ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ ₹30 ಲಕ್ಷ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ ಸುಮಾರು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ಮುಂದುವರಿದ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಅದರ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಈ ಕಾಮಗಾರಿಗೆ ಅನುದಾನವನ್ನು ಹೊಂದಿಸಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿದು ಎಲ್ಲರ ಉಪಯೋಗಕ್ಕೆ ಬಳಕೆಯಾದರೆ ಸಂತೋಷವೆಂದರು.

ಈ ಸಂದರ್ಭದಲ್ಲಿ ಸ್ಥಳೀಯ ನಿಕಟಪೂರ್ವ ಮ.ನ.ಪಾ ಸದಸ್ಯರಾದ ಶ್ರೀಮತಿ ಶಕೀಲಾ ಕಾವ, ಶಕ್ತಿಕೇಂದ್ರ ಅಧ್ಯಕ್ಷರಾದ ವೆಂಕಟೇಶ್, ಹರೀಶ್ ಕಾಮತ್, ರಮೇಶ್ ಮುಂಡಾಣ, ಮೋಹನ್ ಪೂಜಾರಿ, ನಿತಿನ್ ಕುಮಾರ್,ಪ್ರವೀಣ್ ನಿಡ್ಡೇಲ್, ಭಾಸ್ಕರಚಂದ್ರ ಶೆಟ್ಟಿ, ಪುರುಷೋತ್ತಮ್ ಶೆಣೈ, ಡಾ. ಸುಧೀಶ್ ರಾವ್, ಸಂತೋಷ್ ಕುಮಾರ್, ರಶ್ಮಿ ಪಿ, ಬಾಲಕೃಷ್ಣ ಶೆಟ್ಟಿ, ಲೋಕೇಶ್, ವರುಣ್ ಅಂಬಟ್, ಕಮಲಾಕ್ಷಿ ಗಂಗಾಧರ ಕದ್ರಿ, ಚೇತನ ನರೇಂದ್ರ, ರಾಮಚಂದ್ರ ದಂಡಕೇರಿ, ನರಸಿಂಹ ಗೌಡ, ಮೋಹನ, ಸವಿತಾ, ಕೆ.ಬಾಲಕೃಷ್ಣ ಶೆಟ್ಟಿ, ನಿರ್ಮಲ, ಯಶೋಧ, ಉಷಾ, ವಿಜಯ ಶೆಣೈ, ರಮೇಶ್ ಮುಂಡಾಣ, ಚಿನ್ನಪ್ಪ, ಪುಷ್ಪ, ಗುಣವತಿ, ಪ್ರಭಾಕರ್, ಚಂದ್ರಾವತಿ, ಲಕ್ಷ್ಮಿ, ಲಲಿತ, ಮಚ್ಚು, ಮೋಹಿನಿ, ಜಯಂತಿ, ಯಮುನಪ್ಪ, ಉಷಾ ಶೆಟ್ಟಿ, ಸುರೇಶ್ ಶೆಟ್ಟಿ, ನಮಿತಾ, ದುರ್ಗಮ್ಮ ವಾರ್ಡಿನ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!