ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ವೃದ್ಧ ಮಹಿಳೆಯರ ಆಧಾರ್ ಅಳಿಕೆ: ಸ್ಪಷ್ಟನೆ ಇಲ್ಲದೆ ಅನುಮಾನಕ್ಕೆ ಎಡೆ — ಬಿ. ನವೀನ್ ಚಂದ್ರ ಪೂಜಾರಿ
ಮಂಗಳೂರು:ಕರ್ನಾಟಕ ರಾಜ್ಯದಾದ್ಯಂತ 12 ಲಕ್ಷಕ್ಕಿಂತಲೂ ಮೇಲ್ಪಟ್ಟು ವೃದ್ಧ ಮಹಿಳೆಯರ ಆಧಾರ್ ಕಾರ್ಡ್ ಅಳಿಸಿ ಹೋಗಿದ್ದು ಅಧಿಕಾರಿಗಳಲ್ಲಿ ಕಾರಣ ಕೇಳಿದಾಗ ಸರಿಯಾದ ಉತ್ತರವೂ ದೊರಕದೆ ಇರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷರಾದ ಬಿ ನವೀನ್ ಚಂದ್ರ ಪೂಜಾರಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ಸಮಸ್ಯೆಯ ಬಗ್ಗೆ ಈ ಹಿಂದೆ ಅಧಿಕಾರಿಗಳ ಗಮನವನ್ನು ಸೆಳೆಯಲಾಗಿತ್ತು. ಅರ್ಜಿಯನ್ನು ಡಿಸಿ ಆಫೀಸಿಯಲ್ಲಿ ಕೊಟ್ಟು ಆದಮೇಲೆ…