ಮಂಜೇಶ್ವರ: ಎ.ಕೆ.ಪಿ.ಎ (AKPA) ಕುಂಬ್ಳೆ ವಲಯದ ಆಭಿಮುಖದಡಿಯಲ್ಲಿ ಐಡಿ ಕಾರ್ಡ್ ವಿತರಣೆ ಮತ್ತು ಇಫ್ತಾರ್ ಕಾರ್ಯಕ್ರಮವನ್ನು ಮಾರ್ಚ್ 18 ರಂದು ಹೊಸಂಗಡಿಯ ಅಲೋರ್ ಪಾರ್ಟಿ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಲಯದ ಅಧ್ಯಕ್ಷರಾದ ಕರೀಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷರಾದ ಸುಗುಣನ್ ಇರಿಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಜಿತ್ ಮತ್ತು ಇನ್-ಚಾರ್ಜ್ ಮನು ಎಲ್ಲೋರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊಸ ಸದಸ್ಯರಾದ ದೀಪಕ್, ಕಲರ್ ಜಯಪ್ರಕಾಶ್ ಮತ್ತು ವಿನ್ಸನ್ ಕಯ್ಯಾರ್ ಅವರಿಗೆ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ಇದೇ ವೇಳೆ ಕುಂಬ್ಳೆ ವಲಯದಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್ ಸದಸ್ಯತ್ವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಉಪ್ಪಳ ಘಟಕವನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ವೇಣುಗೋಪಾಲ್ ಸ್ವಾಗತಿಸಿದರು ಮತ್ತು ಖಜಾಂಚಿ ನವೀನ್ ಕುಂಬ್ಳೆ ವಂದಿಸಿದರು. ವಲಯದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಇಫ್ತಾರ್ ಕೂಟವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದರು.