ರೌಡಿಶೀಟರ್ ಟೊಪ್ಪಿ ನೌಫಲ್ ಹತ್ಯೆ ಪ್ರಕರಣದ ಸುತ್ತ ನೂರಾರು ಅನುಮಾನದ ಹುತ್ತ
ಮಂಗಳೂರು: ಉಪ್ಪಳ ರೈಲ್ವೆ ಗೇಟ್ ಬಳಿ ನಿಗೂಢವಾಗಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ರೌಡಿಶೀಟರ್ ಬಜಾಲ್ ನಿವಾಸಿ ಟೊಪ್ಪಿ ನೌಫಲ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆತನ ಶವವನ್ನು ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಣೋತ್ತರ (ಪೋಸ್ಟ್ ಮಾರ್ಟಂ) ಪರೀಕ್ಷೆ ನಡೆಸಿ ಶವವನ್ನು ಮೃತನ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮೂಲಗಳ ಪ್ರಕಾರ ಟೊಪ್ಪಿಯ ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳು ಕಂಡು ಬಂದಿರುವುದರಿಂದ ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ, ಪೊಲೀಸರು ಅನುಮಾನಿಸಿದ್ದಾರೆ. ಶವದ ಪ್ಯಾಂಟ್…