ಮಂಜೇಶ್ವರ: ಕೊಡ್ಲಮೊಗರಿನಲ್ಲಿ ಮನೆಯೊಳಗೆ ಯುವಕನೊಬ್ಬ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೊಡ್ಲಮೊಗರು ಪಳ್ಳದ ಪಡ್ಪು ಬೀಡು ನಿವಾಸಿ ಶೇಖರ ಬೆಲ್ಚಾಡ ಎಂಬವರ ಪುತ್ರ ಭರತ್ (24) ಸಾವನ್ನಪ್ಪಿದ ದುರ್ದೈವಿ.
ಬಾನುವಾರ ಬೆಳಿಗ್ಗೆ ಮನೆಯವರು ದೇವಸ್ಥಾನಕ್ಕೆ ತೆರಳಿ ಮರಳಿ ಬರುತ್ತಿರುವ ಮಧ್ಯೆ ಭರತ್ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಸ್ಥಳೀಯರು ಸಾವಿನಲ್ಲಿ ನಿಗೂಢತೆ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಶವದ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಮರಣೋತ್ತರ ಪರೀಕ್ಷಾ ವರದಿ ಬಳಿಕ ಸತ್ಯಾಂಶ ಹೊರ ಬರಲಿದೆ. ಈ ಘಟನೆಯ ಹಿಂದೆ ಬೇರೇನಾದರೂ ಕಾರಣಗಳಿದ್ದರೆ ಅಥವಾ ಯಾರಾದರೂ ಈ ದುರಂತಕ್ಕೆ ಕಾರಣರಾಗಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.