಾಸರಗೋಡು:ಕನ್ನಡ ಭವನ ಮತ್ತು ಗ್ರಂಥಾಲಯಕನ್ನಡ ಭವನ ಪ್ರಕಾಶನ ಕಾಸರಗೋಡು. ಕನ್ನಡ ಭವನದ ರಜತ ಸಂಭ್ರಮ ನಾಡು ನುಡಿ ಹಬ್ಬ 2026 ಪ್ರಯುಕ್ತ ನೀಡಲಾಗುವ ಮಹಾನ್ ಇತಿಹಾಸಗಾರ ಮತ್ತು ಕರಾವಳಿ ಭಾಗದ ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ ಮಹನೀಯರಾದ ಬೇಕಲ ರಾಮನಾಯಕರ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ”ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ 2026 ” ನ್ನು ಯುವ ಪತ್ರಕರ್ತ, ಸಾಹಿತಿ ಗಿರೀಶ್ ಪಿಎಂ ಇವರಿಗೆ ಜ.18ರಂದು ಕಾಸರಗೋಡು ಕನ್ನಡ ಭವನ ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ನೀಡಿ ಅಭಿನಂದಿಸಲಾಯಿತು .