ಭಾರೀ ಗಾಳಿಗೆ ಭಾರೀ ಗಾತ್ರದ ಮಾವಿನ ಮರ ಧಾರಾಶಾಯಿ

ಐನೂರು ವರ್ಷಗಳ ಇತಿಹಾಸ ಸಾರುವ ಪಾವೂರು ಪೊಯ್ಯ “ಕಟ್ಟೆಜಾತ್ರೆ” (ದೊಂಪದ ಜಾತ್ರೆ) ನಡೆಯುವ ಬೃಹತ್ ‘ಮಾವಿನ ಮರ’ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಧಾರಾಶಾಯಿ, ಮಂಜೇಶ್ವರ: “ಕಟ್ಟೆ ಜಾತ್ರೆ” (ದೊಂಪದ ಜಾತ್ರೆ) ನಡೆಯುವ ಇತಿಹಾಸ ಸಾರುವ ಕಟ್ಟೆಯ ಬೃಹತ್ ಮಾವಿನ ಮರವೊಂದು ಇಂದು ಅಪರಾಹ್ನ 3 ಗಂಟೆಗೆ ಬೀಸಿದ ಭಾರಿ ಗಾಳಿಗೆ ಧಾರಾಶಾಯಿಯಾದ ಘಟನೆ ಮಂಜೇಶ್ವರ ಪಾವೂರಿನಲ್ಲಿ ನಡೆದಿದೆ. ಇಲ್ಲಿನ ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ ಆದಿಸ್ಥಳದ ಕಟ್ಟೆಯಲ್ಲಿರುವ ಬೃಹತ್ ಮಾವಿನ ಮರವೊಂದು ಮಧ್ಯಭಾಗದಿಂದಲೇ…

Read More

ವರ್ಕಾಡಿಯಲ್ಲಿ ನಡೆದ ಭೀಬತ್ಸ ಘಟನೆ :ಬೆಂಕಿ ಹಚ್ಚಿ ತಾಯಿಯನ್ನು ಕೊಂದ ಮಗ, ನೆರೆಮನೆಯ ಮಹಿಳೆಗೂ ಗಂಭೀರ

ರಾತ್ರಿ ಹೊತ್ತು ಮನೆಯಲ್ಲಿ ಮಲಗಿದೆ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ ನೆರೆಮನೆಯ ಮಹಿಳೆ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಕಾಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ಡಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿಧ್ಧಾನೆ. ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಜೂನ್ 26 ಗುರುವಾರ ಮುಂಜಾನೆ ಈ ಘಟನೆ…

Read More

ವಯನಾಡು ಚೂರುಲ್ ಮಲೆಯಲ್ಲಿ ಮತ್ತೆ ವರುಣನ ರುದ್ರ ನರ್ತನ.ಶಾಶ್ವತ ಪರಿಹಾರಕ್ಕೆ ನಾಗರಿಕರ ಆಗ್ರಹ

ತಿರುವನಂತಪುರಂ : ಕಳೆದ ಬಾರಿ ಸುರಿದ ಕುಂಭ ದ್ರೋಣ ಮಳೆಗೆ ಇಡೀ ಮನುಕುಲವನ್ನೇ ಹೃದಯ ವಿದ್ರಾವಾಹಕ ಸನ್ನಿವೇಶಕ್ಕೆ ತಂದೊಡ್ಡಿದ್ದ ವಯನಾಡು ಜಿಲ್ಲೆಯ ಚೂರುಲ್ ಪೇಟೆಯ ಗುಡ್ಡ ಜರಿತ ಪ್ರದೇಶದಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಮತ್ತೆ ಅದೇ ಸ್ಥಿತಿ ಉಂಟಾಗಿದ್ದು ,ಶಾಶ್ವತ ಪರಿಹಾರಕ್ಕೆ ನಾಗರಿಕರು ಸರಕಾರಕ್ಕೆ ಒತ್ತಾಯ ಪಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದ ಅಪಾರವಾದ ನಾಶ ನಷ್ಟ ಉಂಟಾಗಿದ್ದು ,ಸ್ಥಳೀಯರನ್ನು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಸ್ಥಳಕ್ಕಾಗಮಿಸಿದ ದುರಂತ ಪರಿಹಾರ ಸ್ಪೆಷಲ್ ಆಫೀಸರ್ ಹಾಗೂ ಜಿಲ್ಲಾಧಿಕಾರಿಯವರಲ್ಲಿ…

Read More

ಅನ್ವರ್ ಯು ಡಿ ಎಫ್ ಪ್ರವೇಶ ಕ್ಕೆ ಹಸಿರು ನಿಶಾನೆ.

