ಮಸ್ಕತ್ ಇಂಡಿಯನ್ ಸ್ಕೂಲ್ ಬಾಸ್ಕೆಟ್‌ಬಾಲ್ ತಂಡಕ್ಕೆ ಮಂಜೇಶ್ವರದ ಅನೋಕಿ ಆರ್. ನಾಯಕಿ

ಮಂಜೇಶ್ವರ: ಅಂತಾರಾಷ್ಟ್ರೀಯ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾಟಕ್ಕೆ ಓಮನ್ ದೇಶದ ಮಸ್ಕತ್ ಇಂಡಿಯನ್ ಸ್ಕೂಲ್ ತಂಡದ ನಾಯಕಿಯಾಗಿ ಮಂಜೇಶ್ವರದ ಅನೋಕಿ ಆರ್. ಆಯ್ಕೆಯಾಗಿದ್ದಾರೆ. ಮಂಜೇಶ್ವರ ಹೊಸಂಗಡಿ ಅಂಗಡಿಪದವು ನಿವಾಸಿಗಳಾದ ಅಶ್ವಿನಿ ಮತ್ತು ರೋಹಿದಾಸ್ ಬಿ.ಎಂ. ದಂಪತಿಯ ಪುತ್ರಿಯಾಗಿರುವ ಅನೋಕಿ ಆರ್. ಪ್ರಸ್ತುತ ಕುಟುಂಬದೊಂದಿಗೆ ಮಸ್ಕತ್‌ನಲ್ಲಿ ವಾಸವಾಗಿದ್ದು, ಮಸ್ಕತ್ ಇಂಡಿಯನ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ 21ರಿಂದ ಬಿಹಾರದಲ್ಲಿ ಅಂತಾರಾಷ್ಟ್ರೀಯ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾಟ ನಡೆಯಲಿದ್ದು, ವಿಶ್ವದ ವಿವಿಧ ದೇಶಗಳ ಇಂಡಿಯನ್ ಸ್ಕೂಲ್ ತಂಡಗಳು ಸೇರಿದಂತೆ ಭಾರತದ ಕೇಂದ್ರೀಯ ತಂಡ…

Read More

ಗಣೇಶೋತ್ಸವದಲ್ಲಿ ಹಿರಿಯ ವಕೀಲ ಅರುಣ್ ಶ್ಯಾಮ್ ಮಂಜೇಶ್ವರ ಭಾಗಿ

ಮಂಜೇಶ್ವರ: ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಮಂಜೇಶ್ವರ ಅವರು ಮಂಜೇಶ್ವರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಗಣೇಶನ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ನ್ಯಾ. ನವೀನ್ ರಾಜ್, ಪದ್ಮನಾಭ ಕಡಪರ, ಅವಿನಾಶ್ ಹೆಗ್ಡೆ, ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ವಕೀಲರಾಗಿ ಕಾಣಿಸಿಕೊಂಡಿರುವ ಅರುಣ್ ಶ್ಯಾಮ್ ಮಂಜೇಶ್ವರ…

Read More

ಅವೈಜ್ಞಾನಿಕ ಚರಂಡಿ ನಿರ್ಮಾಣ: ಪೊಸೋಟು ಕುಟುಂಬಕ್ಕೆ ನಿಲ್ಲದ ಸಂಕಷ್ಟ – ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

​ಮಂಜೇಶ್ವರ: ನೂತನವಾಗಿ ನಿರ್ಮಿಸಲಾದ ಪಟ್ಪಥ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಕಳೆದ ಮೂರು ವರ್ಷಗಳಿಂದ ಪೊಸೋಟು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಬದಿಯಲ್ಲಿರುವ ಕುಟುಂಬವೊಂದು ತೀವ್ರ ಸಂಕಷ್ಟ ಎದುರಿಸುತ್ತಿದೆ. ​ಸಮೀಪದ ಗೋವಿಂದ ಪೈ ಕಾಲೇಜು, ಅದರ ತಳಭಾಗ ಸೇರಿದಂತೆ ನಾಲ್ಕೂ ದಿಕ್ಕುಗಳಿಂದ ಹರಿದುಬರುವ ಮಳೆ ನೀರು ಹಾಗೂ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ಹರಿದು ಬರುವ ಕಲುಷಿತ ನೀರು ನೇರವಾಗಿ…

