ಜಿಂಬಾಬ್ವೆಯಲ್ಲಿ ಭೀಕರ ದೋಣಿ ದುರಂತ: 15 ಮಂದಿ ಸಾವು, 27 ಮಂದಿ ನಾಪತ್ತೆ

ಹರಾರೆ: ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, 77 ಮಂದಿಯನ್ನು ರಕ್ಷಿಸಲಾಗಿದ್ದು, ಅವರು ಕೆರೆಯ ಸಣ್ಣ ದ್ವೀಪವೊಂದನ್ನು ತಲುಪಿದ್ದಾರೆ.

ಅಪಘಾತದ ವೇಳೆ ದೋಣಿಯಲ್ಲಿ 114 ವಯಸ್ಕ ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿ ಇದ್ದರು ಎಂಬುದು ಟಿಕೆಟ್ ದಾಖಲೆಗಳಿಂದ ತಿಳಿದುಬಂದಿದೆ. ಆದರೆ, ಟಿಕೆಟ್ ಅಗತ್ಯವಿಲ್ಲದ ವಯಸ್ಸಿನ ಮಕ್ಕಳು ಎಷ್ಟು ಮಂದಿ ದೋಣಿಯಲ್ಲಿದ್ದರು ಎಂಬುದು ಸ್ಪಷ್ಟವಾಗಿಲ್ಲ.

ದೋಣಿಯ ಗರಿಷ್ಠ ಸಾಮರ್ಥ್ಯ 90 ಮಂದಿಯಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ರಕ್ಷಿಸಲ್ಪಟ್ಟವರನ್ನು ಸುರಕ್ಷಿತವಾಗಿ ಕರೆತರಲು ದೋಣಿಗಳನ್ನು ಕಳುಹಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!