ಮರಣದವಡೆಗೆ ದಾರಿಮಾಡಿಕೊಟ್ಟ ತಲಪಾಡಿ ಟೋಲ್ ಅಕ್ಕಪಕ್ಕ: ರಸ್ತೆ ಒತ್ತುವರಿ ಮಾಡಿ ನಿಲ್ಲುವ ಘನ ವಾಹನಗಳು, ಕಣ್ಣುಮುಚ್ಚಿ ಕುಳಿತ ಆಡಳಿತ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಟೋಲ್ ಗೇಟ್ ದಾಟಿ ಸ್ವಲ್ಪ ಮುನ್ನಡೆದರೆ ಸಾಕು, ಅಲ್ಲಿ ಸಾವಿನ ದೂತರು ಹೊಂಚುಹಾಕಿ ಕುಳಿತಿರುವ ದೃಶ್ಯ ಕಣ್ಣಿಗೆ ರಾಚುತ್ತದೆ. ರಸ್ತೆಯ ಎಡಭಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ರಾತ್ರಿ ಹಾಗೂ ಹಗಲು ಎನ್ನದೆ ಮನಸೋಇಚ್ಛೆ ನಿಲ್ಲಿಸಲಾಗುತ್ತಿರುವ ಘನ ವಾಹನಗಳು ಇಂದು ಸ್ಥಳೀಯರಿಗೆ ಮತ್ತು ಸವಾರರಿಗೆ ದೊಡ್ಡ ಶಾಪವಾಗಿ ಪರಿಣಮಿಸಿವೆ.​ಟೋಲ್ ಗೇಟ್‌ನ ಸಮೀಪವಿರುವ ಹೋಟೆಲ್‌ಗಳು ಮತ್ತು ಇತರ ವ್ಯಾಪಾರ ಕೇಂದ್ರಗಳಿಗೆ ಬರುವ ಗ್ರಾಹಕರು ಹಾಗೂ ಕಾಸರಗೋಡು ಕಡೆಗೆ ಮರಳುವ ವಾಹನ ಸವಾರರಿಗೆ ಈ ನಿಂತಿರುವ ಬೃಹತ್…

Read More

ದುಬೈಗೆ ಹೋಗುವ ಮಂಜೇಶ್ವರ ಶಾಸಕರಿಗೆ ದೇರಂಬಲ ಸೇತುವೆ ನೋಡಲು ಸಮಯವಿಲ್ಲ -ಆದರ್ಶ ಬಿ ಎಂ

ಮಿಯಪದವು : ಮಂಜೇಶ್ವರ ಶಾಸಕರು ಮಂಜೇಶ್ವರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತಿಲ್ಲ… ಪ್ರತಿ ತಿಂಗಳು ದುಬೈಗೆ ಹೋಗುವ ಮಂಜೇಶ್ವರ ಶಾಸಕರಿಗೆ ದೇರಂಬಳ ಸೇತುವೆ ಅನಾಸ್ಥೆ ನೋಡಲು ಸಮಯ ವಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಆದರ್ಶ ಬಿ ಎಂ ಶಾಸಕರ ಬೇಜವಾಬ್ದಾರಿ ಯನ್ನು ಖಂಡಿಸಿದರು. ಮೀoಜ – ಪೈವಳಿಕೆ -ಮಂಗಲ್ಪಾಡಿ ಸಂಪರ್ಕ ದೇರಂಬಳ ಸೇತುವೆ ಸಂಚಾರಕ್ಕೆ ಅಯೋಗ್ಯವಾಗಿ 4 ವರ್ಷ ಕಳೆಯಿತು.. ಮಂಜೇಶ್ವರ ಶಾಸಕರು ಕಣ್ಣಿದ್ದು ಕುರುಡರಂತೆ ವರ್ತಿಸುವುದು ಬೇಜವಾಬ್ದಾರಿ ಮಾತ್ರ ಅಲ್ಲ ಅಹಂಕಾರದ ಪರಮಾವಾದಿ ಎಂದು…

