VJ SHARATH BEKUR

VJ SHARATH BEKUR

ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಹೊಸ ಸಹಾಯವಾಣಿ ಆರಂಭಿಸಿದ ನಟ ಮಮ್ಮುಟ್ಟಿ .

ತಿರುವನಂತಪುರಂ : ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳ ಸಾಗಣೆ ತಡೆಯಲು ಮಲಯಾಳಂ ಸ್ಟಾರ್ ‘ಟಾಕ್ ಟು ಮಮ್ಮುಕ್ಕ’ ಎಂಬ ನೂತನ ಸಹಾಯವಾಣಿ ಆರಂಭಿಸಿದ್ದಾರೆ.ಈ ಯೋಜನೆಯು ಕೇರಳ ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಸ್ವ ಸಹಾಯ ಇಲಾಖೆಗಳೊಂದಿಗೆ ಕುಟುಂಬಶ್ರೀ ಮಿಷನ್ ನ ಬೆಂಬಲದೊಂದಿಗೆ ಈ ಸಹಾಯವಾಣಿ ಕಾರ್ಯಾಚರಿಸಲಿದೆ. 2025 ರ ಜೂನ್ 25 ರಂದು ಫೇಸ್ಬುಕ್ ಮೂಲಕ ಈ ಯೋಜನೆಯನ್ನು ಘೋಷಿಸಲಾಯಿತು.ಈ ಯೋಜನೆಯ ಮೂಲಕ ಮಾದಕ ವ್ಯಸನದಿಂದ ಚೇತರಿಸಿಕೊಳ್ಳಲು ಕರೆ ಮಾಡುವವರು 6238877369 ಈ ನಂಬರ್ ಗೆ…

Read More

ಬಾಕುಡ ಸಮಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ತುಳಸೀದಾಸ್ ಮಂಜೇಶ್ವರ, ಪ್ರ .ಕಾರ್ಯದರ್ಶಿಯಾಗಿ ಸುಮಂಗಲ ಪೊಸೋಟು ಆಯ್ಕೆ

ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆ ಇತ್ತೀಚಿಗೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಜರಗಿತು. ಸಭೆಯನ್ನು ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶಂಕರ ಅಡ್ಕ ಉಧ್ಘಾಟಿಸಿದರು.ಸಭೆಯಲ್ಲಿ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಣೇಶ್ ಮಂಗಳೂರು ,ಅಧ್ಯಕ್ಷೆ ಶ್ರೀಮತಿ ಸುಜಾತ ಮಂಜೇಶ್ವರ , ಗೌರವಾಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ,ಕೋಶಾಧಿಕಾರಿ ಮಂಜುನಾಥ್ ಕಾರ್ಲೆ ,ರಾಮ ಕಿನ್ನಿಗೋಳಿ , ಕಾರ್ಯದರ್ಶಿ ತುಳಸೀದಾಸ್ ಮಂಜೇಶ್ವರ, , ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾದ ನವೀನ…

Read More

ಸಿಪಿಐ (ಎಂ) ಮಂಜೇಶ್ವರ ಲೋಕಲ್ ಸಮಿತಿ ನೇತೃತ್ವದಲ್ಲಿ ಯುದ್ಧ ವಿರೋಧಿ ರಾಲಿ.

ಇರಾನ್ ಇಸ್ರೇಲ್ ಯುದ್ಧ ವಿರುದ್ಧ ರಾಲಿ ಸಿಪಿಐ(ಎಂ) ಮಂಜೇಶ್ವರ ಲೋಕಲ್ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಪೇಟೆಯಲ್ಲಿ ಜರಗಿತು. ಇಸ್ರೇಲ್ ನಿರಂತರವಾಗಿ ನೆರೆ ರಾಷ್ಟ್ರಗಳನ್ನು ವಿನಾ ಕಾರಣ ಆಕ್ರಮಿಸುವ ಸಂದರ್ಭದಲ್ಲಿ ಯುದ್ಧ ಬೇಡವೇ ಬೇಡ ಎಂಬ ಘೋಷಣೆಯೊಂದಿಗೆ ಸಿಪಿಐ(ಎಂ) ಮಂಜೇಶ್ವರ ಲೋಕಲ್ ವತಿಯಿಂದ ಪ್ರತಿಭಟನಾ ಸಭೆ ಹಾಗೂ ರಾಲಿ ನಡೆಸಲಾಯಿತು. ಪ್ರತಿಭಟನಾ ರಾಲಿಯನ್ನು ಸಿಪಿಐ(ಎಂ) ಮಂಜೇಶ್ವರ ಏರಿಯಾ ಸಮಿತಿ ಸದಸ್ಯರೂ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಬೇಬಿ ಶೆಟ್ಟಿ ಉದ್ಘಾಟಿಸಿದರು. ಗಂಗಾಧರ ದುರ್ಗಿಪಳ್ಳ ಅಧ್ಯಕ್ಷತೆ ವಹಿಸಿದರು. ಸಿಪಿಐ(ಎಂ) ಮಂಜೇಶ್ವರ ಏರಿಯಾ…

