ಮಂಜೇಶ್ವರ: ಬಾಕುಡ ಸಮುದಾಯದ 18 ದೇವಸ್ಥಾನಗಳಲ್ಲಿ ನೇಮೋತ್ಸವ ಹಾಗೂ ನಾಗ ಬೆರ್ಮೆರೆ ಸೇವೆಯು ಮಾರ್ಚ್ 15 ರಿಂದ 28 ರ ವರೆಗೆ ವಿವಿಧ ದೈವಸ್ಥಾನ ಹಾಗೂ ನಾಗ ಬನದಲ್ಲಿ ಜರಗಲಿದೆ. ಇದರ ಭಾಗವಾಗಿ ನೇಮೋತ್ಸವದ ಉದಿಪು ಕ್ಷೇತ್ರ ಎಂದು ಕರೆಯಲ್ಪಡುವ ಕೊಡಿಂಚಿರ್ ಗೆ ಮಾರ್ಚ್ 15 ರಂದು ಬಳ್ಳಾರ್ ಭಂಡಾರ ಮನೆಯಿಂದ ಭಂಡಾರ ಹೊರಡಲಿದೆ.ಈ ಸಂಧರ್ಭದಲ್ಲಿ ಸಮುದಾಯದ 18 ದೈವಸ್ಥಾನಗಳ ದೈವದ ಪಾತ್ರಿಗಳು, ಅಡಳಿತ ಸಮಿತಿಯ ಪ್ರತಿನಿಧಿಗಳು ಮತ್ತು ಬಾಕುಡ ಸಮುದಾಯದ ಕೇಂದ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಭಂಡಾರವು ಉದಿಪು ಕ್ಷೇತ್ರ ಕೊಡಿಂಚಿರ್ ಗೆ ಹೊರಡಲಿದೆ.ಈ ಸಂದರ್ಭದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಾಕುಡ ಸಮಾಜ ಕೇಂದ್ರ ಸಮಿತಿ ತಿಳಿಸಿದೆ.
18 ದೈವಸ್ಥಾನಗಳಲ್ಲಿ ಜರಗುವ ನಾಗ ಬೆರ್ಮೆರೆ ಸೇವೆ ಹಾಗೂ ನೇಮೋತ್ಸವದ ವಿವರ.
- ನಾಗಬೆರ್ಮೆರ್ ಶ್ರೀ ಕನ್ನಿ ಉಳ್ಳಾಲ್ತಿ ಗೋವಿಂದ ಜುಮಾದಿ ದೈವಸ್ಥಾನ ಕೊಡಿಂಚಿರ್ – ಮಾರ್ಚ್ 15 ರಿಂದ 16
- ಶ್ರೀ ಉಳ್ಳಾಲ್ತಿ ನಾಗಬ್ರಹ್ಮ ಕೋಮರಾಯ ಚಾಮುಂಡಿ ದೈವಸ್ಥಾನ ಕುಬನೂರು – ಮಾರ್ಚ್ 16 ರಿಂದ 17
- ಅಡ್ಕ ಶ್ರೀ ಉಳ್ಳಾಲ್ತಿ ಬಿಲ್ಲಾರ ಅಣ್ಣಪ್ಪ ಪಂಜುರ್ಲಿ ಧೂಮಾವತಿ ದೈವಸ್ಥಾನ ಪರಂಕಿಲ – ಮಾರ್ಚ್ 17 ರಿಂದ 18.
- ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಕೋಮರಾಯ ಚಾಮುಂಡೇಶ್ವರಿ ದೈವಸ್ಥಾನ ಉದ್ಯಾವರ ಮಾರ್ಚ್ 17 ರಿಂದ 18
- ಶ್ರೀ ಧೂಮಾವತಿ ಕೋಮರಾಯ ದೈವಸ್ಥಾನ ಕಕ್ಕೆಪ್ಪಾಡಿ ಪುತ್ತಿಗೆ – ಮಾರ್ಚ್ 18 ರಿಂದ 19
- ಶ್ರೀ ನಾಗಬೆರ್ಮೆರ್ ಮರ್ಲ್ ಧೂಮಾವತಿ ದೈವಸ್ಥಾನ ಬಡಾಜೆ .ಮಾರ್ಚ್ 18 ರಿಂದ 19
- ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ ಇಚ್ಲಂಗೋಡು-ಮಾರ್ಚ್ 19 ರಿಂದ 20
- ಶ್ರೀ ಕನ್ನಿ ಉಳ್ಳಾಲ್ತಿ ಮೈಸಂದಾಯ ಪರಿವಾರ ದೈವಗಳ ದೈವಸ್ಥಾನ ಕುಳೂರು – ಮಾರ್ಚ್ 19 ರಿಂದ 20
- ಶ್ರೀ ಕೋಮರಾಯ ಚಾಮುಂಡಿ ದೈವಸ್ಥಾನ ಬಳ್ಳಾರ್ – ಮಾರ್ಚ್ 20 ರಿಂದ 21
- ಶ್ರೀ ಉಳ್ಳಾಲ್ತಿ ಮೈಸಂದಾಯ ದೈವಸ್ಥಾನ ತಾಲೆವು,ಕುಂಜತ್ತೂರು- ಮಾರ್ಚ್ 20 ರಿಂದ 21
- ಶ್ರೀ ಉಳ್ಳಾಲ್ತಿ ಕೋಮರಾಯ ದೈವಸ್ಥಾನ ಬೇಳ – ಮಾರ್ಚ್ 20 ರಿಂದ 21
- ಶ್ರೀ ಉಳ್ಳಾಲ್ತಿ ಪರಿವಾರ ದೈವಗಳ ದೈವಸ್ಥಾನ ಮಜಲ್ – ಮಾರ್ಚ್ 21 ರಿಂದ 22
- ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಬಜಿಲೇರಿ ಮಾರ್ಚ್ 21 ರಿಂದ 22
- ಶ್ರೀ ಕೋಮಾರು ಚಾಮುಂಡಿ ಜುಮಾದಿ ಬಂಟ ದೈವಸ್ಥಾನ ಕರೆಕಂಡ- ಮಾರ್ಚ್ 21 ರಿಂದ 22
- ಶ್ರೀ ನಾಗಬ್ರಹ್ಮ ಬಿಲ್ಲಾರ ಧೂಮಾವತಿ ದೈವಸ್ಥಾನ ಮರೋಳಿ – ಮಾರ್ಚ್ 21 ರಿಂದ 22
- ಶ್ರೀ ಉಳ್ಳಾಲ್ತಿ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ ಕೌಡೂರು – ಮಾರ್ಚ್ 22 ರಿಂದ 23
- ಶ್ರೀ ನಾಗಬ್ರಹ್ಮ ಕಾಳಿ ಚಾಮುಂಡಿ ದೈವಸ್ಥಾನ ಹೇರೂರು- ಮಾರ್ಚ್ 24 ರಿಂದ 25
- ಶ್ರೀ ಧೂಮಾವತಿ ದೈವಸ್ಥಾನ ಕುಂಬಳೆ – ಮಾರ್ಚ್ 26 ರಿಂದ 27
- ಕುಡಾಲ್ ಶ್ರೀ ಕೋಮಾರು ಚಾಮುಂಡಿ ದೈವಸ್ಥಾನ ಪಚ್ಲಂಪಾರೆ – ಮಾರ್ಚ್ 27 ರಿಂದ 28