Read More

12 ವರ್ಷಗಳ ಹಿಂದಿನ ಕುಂಬಳೆ ದರೋಡೆ ಪ್ರಕರಣದ ಪ್ರಮುಖ ಆರೋಪಿ ಬಂಧನ

ಮಂಜೇಶ್ವರ : ಕುಂಬಳೆಯಲ್ಲಿ ಮನೆ ಯಜಮಾನ ಹಾಗೂ ಕುಟುಂಬವನ್ನು ಬಂಧಿಯನ್ನಾಗಿಸಿ 42 ಪವನ್ ಚಿನ್ನ ಮತ್ತು ಕಾಲು ಲಕ್ಷ ರೂಪಾಯಿ ದೋಚಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ. ಕರ್ನಾಟಕ ಮೂಲದ ಸಂಭ್ಯ ಅಸೀಸ್ ಎಂಬ ಅಬ್ದುಲ್ ಅಸೀಸ್ (58) ಎಂಬಾತನನ್ನು ಕಾಸರಗೋಡು ಕ್ರೈಂ ಬ್ರಾಂಚ್ ತಂಡವು ಪುತ್ತೂರಿನಲ್ಲಿ ವಶಕ್ಕೆ ತೆಗೆದುಕೊಂಡಿದೆ. ​2012 ಡಿಸೆಂಬರ್ 22ರ ರಾತ್ರಿ ಈ ದರೋಡೆ ನಡೆದಿತ್ತು. ಕುಂಬಳ ಅನಿಲ್ ಕುಂಬ್ಳೆ ರಸ್ತೆಯ ವಾಸಿ, ಮಂಗಳೂರು ಟ್ರಾನ್ಸ್‌ಪೋರ್ಟ್ ಆಪರೇಟರ್ ರಾಜೇಶ್ ಶೆಣೈ (44)…

Read More

ಮಂಜೇಶ್ವರ: ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ

ಮಂಜೇಶ್ವರ, ಜು.23: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು, ರಸಗೊಬ್ಬರದ ಬೆಲೆ ಏರಿಕೆ ಹಾಗೂ ಅಮೆರಿಕದೊಂದಿಗೆ ಮಾಡಿಕೊಂಡಿರುವ ಜನವಿರೋಧಿ ಒಪ್ಪಂದವನ್ನು ಖಂಡಿಸಿ ರೈತ ಸಂಘದ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯನ್ನು ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತ ವಿರೋಧಿ ನೀತಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಸಗೊಬ್ಬರಗಳ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು. ಅಮೆರಿಕದೊಂದಿಗೆ…

Read More

ಮಂಜೇಶ್ವರ: ಭಾರೀ ಮಳೆ: ಕುಸಿದುಬಿದ್ದ ಜಿಮ್ ಕಟ್ಟಡದ ಆವರಣ ಗೋಡೆ: ಕೂದಲೆಳೆತದ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಮಂಜೇಶ್ವರ: ಮಂಜೇಶ್ವರದ ಒಳಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಮೈ ಜಿಂ ಹೆಲ್ತ್ ಕ್ಲಬ್’ ಕಟ್ಟಡದ ಆವರಣ ಗೋಡೆಯು ಬುಧವಾರ ಸುರಿದ ಬಿರುಸಿನ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಯಾವುದೇ ಜೀವಹಾನಿ ಸಂಭವಿಸಿಲ್ಲದಿದ್ದರೂ, ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ​​ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ವಾಹನ ಸವಾರರು ಈ ಜಿಮ್ ಕಟ್ಟಡದ ಸಮೀಪವಿರುವ ರಸ್ತೆಯ ಮೂಲಕ ಸಂಚರಿಸುತ್ತಾರೆ. ಗೋಡೆ ಕುಸಿದುಬಿದ್ದ ಸಂದರ್ಭದಲ್ಲಿ ಅದೃಷ್ಟವಶಾತ್ ಯಾರೂ ಆ ಮಾರ್ಗದಲ್ಲಿ ಸಂಚರಿಸುತ್ತಿರಲಿಲ್ಲ. ಇದರಿಂದಾಗಿ ದೊಡ್ಡದೊಂದು ದುರಂತ ಕೂದಲೆಳೆತದ ಅಂತರದಲ್ಲಿ ತಪ್ಪಿದಂತಾಗಿದೆ….