Read More

ಸಂಯುಕ್ತ ಟ್ರೇಡ್ ಯೂನಿಯನ್ ಮಂಜೇಶ್ವರ ಪಂಚಾಯತ್ ಸಮಾವೇಶ ಸಮಾಪ್ತಿ.

ಸಂಯುಕ್ತ ಟ್ರೇಡ್ ಯೂನಿಯನ್ ಮಂಜೇಶ್ವರ ಪಂಚಾಯತ್ ಸಮಾವೇಶ ಹೊಸಂಗಡಿ AKG ಮಂದಿರದಲ್ಲಿ CITU ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಉದ್ಘಾಟಿಸಿದರು. AITUC ನೇತಾರ ಪ್ರದೀಸ್ ಬಡಾಜೆ ಅಧ್ಯಕ್ಷತೆ ವಹಿಸಿದ್ದರು,ಡಿ ಕಮಲಾಕ್ಷ, ಪ್ರಶಾಂತ್ ಕನಿಲ ಉಪಸ್ಥಿತರಿದ್ದರು. ಸಭೆಯು ಜುಲೈ 9 ರ ದೇಶೀಯ ಮುಷ್ಕರ ವಿಜಯಗೊಳಿಸಲು ಹಾಗೂ ಜುಲೈ 2 ರಂದು ಮಂಜೇಶ್ವರ ಪಂಚಾಯತ್ ಕಚೇರಿಗೆ ಮಾರ್ಚ್,ಮಂಜೇಶ್ವರ ರೈಲ್ವೆ ಸ್ಟೇಶನ್ ಬಳಿಯಿಂದ ಹೊಸಂಗಡಿ ವರೆಗೆ ಕಾಲ್ನಡೆ ಜಾತ ನಡೆಸಲು ಮತ್ತು ಜುಲೈ 8 ರಂದು ಹೊಸಂಗಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು…

Read More

ಮಿಯಪದವಿನಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಯೋಗ ದಿನಾಚರಣೆ.

ಮಂಜೇಶ್ವರ: ಭಾರತೀಯ ಜನತಾ ಪಾರ್ಟಿಯ ಮಂಜೇಶ್ವರ ಮಂಡಲ ಸಮಿತಿಯನ್ನು ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಯತೀರಾಜ್ ಶೆಟ್ಟಿ, ಸದಾಶಿವ ಚೇರಲ್, ಚಂದ್ರಹಾಸ ಶೆಟ್ಟಿ, ಭಾಸ್ಕರ್ ಪೊಯ್ಯೇ ನೇತೃತ್ವ ನೀಡಿದರು. ನಿವೃತ ಶಿಕ್ಷಕ ರಾದ ಶಿವಶಂಕರ ಮಾಸ್ಟರ್, ದೈಹಿಕ ಶಿಕ್ಷಕ ನಂದೇಶ ಯೋಗ ತರಗತಿ ನಡೆಸಿದರು. ಸದಾಶಿವ ಭಟ್ ತಲೆಂಗಳಅಧ್ಯಕ್ಷತೆ ವಹಿಸಿದರು.ಕೆವಿ ರಾಧಾಕೃಷ್ಣ ಸ್ವಾಗತಿಸಿ, ಶಂಕರ್ ನಾರಾಯಣ ವಂದಿಸಿದರು.

Read More

ಅಮ್ಮ ಕಲಾವಿದರ ‘ಆನ್ ಮಗೆ’ 22 ರಂದು ಆರಿಕ್ಕೋಡಿ ಕ್ಷೇತ್ರದಲ್ಲಿ ಶುಭ ಮುಹೂರ್ತ

ಮಂಜೇಶ್ವರ : ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ರಂಗ್ ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ , ಅಭಿನಯಿಸಿದ ‘ತುಳುನಾಡ ಕಲಾ ಸಿಂಧೂರ’ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚಿಸಿದ ,ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ‘ತುಳುನಾಡ ಕಲಾ ಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿ ರಾಣಿ ಅಭಿನಯಿಸುವ ಹೊಚ್ಚ ಹೊಸ ನಾಟಕ ‘ಆನ್ ಮಗೆ’ ಜುಲೈ 22 ರಂದು ಆರಿಕ್ಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಶುಭ ಮುಹೂರ್ತ…

