ಮಂಜೇಶ್ವರ: ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ನಿಟ್ಟಿನಲ್ಲಿ, ಪಿರಾರ ಮೂಲೆಯ ಅಬೂಬಕ್ಕರ್ ಸಿದ್ದೀಖ್ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಗೌಸಿಯಾ ನಗರ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ‘ಗ್ರ್ಯಾಂಡ್ ಇಪ್ತಾರ್ ಸಂಗಮ’ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಅವರು ಮಾತನಾಡಿ, “ರಂಜಾನ್ ಮಾಸವು ತ್ಯಾಗ ಮತ್ತು ಸಮಾನತೆಯ ಸಂಕೇತವಾಗಿದೆ. ಇಂತಹ ಇಫ್ತಾರ್ ಕೂಟಗಳು ಸಮಾಜದಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸವನ್ನು ಗಟ್ಟಿಗೊಳಿಸುತ್ತವೆ,” ಎಂದು ಹಾರೈಸಿದರು.
ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾದ ಬಶೀರ್ ಕನಿಲ ಅವರು ಕಾರ್ಯಕ್ರಮಕ್ಕೆ ಶುಭ ಕೋರಿ, ಸ್ಥಳೀಯ ಧಾರ್ಮಿಕ ಕೇಂದ್ರಗಳು ನಡೆಸುತ್ತಿರುವ ಇಂತಹ ಸಾಮಾಜಿಕ ಕಾರ್ಯಗಳು ಶ್ಲಾಘನೀಯ ಎಂದರು.
ಈ ಭವ್ಯ ಸಂಗಮದ ಯಶಸ್ವಿಗಾಗಿ ಪ್ರಮುಖರಾದ ಮೊಹಮ್ಮದ್ ಸಿದ್ದೀಖ್, ಪಳ್ಳಿ ಕುಂಞ್ಞ ಹಾಜಿ, ಮೆಹಮೂದ್ ಹಾಜಿ, ಝೈನುದ್ದೀನ್ ಹಾಜಿ, ಮುಸ್ತಾಕ್, ಸಾದಿಖ್ ಹಾಗೂ ಕಲೀಲ್ ಅವರು ಮುಂಚೂಣಿಯಲ್ಲಿದ್ದು ನೇತೃತ್ವ ನೀಡಿದರು.
ಸ್ಥಳೀಯ ನೂರಾರು ಸಾರ್ವಜನಿಕರು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು. ಕೊನೆಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.