ಮಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಸಮಿತಿ ರಾಜ್ಯಾದ್ಯಂತ ಯುವ ಸಮುದಾಯದ ಭವಿಷ್ಯ, ಆರೋಗ್ಯ ಮತ್ತು ಸಾಮರ್ಥವನ್ನು ಬಲಪಡಿಸುವ ಗಂಭೀರ ಜವಾಬ್ದಾರಿಯೊಂದಿಗೆ ವಿನಾಶಕಾರಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಮಹತ್ವಾಕಾಂಕ್ಷಿ ಪ್ರಯತ್ನದೊಂದಿಗೆ – “ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ” -ಸ್ತಬ್ಧಚಿತ್ರ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸಲಿದ್ದು ಡಿ 25 ಬೆಳಗ್ಗೆ 9.00 ಗಂಟೆಗೆ ಮಂಗಳೂರಿಗೆ ಸ್ತಬ್ದಚಿತ್ರ ಹೊತ್ತ ರಥವು ಬರಲಿದೆ ಎಂದು ಕಾರ್ಯಕ್ರಮದ ಸಂಚಾಲಕರು , ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ ಶಾಖೆ ಇದರ ಸಭಾಪತಿಗಳಾದ ಸಿ ಎ ಶಾಂತರಾಮ್ ಶೆಟ್ಟಿ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೈಸೂರಿನಲ್ಲಿ ಉದ್ಘಾಟನೆಗೊಂಡ ಬಳಿಕ ಸ್ತಬ್ಧಚಿತ್ರ ಹೊತ್ತ ರಥವು 45 ದಿನಗಳ ಕಾಲ 18 ಜಿಲ್ಲೆಗಳು ಮತ್ತು ಬೆಂಗಳೂರು ಮಹಾ ನಗರದಲ್ಲಿ ಸಂಚರಿಸಿ ವಿವಿಧ ನಗರ, ಪಟ್ಟಣಗಳಲ್ಲಿ ಜನಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಿದೆ. ಮಂಗಳೂರಿನಲ್ಲಿ 25. 26 ಮತ್ತು 27 ಡಿಸೆಂಬರ್ ರಂದು ನಗರದ ಆಯ್ದ 4 ಕೇಂದ್ರಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ. ನಂತರ ಅಂತಿಮ ಸಮಾರೋಪ ಜನವರಿ 19 ರಂದು ಬೆಂಗಳೂರಿನಲ್ಲಿ ಜರುಗಲಿದೆ ಎಂದರು .
ದೇಶದ ಬಲಿಷ್ಠ ಶಕ್ತಿಯಾದ ಯುವಕರನ್ನು ಮಾದಕ ಡ್ರಗ್ಸ್ ಮೂಲಕ ದಾರಿತಪ್ಪಿಸಿ, ನಿಶ್ಯಕ್ತರನ್ನಾಗಿಸುವ ದುಷ್ಕೃತ್ಯದ ವಿರುದ್ಧ ಸಮಾಜದ ಪ್ರತಿಯೊಬ್ಬ ನಾಗರಿಕ ಎಚ್ಚರಿಕೆಯಿಂದ ಮುಂದಡಿ ಇಡಬೇಕಿರುವ ಅಗತ್ಯವನ್ನು ಮನಗಾಣಿಸುವ ಉದ್ದೇಶದಿಂದ ಈ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸ್ವಸ್ತಿಕ್ ನ್ಯಾಷನಲ್ ಬುಸಿನೆಸ್ ಸ್ಕೂಲ್ ಅಧ್ಯಕ್ಷರಾದ ಡಾ ರಾಘವೇಂದ್ರ ಹೊಳ್ಳ , ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ ಮುರಳಿ ಮೋಹನ್ ಚುಂತಾರ್ , ಶಕ್ತಿ ಎಜುಕೇಶನ್ ಟ್ರಸ್ಟ್ ಇದರ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಮುಂತಾದವರು ಉಪಸ್ಥಿತರಿದ್ದರು
Win88apps, downloading now, hoping to win! Wish me luck, guys! Try those apps: win88apps