Read More

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ: ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ, ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ. ಮಂಜೇಶ್ವರ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು,…

Read More

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ,25 ಕ್ಕೂ ಮಿಕ್ಕ ಮನೆಗಳು ಜಲಾವೃತ,ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶ

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ ಮಳೆಯಿಂದ ಸುಮಾರು 25 ಕ್ಕೂ ಮಿಕ್ಕ ಮನೆಗಳು ಜಲಾವೃತಗೊಂಡು ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶಗೊಂಡಿತ್ತು.ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಕರ ಅನಾಸ್ತವೇ ಇದಕ್ಕೆ ಮೂಲ ಕಾರಣವಾಗಿತ್ತು.ಮಂಜೇಶ್ವರ ರೈಲ್ವೇ ಹಳಿಯ ಪರಿಸರದಲ್ಲಿರುವ ಸುರುಮ ತೋಡಿನಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ತುಂಬಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಒಂದು ಗ್ರಾಮವೇ ನೆರೆ ಹಾನಿಗೊಳಗಾಗಿತ್ತು. ಇಷ್ಟೆಲ್ಲಾ ಆಗಿ ಕೂಡಾ ಪಂಚಾಯತು ಅಧಿಕಾರಸ್ಥರು…

Read More

ಯಶಸ್ವಿ ಕಲಾವಿದೆರ್ ಮಂಜೇಶ್ವರದ “ಮಂಗಳಾಗಿರಿ” ನಾಟಕಕ್ಕೆ ಶುಭ ಮುಹೂರ್ತ, ಪೋಸ್ಟ‌ರ್ ಬಿಡುಗಡೆ

ಯಶಸ್ವಿ ಕಲಾವಿದೆರ್ ಮಂಜೇಶ್ವರ ತಂಡದ 10 ನೇ ವರ್ಷದ ನಾಟಕ “ಮಂಗಳಾಗಿರಿ” ಯ ಶುಭ ಮುಹೂರ್ತ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು. ಕ್ಷೇತ್ರದ ಅರ್ಚಕರಾದ ರಾಮಚಂದ್ರ ಐತಾಳ್ ಬಡಾಜೆಯವರು ಕ್ಷೇತ್ರ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನೂತನ ನಾಟಕದ ಪೋಸ್ಟರ್ ನ್ನು ನಾಟಕದ ನಿರ್ದೇಶಕರಾದ ಎಂ.ಎಸ್ ರವಿ ವರ್ಕಾಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಯಶಸ್ವಿ ಕಲಾವಿದರು” ಸಂಸ್ಥೆಯು ಹಲವು ವರ್ಷಗಳಿಂದ…

Read More

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ BKMU ವತಿಯಿಂದ ಬ್ರಹತ್ ಮಾರ್ಚ್ ಹಾಗೂ ಧರಣಿ.

ಕೃಷಿ ಕಾರ್ಮಿಕರಿಗಾಗಿ ಸಮಗ್ರ ರಾಷ್ಟ್ರೀಯ ಕಾನೂನು ಜಾರಿಗೆ ತರಬೇಕು,ಭೂರಹಿತರಿಗೆ ಭೂಮಿ ಮಂಜೂರು ಮಾಡಬೇಕು,ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ರೂ. 6,000ಕ್ಕೆ ಹೆಚ್ಚಿಸಿ ಜಾತಿ ಗಣತಿ ಜಾರಿಗೊಳಿಸಿ ಖಾಸಗಿ ವಲಯದಲ್ಲಿ ಎಸ್.ಸಿ, ಎಸ್.ಟಿ, ಓ.ಬಿ.ಸಿ ಮೀಸಲಾತಿ ಜಾರಿಗೆ ತರಬೇಕು,ಉದ್ಯೋಗ ಖಾತರಿ ಯೋಜನೆಯನ್ನು ನಾಶ ಮಾಡುವ ಕೇಂದ್ರ ಸರಕಾರದ ಪ್ರಯತ್ನಗಳನ್ನು ಕೊನೆ ಗೊಳಿಸಿ ಕೆಲಸದ ದಿನಗಳು ಮತ್ತು ವೇತನವನ್ನು ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೃಷಿ ಕಾರ್ಮಿಕ ರ ಯೂನಿಯನ್ (BKMU) ವತಿಯಿಂದಕೇರಳದ 140 ವಿಧಾನ ಸಭಾ ವ್ಯಾಪ್ತಿಯ ಕೇಂದ್ರ ಸರಕಾರಿ…

Read More
error: Content is protected !!