Read More

ಹೊಸಂಗಡಿಯಲ್ಲಿ ‘Spice -N -Ice’ ಶುಭಾರಂಭ

ಹೊಸಂಗಡಿ: ಭಾಸ್ಕರ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ ಪವನ್ ಮಂಜೇಶ್ವರ ಮಾಲೀಕತ್ವದ ‘Spice N Ice’ ಹೊಸದಾಗಿ ಶುಭಾರಂಭಗೊಂಡಿದೆ. ಸರಳ ರೀತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಭ ಹಾರೈಸುವ ಮೂಲಕ ಹೊಸ ಉದ್ಯಮಕ್ಕೆ ಚಾಲನೆ ನೀಡಲಾಯಿತು. ‘Spice N Ice’ನಲ್ಲಿ ಐಸ್‌ಕ್ರೀಂ, ಶೇಕ್ಸ್, ಫಾಲೂಡಾ, ಸ್ಯಾಂಡ್‌ವಿಚ್, ಮ್ಯಾಗಿ, ಜ್ಯೂಸ್ ಸೇರಿದಂತೆ ವಿವಿಧ ಬಗೆಯ ತಿಂಡಿ-ತಿನಿಸು ಹಾಗೂ ಪಾನೀಯಗಳು ಲಭ್ಯವಿವೆ. ಹೊಸಂಗಡಿ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ವೈವಿಧ್ಯಮಯ ಆಹಾರ ಮತ್ತು ಪಾನೀಯಗಳ ಅನುಭವ ನೀಡುವ ಉದ್ದೇಶದಿಂದ ‘Spice N Ice’ ಆರಂಭಿಸಲಾಗಿದೆ….

Read More

ಮಂಜೇಶ್ವರ ಬ್ಲಾಕ್ ಪಂ.ನಲ್ಲಿ ಏಕದಿನ ತರಬೇತಿ ಶಿಬಿರ

ಮಂಜೇಶ್ವರ ಉದ್ಯೋಗಕ್ಕಾಗಿ ಅಲೆದಾಡುವ ಬದಲು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಯುವಕರು ಮೊದಲ ಆದ್ಯತೆ ನೀಡಬೇಕೆಂಬ ಉದ್ದೇಶದೊಂದಿಗೆ ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಲು ಆಸಕ್ತಿ ಹೊಂದಿರುವವರಿಗೂ, ಈಗಾಗಲೇ ನಡೆಸುತ್ತಿರುವ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವವರಿಗೂ ಸರ್ಕಾರದಿಂದ ಲಭ್ಯವಾಗುವ ವಿವಿಧ ಆರ್ಥಿಕ ನೆರವುಗಳು, ಸಾಲಗಳು, ಸಬ್ಸಿಡಿಗಳು ಹಾಗೂ ಇತರ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲು ಮಂಜೇಶ್ವರ ಬ್ಲಾಕ್ ಪಂಚಾಯತ್ ವತಿಯಿಂದ ಏಕದಿನ ತರಬೇತಿ ಶಿಬಿರ ಆಯೋಜಿಸಲಾಯಿತು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕುಚ್ಚಿಕ್ಕಾಡ್ ರವರ…

Read More

ಉದ್ಯಾವರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

ಉದ್ಯಾವರ: ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಉದ್ಯಾವರ್ ಸರ್ಕಾರಿ ಪ್ರೌಢಶಾಲೆಯ 2026–27ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಉತ್ಸಾಹಭರಿತ ಚಾಲನೆ ದೊರೆಯಿತು. ಸೆಪ್ಟೆಂಬರ್ 18 ಮತ್ತು 19ರಂದು ನಡೆಯಲಿರುವ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ಬೆಳಿಗ್ಗೆ 9.30ಕ್ಕೆ ಶಾಲಾ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೀಬಾ ಬಿ. ಕ್ರೀಡಾಕೂಟವನ್ನು ಉದ್ಘಾಟಿಸಿದರು. PTA ಅಧ್ಯಕ್ಷ ರಹೀಂ ಪುಚ್ಚತ್ತ್‌ವಯಲ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಕಾರ್ಯದರ್ಶಿ ಜಯರಾಜ್ ಸರ್ ಸ್ವಾಗತಿಸಿದರು….

Read More

ಗಣೇಶೋತ್ಸವ ಮೆರವಣಿಗೆಗೆ ಆಟೋ ಚಾಲಕರಿಂದ ತಂಪು ಪಾನೀಯ ಸೇವೆ

ಮಂಜೇಶ್ವರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಜೇಶ್ವರ ಇದರ 46ನೇ ವರ್ಷದ ಗಣೇಶೋತ್ಸವದ ಜಲಸ್ಥಂಭನ ಮೆರವಣಿಗೆ ಮಂಜೇಶ್ವರ ತಲುಪಿದ ಸಂದರ್ಭದಲ್ಲಿ ಮಾನವೀಯತೆ ಹಾಗೂ ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ನಡೆಯಿತು. ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪದ ಆಟೋ ಚಾಲಕರ ಸಂಘದ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ತಂಪು ಪಾನೀಯ ವಿತರಿಸಲಾಯಿತು. ಸುಮಾರು 2 ಸಾವಿರಕ್ಕೂ ಅಧಿಕ ಗ್ಲಾಸ್ ಪಾನೀಯ ವಿತರಿಸಿ ಆಟೋ ಚಾಲಕರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು ಹಾಗೂ ಸಾರ್ವಜನಿಕರಿಗೆ ಯಾವುದೇ ಭೇದಭಾವವಿಲ್ಲದೆ ಪಾನೀಯ ವಿತರಿಸುವ…