‘ಯಾವ ಕೀಲಿ ಕೈ ಯಿಂದ, ಬಾಗಿಲು ಮುಚ್ಚಲಾಗಿದೆಯೋ, ಅದೇ ಕೀಲಿ ಕೈಯಿಂದ ಬಾಗಿಲು ತೆರೆಯಲು ಸಾಧ್ಯವಿದೆ”: ಸನ್ನಿ ಜೋಸೆಫ್. ತಿರುವನಂತಪುರಂ. ತೀವ್ರ ಕುತೂಹಲ ಕೆರಳಿಸಿದ ನಿಲಂಬುರ್ ಉಪಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ದ್ರುವೀಕರಣ ಆಗುವ ಸಾಧ್ಯತೆಗಳಿದ್ದು ಮುಂಬರುವ ಸ್ಥಳೀಯಾಡಳಿತ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಪಿ ಬಿ ಅನ್ವರ್ ಪಡೆದ ಮತಗಳಿಕೆಯ ಅಂಕಿ ಅಂಶಗಳು ನೂತನ ರಾಜಕೀಯ ದ್ರುವೀಕರಣಕ್ಕೆ ಕಾರಣವಾಗುತ್ತಿದೆ. ಅನ್ವರ್ ರನ್ನು UDFತೆಕ್ಕೆಗೆ ಸೇರಿಸಿಕೊಂಡು ಮುಂಬರುವ…

Read More

ಬದುಕಿಗೆ ಮುಳುವಾಯಿತೇ ಬಣ್ಣ – 19 ರಲ್ಲೇ ಜೀವನ ಅಂತ್ಯಗೊಳಿಸಿದ ವಿದ್ಯಾರ್ಥಿನಿ

ಮಂಜೇಶ್ವರ : ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಬಗ್ಗೆ ತಲಪಾಡಿಯ ಕಿನ್ಯದಿಂದ ವರದಿಯಾಗಿದೆ.ಶ್ರೇಯಾ (19) ಸಾವನ್ನಪ್ಪಿದ ದುರ್ದೈವಿ.ಎಂದು ಗುರುತಿಸಲಾಗಿದೆ. ಶ್ರೇಯಾ ಓದಿನ ಒತ್ತಡ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಶ್ರೇಯಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಆಕೆಯನ್ನು ಕಪ್ಪು ಎಂದು ಅವಮಾನಿಸುತ್ತಿದ್ದ ಬಗ್ಗೆ ಬರೆದಿದ್ದಾಳೆ. ಅಲ್ಲದೇ, ಮೇ ತಿಂಗಳಿನಲ್ಲಿ ಶ್ರೇಯಾ ಬರೆದಿರುವ ಡೆತ್ ನೋಟೊಂದು ಸಿಕ್ಕಿದೆ. ನನ್ನನ್ನು ಯಾರೂ ಪ್ರೀತಿಸುವುದಿಲ್ಲ. ನಾನು ಬದುಕಬಾರದು, ಮನೆಯವರಿಗೆ ಕಷ್ಟವಾಗುತ್ತದೆ ಎಂದು ಬರೆದಿದ್ದಾಳೆ. ಮನೆಯ…

Read More

ಬಾಕುಡ ಸಮಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ತುಳಸೀದಾಸ್ ಮಂಜೇಶ್ವರ, ಪ್ರ .ಕಾರ್ಯದರ್ಶಿಯಾಗಿ ಸುಮಂಗಲ ಪೊಸೋಟು ಆಯ್ಕೆ

ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆ ಇತ್ತೀಚಿಗೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಜರಗಿತು. ಸಭೆಯನ್ನು ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶಂಕರ ಅಡ್ಕ ಉಧ್ಘಾಟಿಸಿದರು.ಸಭೆಯಲ್ಲಿ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಣೇಶ್ ಮಂಗಳೂರು ,ಅಧ್ಯಕ್ಷೆ ಶ್ರೀಮತಿ ಸುಜಾತ ಮಂಜೇಶ್ವರ , ಗೌರವಾಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ,ಕೋಶಾಧಿಕಾರಿ ಮಂಜುನಾಥ್ ಕಾರ್ಲೆ ,ರಾಮ ಕಿನ್ನಿಗೋಳಿ , ಕಾರ್ಯದರ್ಶಿ ತುಳಸೀದಾಸ್ ಮಂಜೇಶ್ವರ, , ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾದ ನವೀನ…

Read More

ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ರಂಗದ ಮುಂದಾಳು ತುಳಸಿದಾಸ್ ಮಂಜೇಶ್ವರ-ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ

