ಅಮೇರಿಕದೊಂದಿಗಿನ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ,ಕರ್ಷಕ ಸಂಘದ ಪ್ರತಿಭಟನೆ.

ಅಮೇರಿಕದೊಂದಿಗಿನ ಭಾರತ ಒಪ್ಪಂದವನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ,ಅಮೇರಿಕ ಅಧ್ಯಕ್ಷರು ಮತ್ತು ಭಾರತ ಪ್ರಧಾನಿ ವಿರುದ್ಧ ಎಡರಂಗ ಕರ್ಷಕ ಸಂಘಟನೆಗಳ ನೇತೃತ್ವದಲ್ಲಿ ಮಂಜೇಶ್ವರ ಹೊಸಂಗಡಿ ಪೇಟೆ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕರ್ಷಕ ಸಂಘದ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದ ಪ್ರತಿಭಟನಾ ಮೆರವಣಿಗೆ ಯನ್ನು ಕಿಸಾನ್ ಸಭಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ. ಕುಂಞಿಕಣ್ಣನ್ ಉದ್ಘಾಟಿಸಿ ಮಾತನಾಡಿದರು.

ಸಿ. ಪಿ. ಐ ನೇತಾರ ರಾದ ಜಯರಾಮ ಬಳ್ಳಂಗು ಡೇಲು ಸ್ವಾಗತಿಸಿ, ನಾಯಕರಾದ ಕೆ. ಕಮಲಾಕ್ಷ, ಎಂ.ರಾಮಚಂದ್ರ, ಪ್ರಶಾಂತ್ ಕನಿಲ, ಅಹ್ಮದ್ ಹುಸೇನ್ ಮಾಸ್ಟರ್,ಬಿ.ಎಂ.ಕರುಣಾಕರ ಶೆಟ್ಟಿ, ಹರೀಶ್ ಶೆಟ್ಟಿ, ಕಡ0ಬಾರ್, ಲಾರೆನ್ಸ್, ಚನೀಯ ಕೊಮ್ಮಂಗಳ, ರಾಮಚಂದ್ರ ಟಿ., ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಕೂಳೂರು,ಪ್ರಭಾಕರ ಶೆಟ್ಟಿ , ಎಸ್. ಎಫ್. ಐ . ಕಾರ್ಯದರ್ಶಿ ರೋಷನ್ ವಿ.ವಿ. ಮೊದಲಾದವರು ನೇತೃತ್ವ ವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!