ಸತ್ಯಸಾಯಿ ಬಾಬಾ ರ ಶತಾಬ್ದಿ ಯಂದು ಬೆಳಕು ಕನ್ನಡ ಸಂಘದ ಭಿತ್ತಿ ಪತ್ರ ಮತ್ತು ಹಸ್ತಪ್ರತಿ ಬಿಡುಗಡೆ
ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನಲ್ಲಿ ಸತ್ಯ ಸಾಯಿ ಬಾಬಾರವರ ನೂರನೇ ಜನ್ಮ ದಿನೋತ್ಸವದಂದು ಕನ್ನಡ ಮಕ್ಕಳ ಹಸ್ತಪ್ರತಿ “ಬೆಳಕು”ಮತ್ತು ಭಿತ್ತಿ ಪತ್ರ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಗೊಂಡಿತು. “ಬೆಳಕು” ಕನ್ನಡ ಸಂಘ ದ ಭಿತ್ತಿ ಪತ್ರವನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸತ್ಯಸಾಯಿ ಸೇವಾ ಟ್ರಸ್ಟ್ ಬಾಯಾರು ಇದರ ಉಪಾಧ್ಯಕ್ಷರಾದ ಪೆಲತಡ್ಕ ರಾಮಕೃಷ್ಣ ಭಟ್ ಇವರ ದಿವ್ಯ ಹಸ್ತದಿಂದ ಅನಾವರಣಗೊಂಡಿತು.ವಿದ್ಯಾರ್ಥಿಗಳ ಕಿರುಚಿತ್ರ ಇದೇ ಸಂಧರ್ಭದಲ್ಲಿ ಬಿಡುಗಡೆಗೊಂಡಿತು. ನಗರ ಸಂಕೀರ್ತನೆ ,ಶುಚಿತ್ವ ನಂತರ,ಸಾಯಿಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಸಾಯಿ ಸಂದೇಶ…