ಮಂಜೇಶ್ವರ: ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ರಂಗದ ಮುಂದಾಳು ತುಳಸಿದಾಸ್ ಮಂಜೇಶ್ವರ ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ಸಂಜೆ ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆದ ಬಾಕುಡ ಸಮಾಜದ ಕೇಂದ್ರ ಸಮಿತಿಯ ಸಭೆಯಲ್ಲಿ ಸಮಾಜದ ಹಿರಿಯರ ಸಮಕ್ಷಮದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡು, ಅಧಿಕಾರವನ್ನ ಪಡಕೊಂಡರು. ತುಳಸಿದಾಸ್ ಮಂಜೇಶ್ವರ್ ರವರು ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ಉದ್ಯೋಗಿಯಾಗಿದ್ದು, ಮಂಜೇಶ್ವರ ಚೌಕಿಯಲ್ಲಿರುವ ಬ್ರೈಟ್ ಆರ್ಟ್ಸ್ & ಸ್ಪೋರ್ಟ್ಸ್ ಸೋಶಿಯಲ್ ವೆಲ್ವೇರ್ ಕ್ಲಬ್ಬಿನ ಮಾಜಿ…

Read More

ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆ ಯನ್ನು ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇಲ್ಲಿ ಆಚರಿಸಲಾಯಿತು ಯೋಗ ಶಿಕ್ಷಕ ಶ್ರೀ ಪ್ರವೀಣ್ ಪ್ರಥ್ವಿ ಯೋಗ ಕೇಂದ್ರ ಪ್ರತಾಪನಗರ ಇವರು ಯೋಗದ ಬಗ್ಗೆ ಮಾಹಿತಿ ನೀಡಿ ಯೋಗಾಭ್ಯಾಸ ನಡೆಸಿದರು. ಧಾರ್ಮಿಕ ಮುಖಂಡ ಶ್ರೀ ದಾಸಪ್ಪ ಸಾಮಾನಿ ಕಯ್ಯಾರು ಇವರು ಶುಭಸಂಸಾಸನೆ ಗೈದರು ಭಜನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ದುರ್ಗಾ ಶಕ್ತಿ ಕುಣಿತ ಭಜನಾ…

Read More

ಅಂತರರಾಷ್ಟ್ರೀಯ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಿದ ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರು

ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರು ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಶಿಸ್ತಿನೊಂದಿಗೆ ಹಾಗೂ ಭಾವಪೂರ್ಣವಾಗಿ ಆಚರಿಸಲಾಯಿತು. ಬೆಳಿಗ್ಗೆ ಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಯು ಸಂಘಟಿತವಾಗಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಯೋಗಾಸನ ಭಾರತ್ ಜಿಲ್ಲಾ ಅಧ್ಯಕ್ಷರಾದ ಶ್ರೀ ರವಿಶಂಕರ ನೇಗಲಾಗುಳಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅವರು ಯೋಗದ ಮಹತ್ವ, ದೈನಂದಿನ ಜೀವನದಲ್ಲಿ ಯೋಗಾಭ್ಯಾಸದ ಉಪಯೋಗ ಹಾಗೂ ಆರೋಗ್ಯಕ್ಕೆ ನೀಡುವ ಅನನ್ಯ ಸಹಕಾರದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ವಿವರಿಸಿದರು. ಕಾರ್ಯಕ್ರಮವು ವೇದ ಮಂತ್ರದೊಂದಿಗೆ ಪ್ರಾರ್ಥನೆಯ ಮೂಲಕ ಶುರುವಾಯಿತು….

Read More

ಅಂತರರಾಷ್ಟ್ರೀಯ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಿದ ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರು

ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರು ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಶಿಸ್ತಿನೊಂದಿಗೆ ಹಾಗೂ ಭಾವಪೂರ್ಣವಾಗಿ ಆಚರಿಸಲಾಯಿತು. ಬೆಳಿಗ್ಗೆ ಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಯು ಸಂಘಟಿತವಾಗಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಯೋಗಾಸನ ಭಾರತ್ ಜಿಲ್ಲಾ ಅಧ್ಯಕ್ಷರಾದ ಶ್ರೀ ರವಿಶಂಕರ ನೇಗಲಾಗುಳಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅವರು ಯೋಗದ ಮಹತ್ವ, ದೈನಂದಿನ ಜೀವನದಲ್ಲಿ ಯೋಗಾಭ್ಯಾಸದ ಉಪಯೋಗ ಹಾಗೂ ಆರೋಗ್ಯಕ್ಕೆ ನೀಡುವ ಅನನ್ಯ ಸಹಕಾರದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ವಿವರಿಸಿದರು. ಕಾರ್ಯಕ್ರಮವು ವೇದ ಮಂತ್ರದೊಂದಿಗೆ ಪ್ರಾರ್ಥನೆಯ ಮೂಲಕ ಶುರುವಾಯಿತು….

Read More
error: Content is protected !!