ಉದ್ಯಾವರ: ಶ್ರೀ ಅರಸು ಮಂಜಿಷ್ಣಾರ್ ಕೃಪಾ ಜೈ ವೀರ ಮಾರುತಿ ವ್ಯಾಯಾಮಶಾಲೆಯ ವತಿಯಿಂದ 31ನೇ ವಾರ್ಷಿಕ ಭಜನೋತ್ಸವವು ಮಾರ್ಚ್ 28 ಮತ್ತು 29ರಂದು ಭಕ್ತಿಭಾವದಿಂದ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಮಾರ್ಚ್ 28ರಂದು ಸಂಜೆ 6:40ಕ್ಕೆ ಶ್ರೀ ಶಂಭು ನಂಬೂದಿರಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಭಕ್ತಿಗೀತೆಗಳೊಂದಿಗೆ ಭಜನೆ ನಡೆಯಲಿದೆ.
ಮಾರ್ಚ್ 29ರಂದು ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಅದೇ ದಿನ ಸಂಜೆ 6:40ಕ್ಕೆ ಭಜನಾ ಮಂಗಳೋತ್ಸವ ಹಾಗೂ ಮಹಾಪೂಜೆ ನಡೆಯಲಿದೆ.
ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಿ ಶಕ್ತಿ ಕಲಾಬಳಗ, ಊರ್ವ ಚಿಲಿಂಬಿ ತಂಡದಿಂದ ಜೋಡು ಜೀಟಿಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವೀರ ಮಾರುತಿ ದೇವರ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಭಕ್ತರಲ್ಲಿ ಮನವಿ ಮಾಡಿದ್ದಾರೆ.