ಹನಗೋಡು : ಮೇವನ್ನರಸಿ ರಾತ್ರಿ ಸಮಯದಲ್ಲಿ ರೈತರ ಜಮೀನಿಗೆ ಲಗ್ಗೆಯಿಟ್ಟ ಒಂಟಿ ಸಲಗವೊಂದು ಮೂರು ಮಾವಿನ ಮರಗಳನ್ನ ನಾಶಗೊಳಿಸಿರುವ ಘಟನೆ ಹನಗೋಡು ಹೋಬಳಿಯ ಕೊಳವಿಗೆ ಗ್ರಾಮದಲ್ಲಿ ನಡೆದಿದೆ. ಕೊಳವಿಗೆ ಗ್ರಾಮದ ಶಿವರುದ್ರಪ್ಪ ಎಂಬುವರಿಗೆ ಸೇರಿದ ಮಾವಿನ ಮರಗಳು ಆನೆ ದಾಳಿಯಿಂದ ಸಂಪೂರ್ಣ ನಾಶವಾಗಿದ್ದು, ಇನ್ನೇನು ಫಸಲನ್ನು ಕೂಯ್ಲು ಮಾಡುವ ಸಮಯವಾಗಿದ್ದು, ನಷ್ಟದಿಂದ ರೈತ ಶಿವರುದ್ರಪ್ಪ ರವರು ಪರಿಹಾರಕ್ಕಾಗಿ ಅರಣ್ಯ ಇಲಾಖೆಯವರನ್ನು ಮನವಿ ಮಾಡಿದ್ದಾರೆ.