Read More

ಉದ್ಯಾವರ ಹಿಂದೂ ರುದ್ರಭೂಮಿ ವಿವಾದ: ಸಮಾಧಿ ಧ್ವಂಸ ಆರೋಪ, ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಆಗ್ರಹ

ಕಾಸರಗೋಡು: ಉದ್ಯಾವರ ಹಿಂದೂ ರುದ್ರಭೂಮಿಯಲ್ಲಿ ಹಲವು ವರ್ಷಗಳಿಂದ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.ಸುಮಾರು 2.70 ಎಕರೆ ವಿಸ್ತೀರ್ಣ ಹೊಂದಿರುವ ಉದ್ಯಾವರ ಹಿಂದೂ ರುದ್ರಭೂಮಿಯಲ್ಲಿ ಅನೇಕ ವರ್ಷಗಳಿಂದ ಹಿಂದೂ ಸಮುದಾಯದ ಅಂತ್ಯಕ್ರಿಯೆಗಳು ನಡೆಯುತ್ತಿವೆ. ರುದ್ರಭೂಮಿಯ ಸುತ್ತಮುತ್ತ ಕಾನೂನು ಪ್ರಕಾರ ನಿರ್ದಿಷ್ಟ ಅಂತರದೊಳಗೆ ವಸತಿ ನಿರ್ಮಾಣಕ್ಕೆ ಅವಕಾಶ ಇರಬಾರದು. ಆದರೆ, ರುದ್ರಭೂಮಿಯ ಸುತ್ತಲೂ ಮನೆಗಳು ನಿರ್ಮಾಣವಾಗಿರುವ ಬಗ್ಗೆ ಸಭೆಯಲ್ಲಿ ಪ್ರಶ್ನೆ ಎತ್ತಲಾಯಿತು. ಇದೇ ವೇಳೆ,…

Read More

ಹೊಸಂಗಡಿಯಲ್ಲಿ ಭಕ್ತಿಭಾವದಿಂದ ಗಣೇಶೋತ್ಸವ ವಿಗ್ರಹ ಮುಹೂರ್ತ

46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ಮುಹೂರ್ತವು ಇಂದು ಬೆಳಿಗ್ಗೆ 8 ಗಂಟೆಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಕ್ಷೇತ್ರದ ಅರ್ಚಕರಾದ ಶ್ರೀ ತಿರುಮಲೇಶ್ ಆಚಾರ್ಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರೆ, ಶಿಲ್ಪಿ ಶ್ರೀ ಮಹೇಶ್ ಆಚಾರ್ಯ ಬಾಯಾರು ವಿಗ್ರಹ ಮುಹೂರ್ತ ನೆರವೇರಿಸಿದರು.ವಿಗ್ರಹ ಮುಹೂರ್ತವನ್ನು ಶಿಲ್ಪಿ ಶ್ರೀ ಮಹೇಶ್ ಆಚಾರ್ಯ ಬಾಯಾರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಗುರುಸ್ವಾಮಿ ಶ್ರೀ ಉದಯ ಪಾವಳ ಹಾಗೂ ಸಮಿತಿಯ ಅಧ್ಯಕ್ಷರಾದ ಶ್ರೀ ಯಾದವ ಬಡಾಜೆ, ಪ್ರ. ಕಾರ್ಯದರ್ಶಿ…

Read More

ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿಗೆ ಮತ್ತೆ ಕೋಟಿ ಅದೃಷ್ಟ

ಮಂಜೇಶ್ವರ: ಜುಲೈ 21ರಂದು ನಡೆದ ಸ್ತ್ರೀಶಕ್ತಿ ಲಾಟರಿಯ ಡ್ರಾದಲ್ಲಿ ಮೊದಲ ಬಹುಮಾನವಾದ ₹1 ಕೋಟಿ ಕಣ್ಣೂರು ಜಿಲ್ಲೆಯ ಪಯ್ಯನ್ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ ಟಿಕೆಟ್‌ಗೆ ದೊರೆತಿದೆ.SZ 204699 ಸಂಖ್ಯೆಯ ಟಿಕೆಟ್‌ಗೆ ಅದೃಷ್ಟ ಒಲಿದಿದೆ. ಈ ಟಿಕೆಟ್ ನ್ನು ಪಯ್ಯನ್ ಲಾಟರಿಯ ಸಬ್ ಏಜೆಂಟ್ ಆಗಿರುವ ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿ ಮೂಲಕ ಮಾರಾಟ ಮಾಡಲಾಗಿತ್ತು. ಬಳಿಕ ಅದನ್ನು ಮಜೀರ್ಪಳ್ಳ ಅರಸು ಲಾಟರಿ ಮಾರಾಟಗಾರರಿಗೆ ಹಸ್ತಾಂತರಿಸಲಾಗಿದ್ದು, ಅಲ್ಲಿಂದಲೇ ಅದೃಷ್ಟಶಾಲಿಯ ಕೈ ಸೇರಿದೆ.2026ರ ಮೇ 19ರಂದು ನಡೆದ ಸ್ತ್ರೀಶಕ್ತಿ…

