ನಗರದ ಹೃದಯ ಭಾಗದಲ್ಲಿ ಮತ್ತೆ ಕಲಶ ಸ್ಥಾಪನೆ

ಮಂಗಳೂರು: ಮಹಾವೀರ ವೃತ್ತದಲ್ಲಿ ಮೇಲ್ಸ್ತುವೆ ಕಾಮಗಾರಿ ಹಿನ್ನಲೆ ತೆರವುಗೊಳಿಸಿದ್ದ ಭಾರಿ ಗಾತ್ರದ ‘ಕಲಶ’ದ ಆಕೃತಿಯನ್ನು ಮರುಸ್ಥಾಪಿಸಲಾಗುತ್ತಿದ್ದು, ಸೋಮವಾರ ರಾತ್ರಿ ಪೀಠದ ಮೇಲೆ ತಂದಿರಿಸಲಾಗಿದೆ. ಪಂಪ್‌ವೆಲ್ ಗೆ 2003ರಲ್ಲಿ ಬೃಹತ್ ಕಲಶವಿಟ್ಟು ಮಹಾವೀರ ಸರ್ಕಲ್ ನಾಮಕರಣ ಮಾಡಲಾಗಿತ್ತು.

ಮಂಗಳೂರು ಜೈನ್‌ ಸೊಸೈಟಿ ಇದರ ಉಸ್ತುವಾರಿ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮೇತುವೆಯು ಈ ವೃತ್ತದ ಮೇಲೆಯೇ ಹಾದು ಹೋಗಿದ್ದು, ಅದರ ಕಾಮಗಾರಿ ಸಲುವಾಗಿ 2016ರ ಮಾರ್ಚ್‌ನಲ್ಲಿ ಕಲಶವನ್ನು ತೆರವುಗೊಳಿಸಲಾಗಿತ್ತು. ಈಗ ಮೇಲ್ವೇತುವೆ ಪಕ್ಕದಲ್ಲಿ ಕಲಶಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ವೃತ್ತಾಕಾರದ ಪೀಠವನ್ನು ರಚಿಸಿ, ಅದರ ಮೇಲೆ ಕಲಶದ ಆಕೃತಿಯನ್ನು ಮರುಸ್ಥಾಪಿಸಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!