Read More

ಮಂಜೇಶ್ವರದಲ್ಲಿ ಗಣೇಶೋತ್ಸವ ಶೋಭಾಯಾತ್ರೆಗೆ ಕಾಂಗ್ರೆಸ್ ಸಮಿತಿಯಿಂದ ಆತ್ಮೀಯ ಸ್ವಾಗತ

​ಮಂಜೇಶ್ವರ: ಗಣೇಶೋತ್ಸವದ ಅಂಗವಾಗಿ ವಿಸರ್ಜನೆಗಾಗಿ ಸಮುದ್ರದತ್ತ ತೆರಳುತ್ತಿದ್ದ ಭಕ್ತಾದಿಗಳ ಶೋಭಾಯಾತ್ರೆಗೆ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆತ್ಮೀಯ ಸ್ವಾಗತ ಕೋರಿ, ಸಿಹಿ ಪಾನೀಯ ವಿತರಿಸಲಾಯಿತು. ನಾಡಿನ ಸೌಹಾರ್ದತೆ, ಸಹೋದರತೆ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ​ಜಾತಿ-ಮತ ಭೇದವಿಲ್ಲದೆ ಪ್ರತಿಯೊಬ್ಬರೂ ಒಂದಾಗಿ ಆಚರಿಸುವ ಇಂತಹ ಹಬ್ಬಗಳು ನಮ್ಮ ಒಗ್ಗಟ್ಟು ಮತ್ತು ಸಾಮಾಜಿಕ ಐಕ್ಯತೆಯ ಸಂಕೇತವಾಗಿವೆ ಎಂದು ಸಂಘಟಕರು ತಿಳಿಸಿದರು. ಈ ಸ್ವಾಗತ ಕಾರ್ಯಕ್ರಮದಲ್ಲಿ ಮಂಜೇಶ್ವರದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ…

Read More

ಮಂಜೇಶ್ವರದಲ್ಲಿ ವೈಭವದ ಗಣೇಶೋತ್ಸವ: ಮಹಾಗಣಪತಿ ಜಲಸ್ಥಂಭನ ಮೆರವಣಿಗೆ

ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ 46ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿ ದೇವರ ಜಲಸ್ಥಂಭನ ಮೆರವಣಿಗೆ ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು. ಗಣಹೋಮ , ಭಜನೆ ಹಾಗೂ ವಿಶೇಷ ಸಂಗೀತ ಸ್ವರ ಸಂಗಮ ಕಾರ್ಯಕ್ರಮ ,ಧಾರ್ಮಿಕ ವಿಧಿವಿಧಾನಗಳ ಬಳಿಕ ಮಹಾಗಣಪತಿ ದೇವರ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣಪತಿಯ ನಾಮಸ್ಮರಣೆ ಮಾಡಿದರು. ಪಂಚವಾದ್ಯ , ಸ್ತಬ್ಧಚಿತ್ರಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಮಾರ್ಗದುದ್ದಕ್ಕೂ ಭಕ್ತರು…

Read More

ಉದ್ಯಾವರ ರಸ್ತೆ ಪುನರ್ನಿರ್ಮಾಣಕ್ಕೆ ಆಗ್ರಹ: ಮಂಜೇಶ್ವರ ಪಂಚಾಯತಿ ಕಚೇರಿಗೆ ಜನಕೀಯ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯ ಉದ್ಯಾವರ ನಿವಾಸಿಗಳು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಬಳಸುತ್ತಿರುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹಾನಿಗೊಳಗಾಗಿರುವುದನ್ನು ಪ್ರತಿಭಟಿಸಿ, ಉದ್ಯಾವರ ಜನಕೀಯ ವೇದಿಕೆಯ ನೇತೃತ್ವದಲ್ಲಿ ಪಂಚಾಯತಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲಾಯಿತು. ​ಪಂಚಾಯತಿ ಆಸ್ತಿಪಟ್ಟಿಯಲ್ಲಿ ಸೇರಿರುವ ಹಾಗೂ ಈ ಹಿಂದೆ ಹಲವು ಬಾರಿ ಪಂಚಾಯತಿ ಅನುದಾನ ಬಳಸಿ ನಿರ್ಮಿಸಲಾಗಿದ್ದ ಈ ರಸ್ತೆ ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆ ಪುನರ್ನಿರ್ಮಾಣಕ್ಕಾಗಿ ಹಿಂದಿನ ಆಡಳಿತ ಸಮಿತಿಯ ವಾರ್ಡ್ ಸದಸ್ಯರ ಮುತವರ್ಜಿಯಿಂದ…

Read More
error: Content is protected !!