ತುರ್ತು ಸಂದರ್ಭದಲ್ಲಿದ್ದ ಕ್ಷಣದಲ್ಲಿ ಸ್ಪಂದಿಸುವ ಸಂತ್ರಸ್ಥರ ಬದುಕಿಗೆ ಭರವಸೆಯಾಗಿರುವ ಸ್ಥಳಿಯ ಯೋಧರಂತೆ ಕಷ್ಟ ಕಾರ್ಪಣ್ಯಗಳನ್ನು ಸ್ಪಂದಿಸಿ ಸಮಾಜಪರ ಕೆಲಸಗಳನ್ನು ನಡೆಸಿ ಜನಪ್ರಿಯಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ” ಶೌರ್ಯ ” ವಿಪತ್ತು ನಿರ್ವಾಹಣ ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್(ರಿ) ಕಾಸರಗೋಡು-ಮಂಜೇಶ್ವರ ತಾಲೂಕು , ಶೌರ್ಯ ವಿಕೋಪ ಪರಿಹಾರ ಸಮಿತಿ ಕಾಸರಗೋಡು , ಮಂಜೇಶ್ವರ ತಾಲೂಕು ಇದರ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಶ್ರೀ ಶಾರದಾಂಬ ಸಭ ಭವನ ಅಣಂಗೂರಿನಲ್ಲಿ ನಡೆಯಿತ್ತು .
ಈ ತರಬೇತಿ ಕಾರ್ಯಗಾರವನ್ನು ಕಾಸರಗೋಡು ಪೊಲೀಸ್ ಅಧಿಕಾರಿ ಶ್ರೀ ರಾಜೀವನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ , ಕಳೆದ 5 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿರುಸುವ ಎಲ್ಲಾ ಶೌರ್ಯ ವಿಪತ್ತು ನಿರ್ವಾಹಣ ಘಟಕದ ಸ್ವಯಂ ಸೇವಕರಿಗೆ ಶುಭ ಹಾರೈಸಿದರು .
ಕಾಸರಗೋಡು ಜಿಲ್ಲಾ ಸಂಚಾಲಕ ಬಾಬು ನಾಯಕ್ . ಎಸ್ . ಪ್ರಾಸ್ತವಿಕ ಮಾತನಾಡಿದರು .
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಅಧಕ್ಷರಾದ ಶ್ರೀ ಅಖಿಲೇಶ್ ನಗುಮುಗಂ ಮುಖ್ಯ ಅತಿಧಿಯಾಗಿ ಭಾಗವಹಿಸಿದರು .
ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ತೊಟ್ಟತ್ತೋಡಿ ಉಪಸ್ಥಿತರಿದ್ದರು , ಈ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಶೌರ್ಯ ಸ್ವಯಂ ಸೇವಕರನ್ನು ಕಾಸರಗೋಡು ತಾಲೂಕು ಭಜನಾ ಪರಿಷತ್ ಅಧಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ ಅಭಿನಂದಿಸಿದರು . ಹಾಗೂ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ಪಾಯಸ್ ಅವರು ತರಬೇತಿ ಕಾರ್ಯಗಾರದಲ್ಲಿ ಭವಿಷ್ಯದಲ್ಲಿ ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು , ಮತ್ತು ಉತ್ತಮ ಸಾಂಸ್ಥಿಕ ಅಭಿವೃದ್ಧಿಯನ್ನು , ಹೇಗೆ ನಡೆಸಬೇಕು ಎoಬುದರ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನಗಳನ್ನು ನೀಡಿದರು .
ಕೇಂದ್ರ ಒಕ್ಕೂಟದ ಅಧಕ್ಷರಾದ ಶ್ರೀ ಜ್ಞಾನೇಶ್ವರ ಆಚಾರ್ಯ ಪರಕಿಲ್ಲ , ಮಾಸ್ಟರ್ಗಳಾದ ಶ್ರೀ ಮಾಧವ ಗೌಡ , ಶ್ರೀ ಜೈವಂತ ಪಟಗಾರ್ , ಶ್ರೀ ಗಣೇಶ ಆಚಾರ್ಯ , ಶ್ರೀ ಜಗನ್ನಾಥ್ , ಶ್ರೀ ಪ್ರದೀಪ್ ಕಿರಣ್ , ಕಾಸರಗೋಡು , ಮಂಜೇಶ್ವರ ತಾಲೂಕಿನ ಶೌರ್ಯ ಘಟಕದ ಕ್ಯಾಪ್ಟನ್ಗಳಾದ ಶ್ರೀ ರವೀಂದ್ರ ಅಣoಗೂರು , ಮತ್ತು ಶ್ರೀ ಸುರೇಂದ್ರ ಅವರು ತರಬೇತಿ ಕಾರ್ಯಗಾರದಲ್ಲಿ ಬಾಗವಹಿಸಿದರು , ಹಾಗೂ ಎಲ್ಲಾ ವಲಯದ ಮೇಲ್ವಿಚಾರಕರು ಉಪಸ್ಥಿರಿದ್ದರು . ಈ ಕಾರ್ಯಕ್ರಮಕ್ಕೆ ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ದಿನೇಶ್ ಸ್ವಾಗತಿಸಿ , ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶಶಿಕಲಾ ಸ್ವರ್ಣ ವಂದಿಸಿದರು .