Read More

ದೇರಂಬಳ ಸೇತುವೆ ಪುನರ್ ನಿರ್ಮಾಣಕ್ಕೆ ಆಗ್ರಹ; ಜಿಲ್ಲಾಧಿಕಾರಿಗೆ ಎಂ.ಎಲ್. ಅಶ್ವಿನಿ ಮನವಿ

ಮಂಗಲ್ಪಾಡಿ ಮತ್ತು ಮೀಂಜ ಪಂಚಾಯತುಗಳನ್ನು ಸಂಪರ್ಕಿಸುವ ದೇರಂಬಳ ಕಾಲ್ನಡಿಗೆಯ ಕಾಂಕ್ರೀಟ್ ಸೇತುವೆ ಸಂಪೂರ್ಣ ಶಿಥಿಲಗೊಂಡು ಕುಸಿದಿದ್ದು, ಹೊಸ ಸೇತುವೆ ನಿರ್ಮಾಣವಾಗದ ಕಾರಣ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜನರ ಸಂಚಾರಕ್ಕೆ ಮೂಲಭೂತ ಸೌಲಭ್ಯ ಒದಗಿಸದಿರುವುದು ನಾಗರಿಕರ ಮೇಲಿನ ಅನ್ಯಾಯ ಹಾಗೂ ಜನದ್ರೋಹ ಎಂದು ಆರೋಪಿಸಿದ್ದಾರೆ. ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಬಳಸುವ ಈ ಮಾರ್ಗದ ಸೇತುವೆ ಕುಸಿದ ಪರಿಣಾಮ,…

Read More

ಸಾಹಸಿ ಯುವಕನಿಂದ ಪ್ರಾಣಾಪಾಯದಿಂದ ಪಾರಾದ ಯುವತಿ: ಮಂಜೇಶ್ವರದಲ್ಲಿ ಮಾನವೀಯತೆ ಮೆರೆದ ಘಟನೆ

ಮಂಜೇಶ್ವರ: ತುಂಬಿ ಹರಿಯುತ್ತಿದ್ದ ಸುವರ್ಣಗಿರಿ ಹೊಳೆಗೆ ಆಕಸ್ಮಿಕವಾಗಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಯುವತಿಯೊಬ್ಬರನ್ನು ಸ್ಥಳೀಯ ಯುವಕ ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಅಪರೂಪದ ಘಟನೆ ದೇರಂಬಳದಲ್ಲಿ ಜರುಗಿದೆ. ​ಮೀಂಜ-ಮಂಗಲ್ಪಾಡಿ ಪಂಚಾಯತ್ ಸಂಪರ್ಕಿಸುವ ಶಿಥಿಲಗೊಂಡ ಕಾಲುಸೇತುವೆ ದಾಟುವಾಗ ಅಕ್ಕ-ತಂಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದುದರಿಂದ ತಲೆಸುತ್ತಿ ಯುವತಿ ಹೊಳೆಗೆ ಬಿದ್ದಿದ್ದಾರೆ. ತಂಗಿಯ ಆಕ್ರಂದನ ಕೇಳಿ ಅದೇ ದಾರಿಯಲ್ಲಿ ಬಂದ ಉದಯಕುಮಾರ್ ಶೆಟ್ಟಿ ತಕ್ಷಣ ಪ್ರವಾಹಕ್ಕೆ ಹಾರಿ ಯುವತಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ….

Read More
error: Content is protected !!