ಮಂಗಳೂರು ಫಿಸಿಯೋಕಾನ್-2026 ಸಮಾರೋಪ — ಜಾಗತಿಕ ಬೇಡಿಕೆ ಹೆಚ್ಚುತ್ತಿರುವ ಕ್ಷೇತ್ರ

ಮಂಗಳೂರು,
ಫಿಸಿಯೋಥೆರಪಿ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಹಾಗೂ ನವೀನತೆಯ ಮೂಲಕ ಮಹತ್ವದ ಸಾಧನೆ ಸಾಧ್ಯವೆಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಸೌತ್ ಕೆನರಾ ಫಿಸಿಯೋಥೆರಪಿ ಟೀಚರ್ಸ್ ಎಸೋಸಿಯೇಶನ್ ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್-2026’ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಫಿಸಿಯೋಥೆರಪಿಗೆ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.

ಮೂರು ದಶಕಗಳ ಹಿಂದೆ ಈ ಕ್ಷೇತ್ರಕ್ಕೆ ಆಸಕ್ತಿ ಕಡಿಮೆಯಾಗಿದ್ದರೂ, ಇದೀಗ ವಿಶ್ವಾದ್ಯಂತ ಪ್ರಮುಖ ಶಿಕ್ಷಣ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ತಮ್ಮ ಆರೋಗ್ಯ ಸಚಿವರ ಅವಧಿಯಲ್ಲಿ ರಾಜ್ಯದ ಮೊದಲ ಸರಕಾರಿ ಫಿಸಿಯೋಥೆರಪಿ ಕಾಲೇಜು ಆರಂಭಿಸಿದ ಕುರಿತು ಕೂಡ ಅವರು ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ, ಡಾ. ಯು.ಕೆ. ಮೋನು, ವಸಂತ ಹೊರಟ್ಟಿ, ಡಾ. ಅಬ್ದುಲ್ ಶಕೀಲ್, ಡಾ. ಸುರೇಶ್ ಬಾಬು ರೆಡ್ಡಿ, ಡಾ. ಸಾಯಿ ಕುಮಾರ್ ಎನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!