ರಸ ಗೊಬ್ಬರದ ಬೆಲೆಏರಿಕೆ : ರೈತಸಂಘದ ಪ್ರತಿಭಟನೆ

ಕೇಂದ್ರದ ಮೋದಿ ಸರಕಾರವು ರಾಸಾಯಿನಿಕ ಗೊಬ್ಬರಗಳ ಬೆಲೆ ಯನ್ನು ವಿಪರೀತವಾಗಿ ಹೆಚ್ಚಿಸಿದನ್ನು ಪ್ರತಿಭಟಿಸಿಕೊಂಡು ರೈತ ಸಂಘ(AIKS) ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ರೈತರ ಮಾರ್ಚ್ ಮತ್ತು ಧರಣಿ ನಡೆಯಿತು.

ರೈತಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎ. ಚಂದ್ರಶೇಖರ್ ಉದ್ಘಾಟಿಸಿದರು. ಏರಿಯಾ ಅಧ್ಯಕ್ಷರಾದ ಅಬ್ದುಲ್ ರಸಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸಾಮಾಣಿ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಭಂಡಾರಿ, ಅಬ್ದುಲ್ಲ ಕೆ, ಶ್ರೀಮತಿ.ರಹಮತ್ ನೇತಾರರಾದ ಚಂದ್ರ ನಾಯ್ಕ್, ರಾಮಚಂದ್ರ ಟಿ, ಹುಸೈನ್ ಮಾಸ್ಟರ್, ಚಂದ್ರಹಾಸ ಶೆಟ್ಟಿ ಮಾಸ್ಟರ್, ಅಬ್ಬಾಸ್ ಮುನ್ನೂರ್, ಸದಾನಂದ ಕೊರಿಕ್ಕಾರ್, ಕರುಣಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ಮೊದಲಾದವರು ಭಾಗವಹಿಸಿದರು.

ಏರಿಯಾ ಕಾರ್ಯದರ್ಶಿ ಅಶೋಕ್ ಭಂಡಾರಿ ಸ್ವಾಗತಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!