ಕಮ್ಯುನಿಸ್ಟ್ ಚಿನ್ನ ಕಳ್ಳರ ಸಂತೆ : ಬಿಜೆಪಿ
ಚಿನ್ನ ಕಳ್ಳ ಸಾಗಾಟ ಕಮ್ಯುನಿಸ್ಟ್ ಪಕ್ಷದ ಕುಲಕಸುಬು, ಆಡಳಿತ ಬಲ ಉಪಯೋಗಿಸಿ ಶಬರಿಮಲೆ ಸನ್ನಿದಿಯಲ್ಲಿಯೇ ಚಿನ್ನ ಕಳ್ಳ ಸಾಗಾಟ ಕ್ಕೆ ಸಾಥ್ ನೀಡಿರುವಾಗ ಪಿನರಾಯಿ ಸರಕಾರ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಸಭೆ ವರ್ಕಾಡಿ ಕಚೇರಿ ಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿಯ ಸ್ಥಳೀಯಡಳಿತ…