CITU ಮಂಜೇಶ್ವರ ಏರಿಯಾ ಸಮಾವೇಶ ಹೊಸಂಗಡಿ KSTA ಭವನದಲ್ಲಿ ನಡೆಯಿತು .CITU ಕಾಸರಗೋಡು ಜಿಲ್ಲಾ ಟ್ರೆಶರಾರ್ ತಂಬಾನ್ ನಾಯರ್ ಉದ್ಘಾಟಿಸಿದರು. CITU ಮಂಜೇಶ್ವರ ಏರಿಯಾ ಅಧ್ಯಕ್ಷರಾದ ಡಿ ಕಮಲಾಕ್ಷ ಅಧ್ಯಕ್ಷತೆ ವಹಿಸಿದರು .ಜಿಲ್ಲಾ ಕಾರ್ಯದರ್ಶಿ ಶೋಭಾ ಬಿ , ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಏರಿಯಾ ಖಜಾಂಜಿ ಸತೀಶ್ ಎಲಿಯಾನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಪ್ರಶಾಂತ್ ಕನಿಲ ವರದಿ ಮಂಡಿಸಿ, ಚರ್ಚೆ ಹಾಗೂ ಚರ್ಚೆಗೆ ಉತ್ತರ ನೀಡಿದ ಬಳಿಕ ನೂತನ ಅಧ್ಯಕ್ಷ ರಾಗಿ ಡಿ ಕಮಲಾಕ್ಷ, ಕಾರ್ಯದರ್ಶಿ ಸತೀಶ ಎಲಿಯಾನ, ಖಜಾಂಜಿಯಾಗಿ ಸರೋಜಾ, ಚಂದ್ರ ನಾಯ್ಕ್ , ನವೀನ್ ಕುಮಾರ್ ಟಿ ,ಉಪಾಧ್ಯಕ್ಷರಾಗಿ ಮಾಲತಿ ಉಮೇಶ್ ಅಟ್ಟೆಗೊಳಿ, ಉದಯ ಮುನ್ನೂರು ಜೊತೆ ಕಾರ್ಯದರ್ಶಿಯಾಗಿ ಒಟ್ಟು 25 ಮಂದಿಯ ಏರಿಯಾ ಸಮಿತಿಯನ್ನು ರಚಿಸಿ ಆಯ್ಕೆ ಮಾಡಲಾಯಿತು